ಪ್ರಶಸ್ತಿ ನಿರಾಕರಣೆಗೆ ಸಚಿವರ ಅಸಮಾಧಾನ
Team Udayavani, Nov 2, 2017, 9:12 AM IST
ಉಡುಪಿ: ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವುದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು “ಸರಕಾರ ನೀಡಿದ ಪ್ರಶಸ್ತಿಯನ್ನು ತಿರಸ್ಕರಿಸುವುದು ಸರಿಯಲ್ಲ. ಇದು ಅವರ ಗುಣದ ಪ್ರತಿಬಿಂಬ’ ಎಂದರು. ಡಾ| ಶಾನುಭಾಗ್ ಅವರು ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಆದರೆ ಇಲಾಖೆಗಳೇ ಮಾಹಿತಿ ಸಂಗ್ರಹಿಸಿದ್ದವು ಎಂದು ಅವರು ಹೇಳಿದರು.
“ನನಗೂ ಕಾಳಜಿ ಇದೆ’
“ಹಿರಿಯ ನಾಗರಿಕರ ಸಮಸ್ಯೆ ಕುರಿತಾಗಿ ಡಾ| ಶಾನುಭಾಗ್ ಅವರು ಹೇಳಿದ್ದೇ ಎಲ್ಲವೂ ಸರಿಯಲ್ಲ. ತಂದೆ – ತಾಯಿ ಮತ್ತು ಮಕ್ಕಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಅಷ್ಟು ಸುಲಭದಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಆಸ್ತಿ ವಿಚಾರ ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದರೆ ಅದರ ಪರಿಹಾರಕ್ಕೆ ತುಂಬಾ ಸಮಯ ಬೇಕಾಗುತ್ತದೆ. 24 ಗಂಟೆಗಳಲ್ಲಿ ಪರಿಹರಿಸಿ, 12 ಗಂಟೆಯಲ್ಲಿ ಸರಿ ಮಾಡಿ ಎಂದರೆ ಮಾಡಲು ಸಾಧ್ಯವಿಲ್ಲ. ಕಂದಾಯ ಇಲಾಖೆಯಲ್ಲಿ 13-14 ವರ್ಷಗಳ ಕಡತಗಳು ಕೂಡ ಹಾಗೆಯೇ ಬಾಕಿ ಇವೆ. ತಾಳ್ಮೆ ಬೇಕು. ಡಾ| ಶಾನುಭಾಗ್ ಅವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ನಮ್ಮಿಬ್ಬರ ಮನೋಭಾವ ಕೂಡ ಒಂದೇ. ಆದರೆ ಅವರ ಮಾರ್ಗ ವೇಗದ್ದು. ನಮ್ಮದು ಸ್ವಲ್ಪ ನಿಧಾನವಾದದ್ದು. ನಾನೋರ್ವ ಜನಪ್ರತಿನಿಧಿಯಾಗಿ ಎಲ್ಲರ ಪತ್ರಗಳಿಗೂ ಉತ್ತರ ನೀಡುತ್ತೇನೆ. ಸಮಸ್ಯೆಗಳಿಗೂ ಸ್ಪಂದಿಸು ತ್ತೇನೆ’ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದ ಜತೆಯಲ್ಲಿ ಕನ್ನಡ ಧ್ವಜವನ್ನು ಕೂಡ ಹಾರಿಸಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ “ಮುಖ್ಯಮಂತ್ರಿಗಳ ನಿಲುವೇ ನನ್ನ ನಿಲುವು. ಅವರು ಬೆಂಗಳೂರಿನಲ್ಲಿ ಕನ್ನಡ ಧ್ವಜ ಹಾರಿಸಿದ್ದಾರೆ. ಜಿಲ್ಲೆಗೆ ಈ ಬಗ್ಗೆ ಆದೇಶ ಬಂದಿಲ್ಲ. ಬಂದಿದ್ದರೆ ಅಧಿಕಾರಿಗಳು ಇಲ್ಲಿಯೂ ಅದೇ ರೀತಿ ಮಾಡುತ್ತಿದ್ದರು’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ
Re Release; ಭರ್ಜರಿ ಓಪನಿಂಗ್ ಪಡೆದ ಉಪ್ಪಿ ‘ಎ’
ಪತ್ನಿ ಹತ್ಯೆಗೈದು ಶವದೊಂದಿಗೆ ಸೆಲ್ಫಿ: ಸಂಬಂಧಿಕರಿಗೆ ಫೋಟೋ ಕಳುಹಿಸಿ ತಾನೂ ನೇಣಿಗೆ ಶರಣಾದ
Gurucharan Singh: ನಾಪತ್ತೆಯಾಗಿದ್ದ ಕಿರುತೆರೆ ನಟ ಮನೆಗೆ ವಾಪಾಸ್; ಹೋಗಿದ್ದೆಲ್ಲಿಗೆ?
Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ