ಸುವರ್ಣ ವಿಧಾನಸೌಧ: ಮೊದಲ ದಿನ ಖಾಲಿ 


Team Udayavani, Nov 14, 2017, 6:00 AM IST

13BNP-(24).jpg

ಸುವರ್ಣ ವಿಧಾನಸೌಧ, ಬೆಳಗಾವಿ: ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೊಂದು ಪರಿಹಾರದ ರೂಪ ನೀಡುವಂಥ ತಾಣವಾದ ಬೆಳಗಾವಿ ಸುವರ್ಣಸೌಧದಲ್ಲಿ ಹೇಳಲಿಕ್ಕೂ, ಕೇಳಲಿಕ್ಕೂ ಯಾರೂ ಇಲ್ಲದೇ ಚಳಿಗಾಲದ ಅಧಿವೇಶನದ ಮೊದಲ ದಿನವೇ “ವ್ಯರ್ಥಕಲಾಪ’ದ ದೃಶ್ಯ ಕಂಡು ಬಂತು.

ಈಗಾಗಲೇ ಶಾಸಕರ ನಿರಾಸಕ್ತಿ ಈ ಹಿಂದಿನ ಅಧಿವೇಶನಗಳನ್ನು ಗಮನಿಸಿದರೆ ಸಾಬೀತಾಗುತ್ತದೆ. ಆದರೆ ಬೆಂಗಳೂರು ಬಿಟ್ಟು, “ಉತ್ತರ’ದ ಸಮಸ್ಯೆಗಳ ಮೇಲೆಯೇ ಗಮನಹರಿಸಬಹುದಾದ ಸುವರ್ಣಸೌಧದ ಕಲಾಪಕ್ಕೂ ಬಾರದೇ ಜನಪ್ರತಿನಿಧಿಗಳು ತಮ್ಮ ಅಸಡ್ಡೆಯ ಪ್ರದರ್ಶನ ನಡೆಸಿದರು. ಕೆಳಮನೆಯಲ್ಲಿ ಶಾಸಕರ ಕೊರತೆ ಕಂಡು ಬಂದರೆ, ಮೇಲ್ಮನೆಯಲ್ಲಿ ಸಚಿವರೇ ಇರಲಿಲ್ಲ!

ಬೆಳಗ್ಗೆ 11ಕ್ಕೆ ಕಲಾಪ ಆರಂಭಕ್ಕೆ ನಿಗದಿಯಾಗಿದ್ದು, 10.45ರಿಂದಲೇ ಬೆಲ್‌ ಹೊಡೆಯಲು ಶುರು ಮಾಡಲಾಯಿತು. ಆದರೆ ಯಾರೊಬ್ಬ ಶಾಸಕರೂ ಸದನದಲ್ಲಿ ಉಪಸ್ಥಿತರಿರಲೇ ಇಲ್ಲ. 11 ಗಂಟೆಗೆ ಸದನ ಆರಂಭವಾದಾಗ ಕಾಂಗ್ರೆಸ್‌ನ 10, ಬಿಜೆಪಿಯ 7 ಮತ್ತು ಜೆಡಿಎಸ್‌ನ 3 ಸದಸ್ಯರು ಮಾತ್ರ ಉಪಸ್ಥಿತರಿದ್ದರು. ಮೊದಲ ದಿನ ಸಂತಾಪಕ್ಕೆ ಕಾರ್ಯಕಲಾಪ ಸೀಮಿತವಾಗಿತ್ತಾದರೂ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲೂ ಸಹ ಸದಸ್ಯರು ಇರಲಿಲ್ಲ. ಬಳಿಕ, ಕೋರಂ ಕೊರತೆಯಿಂದ ಐದು ನಿಮಿಷಗಳ ವರೆಗೆ ಸದನವನ್ನು ಸ್ಪೀಕರ್‌ ಕೋಳಿವಾಡ ಅವರು ಮುಂದೂಡಿದರು.

ಈ ಬಾರಿ ಇದೇ ವಿಶೇಷ. ಅಧಿವೇಶನದ ಮೊದಲ ದಿನದ ಆರಂಭದ ಕಲಾಪವೇ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಮೊದಲ ದಿನವೇ ಕೋರಂ ಕೊರತೆಯಿಂದ ಕಲಾಪ ಮುಂದೂಡುವಂತಾಗಿದ್ದು ಕೂಡ ಒಂದು ದಾಖಲೆ!

ಐದು ನಿಮಿಷಗಳ ನಂತರ ಸದನ ಆರಂಭವಾದಾಗ ಉಪಸ್ಥಿತರಿದ್ದ ಸದಸ್ಯರ ಸಂಖ್ಯೆ 30. ಕಡೆಗೆ ಕೋರಂ ಸಮಸ್ಯೆ ಬಾರದ ಕಾರಣ ಕಲಾಪವನ್ನು ಆರಂಭಿಸಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಸದನದಲ್ಲಿ 55 ಸದಸ್ಯರು ಉಪಸ್ಥಿತರಿದ್ದರು. ಸಂತಾಪ ನಿರ್ಣಯದ ಸಂದರ್ಭದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಸದನದಲ್ಲಿ ಉಪಸ್ಥಿತರಿದ್ದ ಸದಸ್ಯರ ಸಂಖ್ಯೆ 130ಕ್ಕೆ ತಲುಪಿತ್ತು. ಕಾಂಗ್ರೆಸ್‌ನ 90, ಬಿಜೆಪಿಯ 25, ಜೆಡಿಎಸ್‌ನ 12, ಎಂಇಎಸ್‌ನ ಇಬ್ಬರು ಸದಸ್ಯರ ಜತೆಗೆ ರೈತಸಂಘದ ಪುಟ್ಟಣ್ಣಯ್ಯ ಸದನದಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯ ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಆ ಪಕ್ಷದ ಕೆಲವು ಶಾಸಕರು ಗೈರು ಹಾಜರಾಗಿದ್ದರು. ಉಳಿದಂತೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಿಂದ ಒಟ್ಟು 100 ಕ್ಕೂ ಹೆಚ್ಚು ಸದಸ್ಯರು ಬೆಳಗಾವಿಗೆ ಬಂದರೂ ಅಧಿವೇಶನದತ್ತ ತಲೆ ಹಾಕಲಿಲ್ಲ. ಈಗಾಗಲೇ ಶಾಸಕರು ಚುನಾವಣೆ ಮೂಡ್‌ಗೆ ತೆರಳಿರುವುದರಿಂದ ಅಧಿವೇಶನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹಿರಿಯ ಶಾಸಕರೊಬ್ಬರು ವಿಧಾನಸಭೆ ಮೊಗಸಾಲೆಯಲ್ಲಿ ಚಟಾಕಿ ಹಾರಿಸಿದರು.

ವಿಧಾನಸಭೆಯಲ್ಲಿ ಶಾಸಕರ ಟೈಮಿಂಗ್ಸ್‌
ಬೆಳಗ್ಗೆ 11 ಗಂಟೆ: 20 ಸದಸ್ಯರು
ಬೆಳಗ್ಗೆ 11.10: 30 ಸದಸ್ಯರು
ಮಧ್ಯಾಹ್ನ 12 ಗಂಟೆ: 55 ಸದಸ್ಯರು
ಮಧ್ಯಾಹ್ನ 1 ಗಂಟೆ: 130 ಸದಸ್ಯರು

ಮೇಲ್ಮನೆಯಲ್ಲಿ ಬಿಜೆಪಿ ಸಭಾತ್ಯಾಗ
ವಿಧಾನ ಪರಿಷತ್‌:
ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾಗಿದ್ದ ಸಚಿವರ ಪೈಕಿ ಬಹುತೇಕರು ಗೈರು ಹಾಜರಾಗಿದ್ದರಿಂದ ಸರ್ಕಾರದ ವಿರುದ್ಧ ಆಕ್ರೋಶಗೊಂಡು ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ನಡೆಸಿದ ಪ್ರಸಂಗ ಸೋಮವಾರ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ, ಸದನದಲ್ಲಿ ಸೋಮವಾರ ಕಡ್ಡಾಯವಾಗಿ ಹಾಜರಿರಬೇಕಿದ್ದ ಸಚಿವರ ಪಟ್ಟಿಯನ್ನು ಪ್ರದರ್ಶಿಸಿ, ಸಚಿವರ ಹೆಸರುಗಳನ್ನು ಉಲ್ಲೇಖೀಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರಗಳು, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಸರ್ಕಾರ ಅಧಿವೇಶನ ನಡೆಸುತ್ತಿದೆ.

ಆದರೆ, ಇಲ್ಲಿ ಸಚಿವರೇ ಇಲ್ಲ. ನಾವು ಯಾರಿಗೆ ಹೇಳಬೇಕು. ಸಚಿವರೇ ಇಲ್ಲ ಎಂದರೆ ನಾವ್ಯಾಕೆ ಸದನಕ್ಕೆ ಬರಬೇಕು ಎಂದು ಹರಿಹಾಯ್ದರು. ಕೆಲವರು ಇಲ್ಲೇ ಇದ್ದಾರೆ, ಉಳಿದವರು ಬರುತ್ತಾರೆ ಎಂದು ಆಡಳಿತ ಪಕ್ಷದ ಸದಸ್ಯರು ಸಮಜಾಯಿಷಿ ನೀಡಿದರಾದರೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.

ಸೋಮವಾರದ ಕಾರ್ಯಸೂಚಿ ಪಟ್ಟಿಯಂತೆ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಉತ್ತರಿಸಬೇಕಾದ ಸಚಿವರ ಪಟ್ಟಿಯಲ್ಲಿ ರಮೇಶ್‌ಕುಮಾರ್‌, ಆಂಜನೇಯ, ಯು.ಟಿ.ಖಾದರ್‌, ಉಮಾಶ್ರಿ, ಡಾ.ಶರಣಪ್ರಕಾಶ್‌ ಪಾಟೀಲ್‌, ಎಂ.ಆರ್‌.ಸೀತಾರಾಂ, ಪ್ರಿಯಾಂಕ್‌ ಖರ್ಗೆ, ರೋಷನ್‌ ಬೇಗ್‌, ತನ್ವಿರ್‌ ಸೇs…, ರಮೇಶ್‌ ಜಾರಕಿಹೊಳಿ, ವಿನಯ್‌ ಕುಲಕರ್ಣಿ, ಎ.ಮಂಜು, ರುದ್ರಪ್ಪ ಲಮಾಣಿ, ಈಶ್ವರ್‌ ಖಂಡ್ರೆ, ಎಚ್‌.ಎಂ.ರೇವಣ್ಣ, ಆರ್‌.ಬಿ. ತಿಮ್ಮಾಪುರ ಅವರ ಹೆಸರಿತ್ತು. ಆದರೆ, ಸದನ ಆರಂಭವಾದಾಗ ಆಂಜನೇಯ, ಸೀತಾರಾಂ, ಖಾದರ್‌ ಮಾತ್ರ ಇದ್ದರು.

ಟಾಪ್ ನ್ಯೂಸ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.