ರಾಮಾ ರಾಮಾ ರೇ ಮೇಕಿಂಗ್‌ ಪುಸ್ತಕ ಬರಲಿದೆ


Team Udayavani, Oct 24, 2017, 10:40 AM IST

Rama-Rama-re.jpg

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡ ನೂರಾರು ಸಿನಿಮಾಗಳಿವೆ. ಆ ಪೈಕಿ ಬೆರಳೆಣಿಕೆ ಚಿತ್ರಗಳು, ಆ ಸಿನಿಮಾದ ಹುಟ್ಟು, ಪಟ್ಟ ಕಷ್ಟ ಪಡೆದ ಸಂಭ್ರಮ ಕುರಿತು ಪುಸ್ತಕ ಮೂಲಕ ಅಪರೂಪದ ವಿವರಗಳನ್ನು ದಾಖಲಿಸಿ ಬಿಡುಗಡೆ ಮಾಡಿದ್ದುಂಟು. ಅದರಲ್ಲೂ ದಶಕದ ಹಿಂದೆ ಬಂದ “ಮುಂಗಾರು ಮಳೆ’ ಚಿತ್ರ ಯಶಸ್ಸು ಕಂಡಿದ್ದೇ ತಡ, ಆ ಕುರಿತಾದ ಪುಸ್ತಕ ಬಿಡುಗಡೆಯಾಯಿತು.

ಆ ಬಳಿಕ “ಮಠ’, “ಎದ್ದೇಳು ಮಂಜುನಾಥ’ ಚಿತ್ರಗಳ ಬಗ್ಗೆಯೂ ಪುಸ್ತಕ ಹೊರಬಂತು. ಈಗ “ರಾಮಾ ರಾಮಾ ರೇ’ ಚಿತ್ರದ ಸರದಿ. ಹೌದು, ಹೊಸಬರೇ ಸೇರಿ ಮಾಡಿದ ‘ರಾಮಾ ರಾಮಾ ರೇ’ ಸಿನಿಮಾ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಆ ಸಿನಿಮಾ ಶುರುವಾಗಿದ್ದು, ಎಲ್ಲರೂ ಕಷ್ಟಪಟ್ಟಿದ್ದು, ಅನುಭವಿಸಿದ ನೋವು,ನಲಿವುಗಳ ಕುರಿತಾದ ಮೇಕಿಂಗ್‌ ಪುಸ್ತಕವೊಂದು ಹೊರಬರುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲ್ಲಿ “ರಾಮಾ ರಾಮಾ ರೇ’ ಪುಸ್ತಕ ಬಿಡುಗಡೆಯಾಗಲಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಸತ್ಯಪ್ರಕಾಶ್‌, “ನಮಗೆ ಚಿತ್ರದ ಮೇಕಿಂಗ್‌ ವೀಡಿಯೋ ಮಾಡಿ ರಿಲೀಸ್‌ ಮಾಡುವ ಆಸೆ ಇತ್ತು. ಆದರೆ, ಹಾರ್ಡ್‌ ಡಿಸ್ಕ್ ಕ್ರಾಷ್‌ ಆಗಿದ್ದರಿಂದ ಅದನ್ನು ಹೊರ ತರಲು ಆಗಲಿಲ್ಲ.

ಆದರೆ, ಚಿತ್ರಕ್ಕೆ ಕಥೆ ಹುಟ್ಟಿದ್ದು, ಚಿತ್ರಕಥೆ ಮಾಡಿದ್ದು, ಅದು ಶುರುವಾಗಿದ್ದು, ಅದಕ್ಕೊಂದು ಶೀರ್ಷಿಕೆ ಇಟ್ಟಿದ್ದು, ಎಲ್ಲರೂ ಸೇರಿ ಕಷ್ಟಪಟ್ಟು ಸಿನಿಮಾ ಮಾಡಿದ್ದರ ಮೇಕಿಂಗ್‌ ಕುರಿತು ಬರಹಗಳ ರೂಪದಲ್ಲಿ ಓದುಗರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಸದ್ಯಕ್ಕೆ ಮೂವರು ಪ್ರಕಾಶಕರು ಸಿಕ್ಕಿದ್ದಾರೆ. ಯಾರ ಬಳಿ ಪುಸ್ತಕ ಮುದ್ರಣ ಮಾಡಿಸಿ ಬಿಡುಗಡೆ ಮಾಡಬೇಕೆಂಬ ಬಗ್ಗೆ ಮಾತುಕತೆ ನಡೆಯುತ್ತಿದೆ.

ಈಗಷ್ಟೇ ಮುಖಪುಟ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು, ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಸಿದ್ದಲಿಂಗಯ್ಯ ಕಂಬಾಳು ಅವರೇ ಪುಸ್ತಕ ಬರೆದಿದ್ದಾರೆ. ಯಾಕೆಂದರೆ, ನಮ್ಮ ಬಗ್ಗೆ ನಾವೇ ಬರೆದುಕೊಳ್ಳಬಾರದು. ಅದೊಂದು ಕಾದಂಬರಿ ರೀತಿಯ ಫೀಲ್‌ ಆಗಿರಬೇಕು ಎಂಬ ಕಾರಣಕ್ಕೆ ಅವರಿಂದಲೇ ಪುಸ್ತಕ ಬರೆಸುತ್ತಿದ್ದೇವೆ. ಚಿತ್ರ ಶುರುವಾದಾಗಿನಿಂದ ರಿಲೀಸ್‌ ಆಗಿ, ಯಶಸ್ಸು ಪಡೆದವರೆಗೂ ಅಪರೂಪದ ಮಾಹಿತಿಗಳು ಇರಲಿವೆ.

ಕೊನೆಯಲ್ಲಿ ಚಿತ್ರಕಥೆ ಇರಲಿದೆ’ ಎಂದು ಹೇಳುತ್ತಾರೆ ಸತ್ಯಪ್ರಕಾಶ್‌. ಈ ಪುಸ್ತಕ ಬಿಡುಗಡೆ ಮಾಡುವ ಇನ್ನೊಂದು ವಿಶೇಷವೆಂದರೆ, ಈಗ ಚಿತ್ರ ಮಾಡಲು ಯುವ ನಿರ್ದೇಶಕರು ತುದಿಗಾಲ ಮೇಲಿದ್ದಾರೆ. ಅಂತಹವರಿಗೆ ನಿರ್ಮಾಪಕರು ಸಿಗುವುದಿಲ್ಲ. ಅವರೆಲ್ಲರೂ ಹೇಗೆ ಸಿನಿಮಾ ಮಾಡಬೇಕು ಎಂಬುದನ್ನು ಇಲ್ಲಿ ಹೇಳಹೊರಟಿದ್ದೇನೆ. ಈ ಪುಸ್ತಕದಿಂದ ಕೆಲ ಸಿನಿಪ್ರೇಮಿಗಳಿಗೆ ಅನುಕೂಲವಾದರೆ ಅಷ್ಟು ಸಾಕು’ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.