ಕೃಷ್ಣನಿದ್ದಲ್ಲಿ ಜಯ-ಮಹಾಭಾರತದ ಥೀಂ


Team Udayavani, Oct 23, 2017, 9:01 AM IST

23-14.jpg

ಉಡುಪಿ: ಕೃಷ್ಣನಿದ್ದಲ್ಲಿ ಜಯ ಎನ್ನುವುದು ಮಹಾಭಾರತ ಗ್ರಂಥದ ಮುಖ್ಯ ಥೀಂ ಎಂದು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಹೇಳಿದರು. ಮಣಿಪಾಲ ವಿ.ವಿ.ಯ ಯುರೋಪಿಯನ್‌ ಸ್ಟಡೀಸ್‌ ವಿಭಾಗದ ದ್ವೆ„ತ ಫಿಲಾಸಫಿ ರಿಸೋರ್ಸ್‌ ಸೆಂಟರ್‌ ಶನಿವಾರ ಆಯೋಜಿಸಿದ ಮಹಾಭಾರತ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಅವರು ಆರಂಭದ ಉಪನ್ಯಾಸ ನೀಡಿದರು.

ಪ್ರಸ್ತುತ ಮಹಾಭಾರತದ ನಾಲ್ಕು ಮುದ್ರಿತ ಪ್ರತಿಗಳು ಲಭ್ಯ ಇದೆ. ಇವುಗಳಲ್ಲಿ ವ್ಯತ್ಯಾಸವೂ ಇದೆ. ತಪ್ಪಾಗಿ ಸೇರಿಸಿರುವುದು, ತಮಗೆ ಬೇಡವೆಂದುಕೊಂಡದ್ದನ್ನು ತೆಗೆದುಹಾಕಿದ್ದು, ಅಜ್ಞಾನದಿಂದ ತಪ್ಪು ಬರೆದದ್ದು ನಡೆದಿದೆ. ಮಧ್ವಾಚಾರ್ಯರು 700 ವರ್ಷಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಲಭ್ಯವಿದ್ದ ನೂರಾರು ಪಠ್ಯಗಳನ್ನು ಸಂಗ್ರಹಿಸಿ ಅಪೂರ್ವ ಸಂಪಾದನಾ ಕಾರ್ಯವನ್ನು ನಿರ್ವಹಿಸಿದರು ಎಂದರು.

ಮೂರು ಅರ್ಥಗಳು, ಬಹುಮುಖಗಳು
ಮನಃಶಾಸ್ತ್ರೀಯವಾಗಿ (ಸಾರ ಭಗವದ್ಗೀತೆ), ಆಸ್ತೀಕವಾದ (ಸಾರ ವಿಷ್ಣುಸಹಸ್ರನಾಮ), ಭಗವಂತನ ಮಹಿಮೆ (ಇಡೀ ಪಠ್ಯ) ಹೀಗೆ ಮೂರು ತೆರನಾಗಿ ಮಹಾಭಾರತಕ್ಕೆ ಅರ್ಥಗಳಿವೆ ಎಂದು ವ್ಯಾಸರು ಹೇಳಿದ್ದಾರೆ. ಕೃಷ್ಣನಿಗೆ   ಅನೇಕ ಆರೋಪ  ಹೊರಿಸುತ್ತಾರೆ. ಆದರೆ ಯಥಾರ್ಥ ಬೇರೆ ಇದೆ. ದ್ರೋಣಾಚಾರ್ಯರು ದಿನಕ್ಕೆ 10,000 ಜನರನ್ನು ಕೊಲ್ಲಲು ಹೊರಟಾಗ ಸುಳ್ಳು ಹೇಳಿ ಕೊಲ್ಲಿಸಲಾಯಿತು.

ಲೋಕದ ಸಜ್ಜನಿಕೆಗೆ ಯಾವುದು ಪೂರಕವೋ ಅದೇ ಸತ್ಯ ಎಂಬ ಸಂದೇಶ ಇಲ್ಲಿದೆ. ಯುದ್ಧವನ್ನು ನಿಲ್ಲಿಸಲು ಕೃಷ್ಣ ಬಹಳ ಪ್ರಯತ್ನ ಪಟ್ಟಿದ್ದ, ರಾಜಿಗೂ ಯತ್ನಿಸಿದ್ದ. ನರಕಾಸುರನ ಅಧೀನವಿದ್ದ 16,100 ಹೆಮ್ಮಕ್ಕಳನ್ನು ಬಿಡಿಸಿದಾಗ ಅವರು ತಮ್ಮ ಮನೆಯಲ್ಲಿ ಸೇರಿಸಿಕೊಳ್ಳುವುದಿಲ್ಲವೆಂದರು. ಆ ಕಾರಣ ಅವರನ್ನು ಮದುವೆಯಾಗಿ ಬೇಕಾದ ವ್ಯವಸ್ಥೆ ಮಾಡಿಸಿದ್ದ. ಕೃಷ್ಣನ ಒಂದೊಂದು ಕ್ರಿಯೆ ಹಿಂದೆ ತಣ್ತೀಜ್ಞಾನ ಅಡಗಿದೆ. ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಕಾಣುತ್ತಾನೆ ಎಂದರು.

ಗಣಿತ ಗೊಂದಲ
ರಾಮ ಒಂದೆಡೆ 13,000 ವರ್ಷ, ಇನ್ನೊಂದೆಡೆ 11,000 ವರ್ಷ ಬದುಕಿದ ಎಂದಿದೆ. ಇದು 30 ದಿನಗಳ ಲೆಕ್ಕದ ತಿಂಗಳು, 27 ದಿನಗಳ (ನಕ್ಷತ್ರಗಳ ಲೆಕ್ಕ) ತಿಂಗಳಿನ ಪ್ರಕಾರ ಎರಡೂ ಸರಿ ಎಂದು ಮಧ್ವಾಚಾರ್ಯರು ತಿಳಿಸಿದ್ದರು. ಇಂತಹ ಸಂಶೋಧನ ಚಿಂತನೆ ಅಗತ್ಯ ಎಂದು ಬನ್ನಂಜೆ ಹೇಳಿದರು. 

ಕೇಂದ್ರದ ಸಮನ್ವಯಕಾರ ಶ್ರೀನಿವಾಸ ಕುಮಾರ್‌ ಎನ್‌. ಆಚಾರ್ಯ ಸ್ವಾಗತಿಸಿ ಅರ್ಜುನ ಎಸ್‌.ಆರ್‌. ವಂದಿಸಿದರು. 

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.