ಅಕ್ರಮ ಸಾಗಾಟ: ಸ್ಫೋಟಕ ವಸ್ತು ವಶ
Team Udayavani, Oct 7, 2017, 12:14 PM IST
ಕಾರ್ಕಳ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕ ವಸ್ತುಗಳನ್ನು ಶುಕ್ರವಾರ ಬಜಗೋಳಿ ರಸ್ತೆ ಬಳಿ ಪೊಲೀಸ್ ವೃತ್ತ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಗೋಪಿ. ಬಿ ಮತ್ತು ತ್ರಿಮೂರ್ತಿ ಬಂಧಿತರು.
ಸಾಣೂರು ಗ್ರಾಮದ ಶ್ರೀಲಕ್ಷ್ಮೀ ದೇವಿ ಕಲ್ಯಾಣ ಮಂಟಪದ ಎದುರು ಕಾರ್ಕಳ ಬಜಗೋಳಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ ಕಾರಿನ ಢಿಕ್ಕಿ ಒಳಗೆ ಕೆಲವೊಂದು ರಾಸಾಯನಿಕ ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ವ್ಯಕ್ತಿಗಳು ಮುಂಜಾಗ್ರತೆಯನ್ನು ವಹಿಸದೆ, ಪರವಾನಿಗೆಯನ್ನು ಹೊಂದದೇ ಸ್ಫೋಟಕ ಸಾಗಾಟ ಮಾಡುತ್ತಿದ್ದರು ಆರೋಪಿಗಗಳಿಂದ ಒಟ್ಟು 22,000 ರೂ. ಮೌಲ್ಯದ ಸ್ಫೋಟಕ ವಸ್ತುಗಳನ್ನು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.