ರವಿಶಂಕರ್‌ ಫ್ಯಾನ್‌ ಆಫ್ ರಾಜಕುಮಾರ್‌!


Team Udayavani, Oct 23, 2017, 6:36 PM IST

RLR-(2).jpg

ಖಳನಟ ರವಿಶಂಕರ್‌ ತೆರೆಯ ಮೇಲೆ ಎಷ್ಟು ಗಂಭೀರವಾಗಿ, ಭಯಂಕರವಾಗಿ ಕಾಣುತ್ತಾರೋ, ಅಷ್ಟೇ ಆಪ್ತವಾಗಿ, ಹಾಸ್ಯದ ಹೊನಲೆಬ್ಬಿಸುತ್ತಾರೆ. ಅನೇಕ ಚಿತ್ರಗಳಲ್ಲಿ ಹೀರೋಗಳಿಗೆ ಸಖತ್‌ ಕಿರಿಕ್‌ ಕೊಟ್ಟಿರುವ ರವಿಶಂಕರ್‌, ಬೆರಳೆಣಿಕೆ ಚಿತ್ರಗಳಲ್ಲೂ ವಿಲನ್‌ಗಳಿಗೆ ಅಷ್ಟೇ ಕ್ವಾಟ್ಲೆ ಕೊಟ್ಟಿದ್ದಾರೆ.

ಹೌದು, “ಅಧ್ಯಕ್ಷ’, “ವಿಕ್ಟರಿ’ ಬಳಿಕ ರವಿಶಂಕರ್‌ಗೆ ಮತ್ತೂಂದು ಅಂಥದ್ದೇ ಪಾತ್ರ ಸಿಕ್ಕಿದೆ. ಔಟ್‌ ಅಂಡ್‌ ಔಟ್‌ ಕಾಮಿಡಿಯಾಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರವಿಶಂಕರ್‌. ಅದು ವಿಜಯ್‌ ರಾಘವೇಂದ್ರ, ರಾಧಿಕಾ ಪ್ರೀತಿ ನಾಯಕ-ನಾಯಕಿಯರಾಗಿ ನಟಿಸಿರುವ “ರಾಜ ಲವ್ಸ್‌ ರಾಧೆ’ ಚಿತ್ರ.

ಈ ಚಿತ್ರದಲ್ಲಿ ರವಿಶಂಕರ್‌ ಅವರದು ಹೀರೋ ಹಾಗು ಆತನ ಗೆಳೆಯರಿಗೆ ಸಹಾಯ ಮಾಡುವ ಪಾತ್ರ. ಅದಷ್ಟೇ ಅಲ್ಲ, ಈ ಸಿನಿಮಾದಲ್ಲಿ ರವಿಶಂಕರ್‌ ಅವರು ಪಕ್ಕಾ ಡಾ.ರಾಜಕುಮಾರ್‌ ಅಭಿಮಾನಿಯಾಗಿ ಚಿತ್ರದಲ್ಲಿ ಮೊದಲ ಸಲ ಕಾಣಿಸಿಕೊಂಡಿದ್ದಾರೆ.

ಅವರು ಹರಿಬಿಡುವ ಮಾತುಗಳ ನಡುವೆ ಅಣ್ಣಾವ್ರ ಕೆಲ ಸಿನಿಮಾಗಳ ಡೈಲಾಗ್‌ಗಳನ್ನು ಹೇಳುವ ಮೂಲಕ ಪಕ್ಕಾ ಅಣ್ಣಾವ್ರ ಅಭಿಮಾನಿಯಾಗಿ ನಟಿಸಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೊಡ್ಡ ಫೈಟ್‌ ಸೀನ್‌ ಗಂಭೀರವಾಗಿದ್ದರೂ, ರವಿಶಂಕರ್‌ ಮತ್ತು ಅವರ ಹೀರೋ ಗೆಳೆಯರ ಎಂಟ್ರಿಯಿಂದ ಅದು ಹಾಸ್ಯಕ್ಕೆ ತಿರುಗುತ್ತದೆ.

ಆ ಫೈಟ್‌ನಲ್ಲಿ ರವಿಶಂಕರ್‌ ಅವರು ಡಾ.ರಾಜಕುಮಾರ್‌ ಅವರ ಮುಖವಾಡ ಧರಿಸಿಕೊಂಡು ರೌಡಿಗಳನ್ನು ಹಿಗ್ಗಾಮುಗ್ಗ ಥಳಿಸುತ್ತಾರೆ. ಅಷ್ಟೇ ಅಲ್ಲ, ಡಾ. ರಾಜಕುಮಾರ್‌ ಸಿನಿಮಾಗಳ ಡೈಲಾಗ್‌ ಹರಿಬಿಡುತ್ತಲೇ, ಎದುರಾಳಿಗಳನ್ನು ಎರ್ರಾಬಿರ್ರಿ ಹೊಡೆದುರುಳಿಸುತ್ತಾರೆ.

ಅವರಷ್ಟೇ ಅಲ್ಲ, ತಬಲಾ ನಾಣಿ, “ಮಜಾ ಟಾಕೀಸ್‌’ ಪವನ್‌ ಕುಮಾರ್‌, “ಕುರಿ’ ಸುನೀಲ್‌, “ಕುರಿ’ ರಂಗ ಇವರೆಲ್ಲರೂ ಶಿವರಾಜಕುಮಾರ್‌, ಸುದೀಪ್‌ ಹಾಗು ದರ್ಶನ್‌ ಅವರ ಮುಖವಾಡ ಧರಿಸಿಕೊಂಡು, ಅವರ ಚಿತ್ರಗಳ ಡೈಲಾಗ್‌ ಹರಿಬಿಡುತ್ತಲೇ ಫೈಟ್‌ ಮಾಡುತ್ತಾರೆ. ರವಿಶಂಕರ್‌ ಎಷ್ಟೋ ಚಿತ್ರಗಳಲ್ಲಿ ಹೀರೋಗಳ ವಿರುದ್ಧ ಆರ್ಭಟಿಸಿ ಹೊಡೆದಾಡುವುದನ್ನು ಕಾಣಬಹುದು.

ಆದರೆ, “ರಾಜ ಲವ್ಸ್‌ ರಾಧೆ’ ಚಿತ್ರದಲ್ಲಿ ಅವರು ನಕ್ಕು, ನಗಿಸುತ್ತಲೇ ಪೈಟ್‌ ಮಾಡಿರೋದು ವಿಶೇಷ. ಎಚ್‌.ಎಲ್‌.ಎನ್‌. ರಾಜ್‌ ಹೆಸರಘಟ್ಟ ನಿರ್ಮಾಣದ ಈ ಚಿತ್ರಕ್ಕೆ ರಾಜಶೇಖರ್‌ ನಿರ್ದೇಶಕರು. ಥ್ರಿಲ್ಲರ್‌ ಮಂಜು ಈ ಸಾಹಸ ದೃಶ್ಯವನ್ನು ನಿರ್ದೇಶಿಸಿದ್ದಾರೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.  

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.