ಹಣಕ್ಕೆ ಬೇಡಿಕೆ, ಬೆದರಿಕೆ: ಆರೋಪಿ ದೋಷಮುಕ್ತ
Team Udayavani, Oct 15, 2017, 9:22 AM IST
ಕುಂದಾಪುರ: ಪತ್ರಕರ್ತನೆಂದು ಹೇಳಿ ಬೆದರಿಕೆ ಒಡ್ಡಿ ಬಲವಂತವಾಗಿ ಹಣ ವಸೂಲಿಗೆ ಪ್ರಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಾಲೂರು ಸತೀಶ್ ಅವರನ್ನು ಕುಂದಾಪುರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2012ನೇ ಜೂ. 3ರ ಸಂಜೆ 6ಕ್ಕೆ ಕೌಂಜೂರು ನಿವಾಸಿ ಗೋಪಾಲ ಬಳೆಗಾರ ಅವರಿಗೆ ವಾಲೂ¤ರು ಸತೀಶ ಅವರು ಮೊಬೈಲ್ ಮೂಲಕ ನಾನು ಪತ್ರಕರ್ತನೆಂದು ಹೇಳಿ ಬೆದರಿಕೆ ಹಾಕಿ 20 ಸಾವಿರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ಕೊಡದೇ ಇದ್ದಲ್ಲಿ ಪತ್ರಿಕೆಯಲ್ಲಿ ಮಾನಹಾನಿ ವರದಿ ಪ್ರಕಟಿಸುತ್ತೇನೆ ಎಂದವರು ಬೆದರಿಕೆ ಹಾಕಿದ್ದರು ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸತೀಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳ ಮೂಲಕ ಪ್ರಕರಣವನ್ನು ರುಜುವಾತುಪಡಿಸಲು ಅಸಾಧ್ಯವಾಗಿದೆ ಎಂದು ಹೇಳಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಆರೋಪಿ ಪರ ಕುಂದಾಪುರದ ನ್ಯಾಯವಾದಿ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.