ಉಲ್ಟಾ ಸಂದೇಶ ಕಳುಹಿಸಿ ವೀರೂ ಕಾಲೆಳೆದ ಸಚಿನ್!
Team Udayavani, Oct 21, 2017, 11:33 AM IST
ಮುಂಬೈ: ಇಷ್ಟು ದಿನ ತಮಾಷೆಯ ಟ್ವೀಟ್ ಮೂಲಕ ಟ್ವೀಟರ್ನಲ್ಲಿ ಬೇರೆಯವರ ಕಾಲೆಳೆಯುತ್ತಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಈಗ ತಾವೇ ಅದರ ಬಲೆಗೆ ಬಿದ್ದಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರಿಂದ ಇಂತಹದ್ದೊಂದು ಸಾಹಸ ನಡೆದಿದೆ! ತಮ್ಮ ಜನ್ಮದಿನದ ಪ್ರಯುಕ್ತ ಸಚಿನ್ ಮಾಡಿರುವ ಕಿತಾಪತಿಯಿಂದ ಸ್ವತಃ ವೀರೂ ಬೇಸ್ತುಬಿದ್ದಿದ್ದಾರೆ.
“ಟ್ವೀಟ್ ಮಾಸ್ಟರ್’ ಎಂದೇ ಖ್ಯಾತವಾಗಿರುವ ಸೆಹವಾಗ್ಗೆ ಶುಕ್ರವಾರ 39ನೇ ಜನ್ಮದಿನದ ಸಂಭ್ರಮ. ಮಾಜಿ- ಹಾಲಿ ಕ್ರಿಕೆಟಿಗರಿಂದ, ಅಭಿಮಾನಿಗಳಿಂದ, ಸ್ನೇಹಿತರಿಂದ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ, ಸೆಹವಾಗ್ ಜತೆ ಸಾಕಷ್ಟು ಏಕದಿನ ಪಂದ್ಯಗಳಲ್ಲಿ ಆರಂಭಿಕನಾಗಿಯೂ ಕಾಣಿಸಿಕೊಂಡಿದ್ದ ಸಚಿನ್ ತೆಂಡುಲ್ಕರ್ ಉಲ್ಟಾ ಅಕ್ಷರಗಳಲ್ಲಿ ಶುಭಾಶಯಕೋರಿದ್ದಾರೆ. ಇದಕ್ಕೊಂದು ವಿಶಿಷ್ಟ ಕಾರಣವೂ ಇದೆ. ಅದನ್ನು ತೆಂಡುಲ್ಕರ್ ಮಾತುಗಳಲ್ಲೇ ಕೇಳಿ.
“ವೀರೂ ಜನ್ಮದಿನದ ಶುಭಾಶಯ! ನಿಮ್ಮ ನೂತನ ವರ್ಷ ಶುಭಾರಂಭಗೊಳ್ಳಲಿ. ಅಂಗಳದಲ್ಲಿದ್ದಾಗ ನಾನೇನು ಹೇಳುತ್ತಿದ್ದೆನೋ ಅದಕ್ಕೆ ನೀವು ಉಲ್ಟಾ ಮಾಡುತ್ತಿದ್ದಿರಿ. ಈಗ ನನ್ನ ಕಡೆಯಿಂದ ಅಂಥದೇ ಒಂದು ಪ್ರಯತ್ನ…’ ಎಂದು ತೆಂಡುಲ್ಕರ್
ಬಹಳ ತಮಾಷೆಯಾಗಿ, ತಲೆಕೆಳಗಾದ ಸಂದೇಶ ರವಾನಿಸಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
MUST WATCH
ಹೊಸ ಸೇರ್ಪಡೆ
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!