ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ
Team Udayavani, Oct 7, 2017, 12:22 PM IST
ಹಳೆಯಂಗಡಿ: ಸಸಿಹಿತ್ಲು-ಕದಿಕೆಯ ನಡುವೆ ನಿರ್ಮಾಣಗೊಂಡಿರುವ ನೂತನ ಸೇತುವೆಯಿಂದ ಅಪರಿಚಿತ ಯುವಕನೋರ್ವ ಗುರುವಾರ ನಂದಿನಿ ನದಿಗೆ ಹಾರಿದ್ದು, ಆತನ ಶವ ಶುಕ್ರವಾರ ಮುಂಜಾನೆ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆ ಸೇತುವೆಯಿಂದ ಹಾರುತ್ತಿರುವುದನ್ನು ಸ್ಥಳೀಯ ಮಹಿಳೆಯೋರ್ವರು ಕಂಡಿದ್ದರಿಂದ ಸ್ಥಳೀಯರು ಹಾಗೂ ಮೂಲ್ಕಿ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿ ಹಿಂದಿರುಗಿದ್ದರು. ಶುಕ್ರವಾರ ಯುವಕನ ಶವ ಸೇತುವೆಯ ಅಡಿಯಲ್ಲಿಯೇ ಪತ್ತೆಯಾಗಿ ಅದನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲೆತ್ತಲಾಗಿದೆ. ಇದೀಗ ಆತನ ಪರಿಚಯಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಶವದ ಗುರುತು ಪತ್ತೆಗಾಗಿ ಮನವಿ: ಸುಮಾರು 35ರ ಹರೆಯದ 5.5 ಅಡಿ ಎತ್ತರದ ಯುವಕನ ಶವದ ಮೈಮೇಲೆ ಉದ್ದತೋಳಿನ ಕ್ರೀಮ್ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಕಪ್ಪು ಬೆಲ್ಟ್ ಇದೆ. ದೇಹದ ಬಲ ಭಾಗದಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಗಾಯದ ಗುರುತು ಇದೆ. ಶರ್ಟ್ನ ಕಾಲರ್ನಲ್ಲಿ ನಟರಾಜ ರೋಡ್ ಶಿರಸಿ ಎಂದು ಟೆ„ಲರ್ನ ಲೇಬಲ್ ಇದೆ. ಶವವನ್ನು ಮಂಗಳೂರಿನ ವೆನಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಈ ವ್ಯಕ್ತಿಯ ಬಗ್ಗೆ ತಿಳಿದವರು ಮೂಲ್ಕಿ ಪೊಲೀಸ್ ಠಾಣೆಯನ್ನು (0824-2290533) ಸಂಪರ್ಕಿಸಲು ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!
ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ