ಪ್ರಶಾಂತ್‌ ಚೋಪ್ರಾ: ಹುಟ್ಟುಹಬ್ಬದಂದೇ ತ್ರಿಶತಕ!


Team Udayavani, Oct 8, 2017, 7:00 AM IST

PRASHANTH-CHOPRA.jpg

ಧರ್ಮಶಾಲಾ: ಕ್ರಿಕೆಟಿಗನೊಬ್ಬನ ಹುಟ್ಟುಹಬ್ಬಕ್ಕೆ ತ್ರಿಶತಕಕ್ಕಿಂತ ಮಿಗಿಲಾದ ಉಡುಗೊರೆ ಖಂಡಿತ ಇರಲಿಕ್ಕಿಲ್ಲ. ಈ ಭರ್ಜರಿ ಉಡುಗೊರೆಯೊಂದು ಹಿಮಾಚಲ ಪ್ರದೇಶದ ಆರಂಭಕಾರ ಪ್ರಶಾಂತ್‌ ಚೋಪ್ರಾ ಪಾಲಾಗಿದೆ. ಶನಿವಾರ “25ನೇ ಬರ್ತ್‌ಡೇ’ಯಂದೇ ಅವರು ಪಂಜಾಬ್‌ ವಿರುದ್ಧದ ರಣಜಿ ಪಂದ್ಯದಲ್ಲಿ 338 ರನ್‌ ಬಾರಿಸಿ ಮಿಂಚಿದರು.

ಚೋಪ್ರಾ ಸಾಹಸದಿಂದ ಹಿಮಾಚಲ 8ಕ್ಕೆ 729 ರನ್‌ ಬಾರಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಜವಾಬಿತ್ತ ಪಂಜಾಬ್‌ 2ನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 110 ರನ್‌ ಮಾಡಿದೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ರಣಜಿ ಪಂದ್ಯದ ಮೊದಲ ದಿನ ಪ್ರಶಾಂತ್‌ ಚೋಪ್ರಾ 271 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ದ್ವಿತೀಯ ದಿನ ತ್ರಿಶತಕದ ಅಭಿಯಾನವನ್ನು ಪೂರ್ತಿಗೊಳಿಸಿದರು. ಆದರೆ ಭಾರತ “ಎ’ ತಂಡಕ್ಕೆ ಆಯ್ಕೆಯಾಗಿರುವ ಚೋಪ್ರಾ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜನ್ಮದಿನದಂದೇ ತ್ರಿಶತಕ ಹೊಡೆದ ಕೇವಲ 3ನೇ ಅದೃಷ್ಟಶಾಲಿ ಪ್ರಶಾಂತ್‌ ಚೋಪ್ರಾ. 2ನೇ ಭಾರತೀಯನೂ ಹೌದು. 1932ರ ಡಿ. 24ರಂದು ಎಂಸಿಸಿ ಪರ ಆಡುತ್ತಿದ್ದ ಕಾಲಿನ್‌ ಕೌಡ್ರಿ ಸೌತ್‌ ಆಸ್ಟ್ರೇಲಿಯ ವಿರುದ್ಧ 307 ರನ್‌ ಹೊಡೆದಿದ್ದರು. ಬಳಿಕ ಈ ಸಾಲಿಗೆ ಸೇರ್ಪಡೆಗೊಂಡವರು ಭಾರತದ ರಮಣ್‌ ಲಾಂಬಾ. ದಿಲ್ಲಿ ಪರ ರಣಜಿ ಪಂದ್ಯ ಆಡುತ್ತಿದ್ದ ಲಾಂಬಾ 1995ರ ಜ. 2ರಂದು ಹಿಮಾಚಲ ಪ್ರದೇಶ ವಿರುದ್ಧ 312 ರನ್‌ ಬಾರಿಸಿದ್ದರು. 
ಈ ಇನ್ನಿಂಗ್ಸ್‌ ವೇಳೆ ಪ್ರಶಾಂತ್‌ ಚೋಪ್ರಾ ನಿರ್ಮಿಸಿದ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖೀಸಲಾಗಿದೆ.

ಚೋಪ್ರಾ ಶುಕ್ರವಾರ 271 ರನ್‌ ಮಾಡಿ ಅಜೇಯರಾಗಿ ಉಳಿದಿದ್ದರು. ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ಮೊದಲ ದಿನದಾಟದಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 1935ರಲ್ಲಿ ಇಂಡಿಯನ್‌ ಯುನಿವರ್ಸಿಟಿ ಒಕೇಶನಲ್ಸ್‌ ಪರ ಆಡುತ್ತಿದ್ದ ವಜೀರ್‌ ಅಲಿ “ವಿಕೆರಾಯ್ಸ ಇಲೆವೆನ್‌’ ವಿರುದ್ಧ ಅಜೇಯ 268 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ದಿನದಾಟವೊಂದರಲ್ಲಿ ದಾಖಲಾದ 2ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. 1948-49ರ ರಣಜಿ ಪಂದ್ಯದ 2ನೇ ದಿನದಾಟದಲ್ಲಿ ಬಿ.ಬಿ. ನಿಂಬಾಳ್ಕರ್‌ 277 ರನ್‌ ಬಾರಿಸಿದ್ದು ದಾಖಲೆ.

ಚೋಪ್ರಾ ಅವರ 338 ರನ್‌ 363 ಎಸೆತಗಳಲ್ಲಿ ಬಂತು. ಇದರಲ್ಲಿ 44 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು. ಚೋಪ್ರಾ ಭಾರತದ ಪ್ರಥಮ ದರ್ಜೆ ಇನ್ನಿಂಗ್ಸ್‌ ಒಂದರಲ್ಲಿ ಸರ್ವಾಧಿಕ ಬೌಂಡರಿ ಹೊಡೆದ 4ನೇ ಬ್ಯಾಟ್ಸ್‌ಮನ್‌. ಉಳಿದ ಮೂವರೆಂದರೆ ಕೇದಾರ್‌ ಜಾಧವ್‌ (54), ಲಕ್ಷ್ಮಣ್‌ (52) ಮತ್ತು ಸಂಜಯ್‌ ಮಾಂಜ್ರೆàಕರ್‌ (50 ಬೌಂಡರಿ).

ಚೋಪ್ರಾ ಹಿಮಾಚಲ ಪ್ರದೇಶ ಪರ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. 1999-2000ದ ಋತುವಿನಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ರಾಜೀವ್‌ ನಯ್ಯರ್‌ 271 ರನ್‌ ಬಾರಿಸಿದ ದಾಖಲೆ ಮುರಿಯಲ್ಪಟ್ಟಿತು.

ಇದು ರಣಜಿ ಇತಿಹಾಸದ 41ನೇ ತ್ರಿಶತಕ ಪ್ಲಸ್‌ ಸಾಧನೆ, 10ನೇ ಅತೀ ಹೆಚ್ಚಿನ ವೈಯಕ್ತಿಕ ಗಳಿಕೆ. ಚೋಪ್ರಾ 36ನೇ ತ್ರಿಶತಕವೀರ. ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್‌ ಖತಿಯವಾರ್‌ ತಂಡದ ವಿರುದ್ಧ ಅಜೇಯ 443 ರನ್‌ ಬಾರಿಸಿದ್ದು ದಾಖಲೆ. 

ಚೋಪ್ರಾ ಪಂಜಾಬ್‌ ವಿರುದ್ಧ ಅತ್ಯಧಿಕ ರನ್‌ ಬಾರಿಸಿದ ಕ್ರಿಕೆಟಿಗನಾಗಿಯೂ ಮೂಡಿಬಂದರು. ಕಳೆದ ರಣಜಿ ಋತುವಿನಲ್ಲಿ ಗುಜರಾತ್‌ನ ಪ್ರಿಯಾಂಕ್‌ ಪಾಂಚಾಲ್‌ ಅಜೇಯ 314 ರನ್‌ ಹೊಡೆದ ದಾಖಲೆ ಪತನಗೊಂಡಿತು.

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.