ಗೂಡಂಗಡಿ ತೆರವಿಗೆ ಗಡುವು
Team Udayavani, Nov 13, 2017, 10:20 AM IST
ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಲೋಕೋಪಯೋಗಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ಜೆಸಿಬಿ ಇನ್ನಿತರ ವಾಹನಗಳೊಂದಿಗೆ ರವಿವಾರ ಬೆಳಗ್ಗೆ ಮುಂದಾದಾಗ ವ್ಯಾಪಾರಿಗಳು, ವಕೀಲರು ಸೇರಿಕೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ನೂರಾರು ಪೊಲೀಸರ ಜತೆಗೂಡಿಸಿ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಇನ್ನಿತರ ವಾಹನಗಳೊಂದಿಗೆ ಲೋಕೋಪಯೋಗಿ
ಹಾಗೂ ಪಾಲಿಕೆ ಸಿಬ್ಬಂದಿ ಆಗಮಿಸಿದ್ದರು. ಒಳಾವರಣದಲ್ಲಿರುವ ಅಂಗಡಿಗಳನ್ನು ತೆಗೆಯಲಾಗುತ್ತದೆ ಎನ್ನುವ ಮುನ್ಸೂಚನೆ ಅರಿತು ಹಲವರು ಜಮಾಗೊಂಡರು ನ್ಯಾಯಾಲಯ ಪ್ರವೇಶಕ್ಕೆ ಮುಖ್ಯರಸ್ತೆಯಲ್ಲಿರುವ ಬಾಗಿಲು
ಮುಂಭಾಗದಲ್ಲಿಯೇ ವಕೀಲರು, ವ್ಯಾಪಾರಿಗಳು ಸೇರಿಕೊಂಡು ಕುಳಿತು ಪ್ರತಿಭಟನೆ ಆರಂಭಿಸಿದರಲ್ಲದೇ ಸಮಯಾವಕಾಶ ಕೇಳಿದರು. ಇದರ ನಡುವೆ ಪೊಲೀಸರ ಬಲದೊಂದಿಗೆ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಒಳಪ್ರವೇಶಕ್ಕೆ ಮುಂದಾದರು. ಈ ವೇಳೆಯಲ್ಲಿ ಪ್ರತಿರೋಧಿಸಿದವರ ಹಾಗೂ ತೆರವುಗೊಳಿಸಲು ಮುಂದಾದವರ ನಡುವೆ ಮಾತಿನ ಚಕಮಕಿ ನಡೆಯಿತು.
ಗೂಡಂಗಡಿಗಳ ತೆರವಿಗೆ ಮಾನ್ಯ ಹೈಕೋರ್ಟ್ ಸೂಚನೆಯಿದೆ. ಹೀಗಾಗಿ ಕಾರ್ಯಾಚರಣೆಗೆ ಮುಂದಾಗಲಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದದರು. ಇದಕ್ಕೆ ಎರಡು ದಿನ ಸಮಯ ಕೊಡಿ ನಾವೇ ಖಾಲಿ ಮಾಡುತ್ತೇವೆ ಎಂದು ವ್ಯಾಪಾರಿಗಳು ಅಧಿಕಾರಿಗಳಿಗೆ ಮೊರೆ ಹೋದರು. ಕೊನೆಗೆ ಸಂಜೆ ವೇಳೆ ಗಡುವು ನೀಡಿ, ಕಾರ್ಯಾಚರಣೆ ಕೈಬಿಡಲಾಯಿತು. ವಕೀಲರ ಸಂಘದ ಅಧ್ಯಕ್ಷ ಹಿರಿಯ ನ್ಯಾಯವಾದಿಗಳಾದ ಪಿ.ವಿಲಾಸಕುಮಾರ, ಪಿ.ಎಸ್.ಪಾಟೀಲ್ ಬಳಬಟ್ಟಿ, ರಮೇಶ ಕಡಾಳೆ ಸೇರಿದಂತೆ ಮುಂತಾದವರಿದ್ದರು.
ರಿಂಗ್ರೋಡ್ನಲ್ಲಿ ಜೆಸಿಬಿ ಸದ್ದು: ಕಲಬುರಗಿ ನಗರದ ರಿಂಗ್ರೋಡ್ ನಲ್ಲಿ ಒತ್ತುವರಿ ಮಾಡಿಕೊಂಡು ತಲೆ ಎತ್ತಿರುವ
ಕಟ್ಟಡಗಳನ್ನು ಹಾಗೂ ಸರ್ವಿಸ್ ರೋಡ್ ಕಬ್ಜಾ ಮಾಡಿಕೊಂಡು ಶೆಡ್ ಹಾಕಿದ್ದನ್ನು ಮಹಾನಗರ ಪಾಲಿಕೆ ಸಿಬ್ಬಂದಿ ರವಿವಾರ ಬೆಳಗ್ಗೆ ಮಿಂಚಿನ ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿದರು.
ಹಾಗರಗಾ ಕ್ರಾಸ್, ಬುಲಂದಪರ್ವೇಜ್ ಕಾಲನಿ ರೋಡ್, ಮಹ್ಮದ ರಫೀಚೌಕ್, ಕೆಸಿಟಿ ಸರ್ಕಲ್ ಮೊದಲಾದ ಕಡೆಗಳಲ್ಲಿನ ಒತ್ತುವರಿಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತೆರುವುಗೊಳಿಸಲಾಯಿತು. ಇದಲ್ಲದೇ
ನಗರದ ವಿವಿಧೆಡೆ ಜೆಸಿಬಿ ಸದ್ದು ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ