ರಾಜಣ್ಣನ ಪ್ರೀತಿಯ ಕಪಾಲಿ ಇನ್ನು ನೆನಪು


Team Udayavani, Oct 13, 2017, 6:00 AM IST

Kapali-Theater,-Bangalore,.jpg

ಬೆಂಗಳೂರು: ಏಷ್ಯಾದ ಅತೀ ದೊಡ್ಡ ಚಿತ್ರಮಂದಿರ ಎಂದು ಖ್ಯಾತಿ ಗಳಿಸದ್ದ ಬೆಂಗಳೂರಿನ ಕಪಾಲಿ ಚಿತ್ರಮಂದಿರವು ಇನ್ನು ನೆನಪಷ್ಟೇ. ಬುಧವಾರ ರಾತ್ರಿ ಪ್ರದರ್ಶನವಾದ “ಹುಲಿರಾಯ’ ಚಿತ್ರವೇ, ಈ ಚಿತ್ರಮಂದಿರದ ಕೊನೆಯ ಚಿತ್ರ. ಸದ್ಯದಲ್ಲೇ ಈ ಚಿತ್ರಮಂದಿರವನ್ನು ಒಡೆಯಲಿದ್ದು, ಇಲ್ಲಿ ಒಂದು ಬೃಹತ್‌ ಮಾಲ್‌ ತಲೆ ಎತ್ತಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಚಿತ್ರರಂಗಕ್ಕೂ, ಕಪಾಲಿ ಚಿತ್ರಮಂದಿರಕ್ಕೂ ಅವಿನಾಭಾವ ನಂಟು ಎಂದರೆ ತಪ್ಪಿಲ್ಲ. 1968ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡ ಕಪಾಲಿ ಚಿತ್ರಮಂದಿರದಲ್ಲಿ ಮೊದಲ ಚಿತ್ರವಾಗಿ ಡಾ ರಾಜಕುಮಾರ್‌ ಅಭಿನಯದ “ಮಣ್ಣಿನ ಮಗ’ ಪ್ರದರ್ಶನವಾಗಿತ್ತು. ಅದೇ ಆ ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನಗೊಂಡ ಮೊದಲ ಚಿತ್ರವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಸಾವಿರಾರು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದವು. 1465 ಆಸನಗಳಿದ್ದ ಈ ಬೃಹತ್‌ ಚಿತ್ರಮಂದಿರವು ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬೇರೆ ಚಿತ್ರಮಂದಿರದಲ್ಲಿ ನೂರು ದಿನ ಓಡುವುದೂ ಒಂದೇ, ಕಪಾಲಿಯಲ್ಲಿ 50 ದಿನ ಓಡಿದರೂ ಒಂದೇ ಎಂಬ ಮಾತು ಚಿತ್ರರಂಗದಲ್ಲಿ ಜನಜನಿತವಾಗಿತ್ತು.

ಹಲವು ವೈಶಿಷ್ಟéಗಳ ಚಿತ್ರಮಂದಿರ: ಡಾ. ರಾಜಕುಮಾರ್‌ ಅಭಿನಯದ “ಚಲಿಸುವ ಮೋಡಗಳು’, “ಹೊಸ ಬೆಳಕು’, “ಭಕ್ತ ಪ್ರಹ್ಲಾದ’ ಸೇರಿದಂತೆ ಹಲವು ಚಿತ್ರಗಳು, ಕಪಾಲಿಯಲ್ಲಿ ಪ್ರದರ್ಶನ ಕಂಡಿದ್ದು ವಿಶೇಷ. ಡಾ. ರಾಜ್‌ ಅವರ ಕೊನೆಯ ಚಿತ್ರವಾದ “ಶಬ್ಧವೇಧಿ’ ಸಹ ಅಲ್ಲೇ ಬಿಡುಗಡೆಯಾಗಿತ್ತು. “ಭಕ್ತ ಪ್ರಹ್ಲಾದ’ ಪ್ರದರ್ಶನದ ಸಂದರ್ಭದಲ್ಲಿ ನೆರೆಯ ಗಂಗಾರಾಂ ಕಟ್ಟಡ ನೆಲಕ್ಕುರುಳಿದರೆ, “ಚಲಿಸುವ ಮೋಡಗಳು’ ಚಿತ್ರಕ್ಕಾಗಿ ಕಪಾಲಿ ಚಿತ್ರಮಂದಿರದೆದುರು ಬೃಹತ್‌ ಕಟೌಟ್‌ ನಿಲ್ಲಿಸಲಾಗಿತ್ತು. ಇನ್ನು “ಶಬ್ಧವೇಧಿ’ ಬಿಡುಗಡೆಯ ಸಂದರ್ಭದಲ್ಲಿ ಪ್ರದರ್ಶನದಲ್ಲಿ ಅಡಚಣೆಯುಂಟಾದಾಗ, ಸಾಕಷ್ಟು ಗಲಾಟೆಗಳಾಗಿದ್ದವು.  ಡಾ. ರಾಜಕುಮಾರ್‌ ಅಲ್ಲದೆ ಶಿವರಾಜಕುಮಾರ್‌, ರವಿಚಂದ್ರನ್‌ ಮುಂತಾದವರ ಜನಪ್ರಿಯ ಚಿತ್ರಗಳು ತೆರೆಕಂಡಿದ್ದು ಇದೇ ಚಿತ್ರಮಂದಿರದಲ್ಲಿ. ರವಿಚಂದ್ರನ್‌ ಅಭಿನಯದ “ಪ್ರೇಮ ಲೋಕ’, “ರಣಧೀರ’ ಸೇರಿದಂತೆ ಹಲವು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದವು.

ಹೆಗ್ಗಳಿಕೆಯೇ ಶಾಪವಾಯ್ತು: ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಯೇ ಕಪಾಲಿ ಚಿತ್ರಮಂದಿರಕ್ಕೆ ದೊಡ್ಡ ಶಾಪವಾಗಿತ್ತು ಎಂದರೆ ತಪ್ಪಿಲ್ಲ. ಏಕೆಂದರೆ, ಅಷ್ಟೊಂದು ಸಂಖ್ಯೆಯ ಆಸನಗಳಿರುವ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶಿಸುವುದಕ್ಕೆ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಹೆದರುತ್ತಿದ್ದರು. ಏಕೆಂದರೆ, ಎಷ್ಟೋ ಬಾರಿ ಚಿತ್ರಮಂದಿರ ತುಂಬುತ್ತಿರಲಿಲ್ಲ. ಹಾಗಾಗಿ ಚಿತ್ರಮಂದಿರ ಖಾಲಿಯಾಗಿದೆ ಎಂದು ಇತರೆ ಪ್ರೇಕ್ಷಕರಿಗೆ ಅನಿಸಬಹುದು ಎಂಬ ಕಾರಣಕ್ಕೆ ಹಲವರು ಕಪಾಲಿಯಲ್ಲಿ ತಮ್ಮ ಚಿತ್ರ ಪ್ರದರ್ಶನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಇದೇ ಕಾರಣದಿಂದ, ಕೆಲವು ವರ್ಷಗಳ ಹಿಂದೆ ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ಆಸನಗಳ ಸಂಖ್ಯೆಯನ್ನು 1100ಕ್ಕೆ ಇಳಿಸಲಾಗಿತ್ತು. ಈ ಸಂಖ್ಯೆ ಸಹ ಹೆಚ್ಚು ಎಂಬ ನಂಬಿಕೆ ಚಿತ್ರರಂಗದಲ್ಲಿತ್ತು.

ಕಳೆದ ಕೆಲವು ವರ್ಷಗಳಿಂದಿತ್ತೀಚೆಗೆ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತವಾಗುತ್ತಿರುವ ಬಗ್ಗೆ, ಆ ಜಾಗದಲ್ಲಿ ಒಂದು ಬೃಹತ್‌ ಮಾಲ್‌ ಏಳುತ್ತಿರುವ ಕುರಿತು ಸುದ್ದಿಗಳು ಬರುತ್ತಲೇ ಇದ್ದವು. ಆದರೆ, ಪ್ರದರ್ಶನ ಮುಂದುವರೆಯುತ್ತಲೇ ಇತ್ತು. ಈಗ ಗುರುವಾರ ಬೆಳಿಗ್ಗೆಯಿಂದ ಪ್ರದರ್ಶನ ಹಠಾತ್ತನೆ ನಿಂತಿದೆ. 1968ರಲ್ಲಿ ಪ್ರಾರಂಭವಾದ ಕಪಾಲಿ ಚಿತ್ರಮಂದಿರಕ್ಕೆ ಮುಂದಿನ ವರ್ಷ 50 ತುಂಬುತಿತ್ತು. ಆದರೆ, ಅದಕ್ಕೂ ಮುನ್ನವೇ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ನಿಂತಿದೆ. ಗುರುವಾರ ಅದೇ ಚಿತ್ರಮಂದಿರದಲ್ಲಿ “ಆಡೂ ಆಟ ಆಡೂ’ ಎಂಬ ಚಿತ್ರ ಪ್ರದರ್ಶನವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದರ ಪ್ರದರ್ಶನವಾಗದೇ ಇದ್ದುದರಿಂದ ಬುಧವಾರ ರಾತ್ರಿಯದ್ದೇ ಕೊನೆಯ ಪ್ರದರ್ಶನವಾಗಿದೆ.

ಟಾಪ್ ನ್ಯೂಸ್

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.