ಬಿದಿರು ಇನ್ನು ಮುಂದೆ ಮರವಲ್ಲ !
Team Udayavani, Nov 24, 2017, 6:00 AM IST
ಹೊಸದಿಲ್ಲಿ: ಬಿದಿರು ಮರವಲ್ಲ. ಹೀಗಾಗಿ ಇನ್ಮುಂದೆ ಮರಗಳಿಗೆ ಅನ್ವಯವಾಗುವ ಯಾವುದೇ ನಿಬಂಧನೆಗಳು ಬಿದಿರಿಗೆ ಅನ್ವಯಿಸುವುದಿಲ್ಲ!
ಹೌದು. ಇಂಥದ್ದೊಂದು ಮಹತ್ವದ ಅಧ್ಯಾದೇಶಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಬಿದಿರನ್ನು ಕಡಿಯಲು ಹಾಗೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ಇನ್ನು ಮುಂದೆ ಅರಣ್ಯ ಇಲಾಖೆಯ ಪರವಾನಿಗೆಯ ಅಗತ್ಯವಿಲ್ಲ. 1927ರ ಅರಣ್ಯ ಸಂರಕ್ಷಣೆ ಕಾಯ್ದೆಗೆ ಬಿದಿರು ಒಳಪಡುವುದಿಲ್ಲ ಎಂಬ ಅಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಅಂಕಿತ ಬಿದ್ದಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ನಿರಾಳವಾಗಿದ್ದರೆ, ಮುಂದಿನ ದಿನಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಿದಿರು ಬಳಕೆ ಸಾಧ್ಯವಾಗಲಿದೆ.
ಹೊಸ ನಿಯಮದ ಪ್ರಕಾರ ಖಾಸಗಿ ಪ್ರದೇಶದಲ್ಲಿ ಬೆಳೆದ ಬಿದಿರನ್ನು ಕಡಿಯಲು, ಬಳಸಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಿಲ್ಲ. ಆದರೆ ಖಾಸಗಿ ಜಮೀನಿನಲ್ಲಿಲ್ಲದ ಬಿದಿರು ಅರಣ್ಯ ಇಲಾಖೆಗೆ ಒಳಪಡಲಿದ್ದು, ಇದನ್ನು ಕಡಿಯಲು ಇರುವ ನಿರ್ಬಂಧ ಮುಂದುವರಿಯಲಿದೆ. ಈ ಹಿಂದೆ ಬಿದಿರನ್ನೂ ಮರ ಎಂದು ಪರಿಗಣಿಸಲಾಗಿದ್ದರಿಂದ, ಅರಣ್ಯ ಕಾಯ್ದೆಯಲ್ಲಿ ಮರಗಳಿಗೆ ಅನ್ವಯಿಸುವ ಎಲ್ಲ ನಿಬಂಧನೆಗಳು ಬಿದಿರಿಗೂ ಅನ್ವಯಿಸುತ್ತಿತ್ತು.
ರೈತರ ಆದಾಯ ಹೆಚ್ಚಳ: ಬಿದಿರಿಗೂ ರೈತರ ಆದಾಯಕ್ಕೂ ನೇರ ಸಂಬಂಧವಿದೆ. ಬಿದಿರು ಕೋಟ್ಯಂತರ ರೈತರಿಗೆ ಪರ್ಯಾಯ ಆದಾಯದ ಮೂಲ. ಇದರಿಂದ ಥರಹೇವಾರಿ ಸಾಮಗ್ರಿಗಳನ್ನು ತಯಾರಿಸಬಹುದಾಗಿದ್ದು, ರೈತರು ಬಿಡುವಿನ ಸಮಯದಲ್ಲಿ ಇದರ ಲಾಭ ಪಡೆದುಕೊಳ್ಳುತ್ತಾರೆ. ಕೃಷಿ ಸಲಕರಣೆಗಳ ತಯಾರಿಕೆಯಿಂದ ಪೀಠೊಪ ಕರಣಗಳವರೆಗೂ ಬಿದಿರು ಉಪಯುಕ್ತ. 2022ರ ವೇಳೆ ರೈತರ ಆದಾಯ ದುಪ್ಪಟ್ಟುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಉದ್ದೇಶಿಸಿದ್ದರು.
ವಿಶ್ವದಲ್ಲೇ ಅಧಿಕ: ವಿಶ್ವದಲ್ಲೇ ಅತ್ಯಧಿಕ ಪ್ರಮಾಣ ದಲ್ಲಿ ಭಾರತದಲ್ಲಿ ಬಿದಿರು ಸಂಪನ್ಮೂಲವಿದೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅರಣ್ಯ ಕಾಯ್ದೆಯಲ್ಲಿನ ಮಿತಿಯಿಂದಾಗಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ಕಚೇರಿ ಈ ವಿಷಯವನ್ನು ವಿವಿಧ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಹುಲ್ಲಿನ ಪ್ರಭೇದದ ಬಿದಿರಿನ ವಿವಿಧ ತಳಿಗಳನ್ನು ಹಲವು ರಾಜ್ಯಗಳು ಅರಣ್ಯ ಕಾಯ್ದೆ ವ್ಯಾಪ್ತಿಯಿಂದ ಹೊರಗಿಟ್ಟಿವೆ. ಆದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬಿದಿರು ಸಾಗಿಸಲು ಈಗಲೂ ಅನುಮತಿ ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ