ಮನೆ ಕೆಡವಿ ಮನ ಒಡೆವ ರಾಜಕಾರಣ: ಶಿವಳ್ಳಿ ಕಿಡಿ
Team Udayavani, Oct 16, 2017, 2:14 PM IST
ಕುಂದಗೋಳ: ಬಡವರಿಗೆ ಮನೆ ನಿರ್ಮಿಸಿ ಆಶ್ರಯ ನೀಡುವ ಮೂಲಕ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದು, ಕೆಲವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮನೆಗಳನ್ನು ಕೆಡವಿ ಮನಸ್ಸುಗಳನ್ನು ಒಡೆದು ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಶಾಸಕ ಸಿ.ಎಸ್. ಶಿವಳ್ಳಿ ಕಿಡಿಕಾರಿದರು.
ಪಟ್ಟಣದ ಕೋರ್ಟ್ ಸರ್ಕಲ್ ನಲ್ಲಿ ಜೈ ಕರ್ನಾಟಕ ಟಿಪ್ಪು ಸುಲ್ತಾನ್ ಯಂಗ್ ಕಮಿಟಿ ಹಾಗೂ ಅಂಜುಮನ್ ಕಮಿಟಿಯವರು ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಉತ್ಸವ ಹಾಗೂ ಡಾ| ಎಪಿಜೆ ಅಬ್ದುಲ್ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಅಪಾರವಾಗಿದೆ.
ಟಿಪ್ಪು ಸ್ಮಾರಕ ನಿರ್ಮಾಣ ತಡೆ ಹೋರಾಟದ ನೆಪದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ನಿಜ ಹಾವುಗಳನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿದ್ದೇನೆ. ಇಂತಹ ಕೊಳಕು ಹಾವುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕಾರ್ಯಕರ್ತರಿಗೆ ಯಾವುದೇ ಹಾವು ಮುಟ್ಟದಂತೆ ದಿನದ 24 ಗಂಟೆ ಕಾಲ ಗರುಡನಂತೆ ಕಾಯುತ್ತೇನೆ.
ಇಂದಿನಿಂದಲೇ ನಾನು ರಾಜಕೀಯ ರಣತಂತ್ರವನ್ನು ಸವಾಲಾಗಿ ಸ್ವೀಕರಿಸಿ ಪ್ರತಿ ಮನೆ ಬಾಗಿಲು ತಲುಪಿ ಅವರ ಮನಸ್ಸಿನಲ್ಲಿ ಉಳಿದು ಅವರು ನೀಡುವ ತೀರ್ಪಿಗೆ ತಲೆ ಬಾಗುತ್ತೇನೆ ಎಂದರು. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಈ ಕಾರ್ಯ ಹಮ್ಮಿಕೊಂಡಿರುವುದು ತಾಕತ್ತನ್ನು ತೋರಿಸುತ್ತದೆ.
ಹುಬ್ಬಳ್ಳಿಯಲ್ಲಿ ಮಾಡದ ಕಾರ್ಯ ನೀವು ಮಾಡುತ್ತಿರುವುದು ಶ್ಲಾಘನೀಯ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಸೇವೆ ಅಪಾರವಾಗಿದ್ದು, ನಾವು ಮಾಡಿದರೆ ದೇಶದ್ರೋಹ ಅವರು ಮಾಡಿದರೆ ದೇಶ ಪ್ರೇಮ ಎಂದು ಬಿಂಬಿಸುತ್ತಾರೆ. ನಾವು ಈ ದೇಶದಲ್ಲಿಯೇ ಪ್ರಾಣ ತ್ಯಾಗ ಮಾಡುತ್ತೇವೆ ಎಂದು ಹೇಳಿದರು.
ಶ್ರೀನಿವಾಸ ಮಾನೆ, ರಿಜ್ವಾನ್ ಅರ್ಷದ್, ಅನಿಲಕುಮಾರ ಪಾಟೀಲ, ಎಚ್.ವಿ. ಮಾಡಳ್ಳಿ ಮಾತನಾಡಿದರು. ಮೌಲಾನಾ ಸೈಯದ ನಿಸಾರಹ್ಮದ ಚಘನ ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷ ಅಜೀಜ ಕ್ಯಾಲಕೊಂಡ, ಜಿಪಂ ಸದಸ್ಯ ಉಮೇಶ ಹೇಬಸೂರ ಹಾಗೂ ಅರವಿಂದ ಕಟಗಿ, ಅಲ್ತಾಫ ಹಳ್ಳೂರ,
-ಬಸವರಾಜ ವಟವಟಿ, ಮಲ್ಲಿಕಾರ್ಜುನ ಕಿರೇಸೂರ, ಮೆಹಬೂಬ ಬೇಫಾರಿ, ದಯಾನಂದ ಕುಂದೂರ, ಎ.ಬಿ. ಉಪ್ಪಿನ, ವೆಂಕನಗೌಡ ಪೊಲೀಸ್ ಪಾಟೀಲ, ಸಕ್ರು ಲಮಾಣಿ, ಸಿದ್ದಪ್ಪ ಚೂರಿ, ರಾಯೆಸಾಬ ಕಳ್ಳಮನಿ, ಸಲೀಂ ಕ್ಯಾಲಕೊಂಡ, ಖಯಿಮ ನಾಲಬಂದ, ಹಮೀದ ಕೊಪ್ಪದ, ಸಿದ್ದಪ್ಪ ಹುಣಸಣ್ಣವರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ