ಸಾಮರಸ್ಯ ತ್ರಿಕರಣ ಪೂರ್ವಕ ಇರಲಿ


Team Udayavani, Nov 25, 2017, 7:46 AM IST

25-9.jpg

ಉಡುಪಿ: ಸಾಮಾಜಿಕ ಸಾಮರಸ್ಯದ ಕುರಿತು ಮಾತನಾಡಬೇಕಾದರೆ ಹಿಂದೂಗಳಲ್ಲಿ ನಾವೆಲ್ಲ ಒಂದು ಎಂಬ ಭಾವ ತ್ರಿಕರಣಪೂರ್ವಕವಾಗಿ ಇರಬೇಕು. ಮಂದಿರ, ಶ್ಮಶಾನ, ನೀರು ಎಲ್ಲರಿಗೂ ಒಂದೇ. ವ್ಯವಸ್ಥೆಯ ದೃಷ್ಟಿಯಿಂದ ಬೇರೆಯಿದ್ದರೂ ಯಾವುದಕ್ಕೂ ಯಾರಿಗೂ ನಿರ್ಬಂಧ ಸರಿಯಲ್ಲ. ಸಮಾನತೆ, ಸಾಮರಸ್ಯ, ಏಕತೆ ನಮ್ಮ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಬೇಕಾದ ಆವಶ್ಯಕತೆಯಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

ಅವರು ಶುಕ್ರವಾರ ಧರ್ಮಸಂಸದ್‌ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ರಾಮಮಂದಿರ ಹೋರಾಟ ನಿರಂತರ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಿರಂತರ ನಡೆಯಲಿದೆ. ಆದರೆ ಮಾತು, ಕೃತಿಗಳು ಹೋರಾಟಕ್ಕೆ ಅಡ್ಡಿಯಾಗದಂತಹ ನಡೆ ಅಗತ್ಯ. ಸತತ ಹೋರಾಟ ಹಾಗೂ ನಿರಂತರ ಬಲಿದಾನದ ಮೂಲಕ ರಾಮಮಂದಿರ ನಿರ್ಮಾಣ ಪ್ರಯತ್ನ ಜಾರಿಯಲ್ಲಿತ್ತು. ಕರಸೇವೆ ಕೂಡ ಮಾಡಲಾಯಿತು. ಕಾಯುವಿಕೆಗೂ ಒಂದು ಮಿತಿಯಿದೆ. ಪ್ರತಿಯೊಬ್ಬ ಕಾರ್ಯಕರ್ತನ ಮನದಲ್ಲೂ ರಾಮಮಂದಿರ ನಿರ್ಮಾಣವಾಗಬೇಕು ಎಂದಿದೆ. ಮಂದಿರ ನಿರ್ಮಾಣಾಸಕ್ತರ ಮಾತು ಹಾಗೂ ಕೃತಿ ನಮ್ಮ ಮುಂದಿನ ನಿರ್ಣಯಕ್ಕೆ ಅಡ್ಡಿಯಾಗದಿರಲಿ. ನಾವೇನು ಮಾಡಬೇಕೋ ಅದು ಮಾತ್ರ ಜನರಿಗೆ ತಲುಪಲಿ, ನಾವೇನು ಮಾಡುವುದಿಲ್ಲವೋ ಅದು ಜನರಿಗೆ ತಲುಪುವಂತಾಗುವುದು ಬೇಡ ಎಂದರು.

ಸಂಯಮ ಇರಲಿ
ಭವಾನಿ ಮಾತೆಯ ಗುಡಿಯನ್ನು ಧ್ವಂಸ ಮಾಡಿದ ಅಪlಲ್‌ ಖಾನ್‌ ವಿರುದ್ಧ ಶಿವಾಜಿ ತತ್‌ಕ್ಷಣ ಸೇಡು ತೀರಿಸದೇ ಕಾಲ ಕೂಡಿ ಬಂದಾಗ ಹೋರಾಡಿ ಸರಿಯಾದ ಶಾಸ್ತಿ ಮಾಡಿದ. ನಾವಿಂದು ಮಾಡಹೊರಟಿರುವ ಕಾರ್ಯದ ಪ್ರಾಮುಖ್ಯವನ್ನು ಅರಿತು ಮುಂದಡಿಯಿಡಿ ಎಂದರು.

ಗೋಮಾತೆಯ ರಕ್ಷಣೆ ಮಾಡಿ
ಇಂದು ದೇಶದಲ್ಲಿ ಗೋಮಾತೆಯ ರಕ್ಷಣೆ ಕಷ್ಟವಾಗುತ್ತಿದೆ. ಗೋ ಸಂವರ್ಧನೆ ಕಠಿನವಾಗುತ್ತಿದೆ. ಗೋವಿನ ಮಹತ್ವದ ಕುರಿತು ವೈಜ್ಞಾನಿಕ ಸಂಶೋಧನೆಗಳಿವೆ. ಹಿಂದೂ ಪುರಾಣ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇದಕ್ಕೆ ಪ್ರತ್ಯೇಕ ಕಾನೂನು ಇಲ್ಲದಿದ್ದರೂ ಗೋ ರಕ್ಷಣೆ ಹಿಂದೂ ಸಮಾಜದ ಆದ್ಯ ಕರ್ತವ್ಯ. ಗೋವಿನ ಮಹತ್ವದ ಸಂಶೋಧನೆಗಳ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಮೋಹನ್‌ ಭಾಗವತ್‌ ತಿಳಿಸಿದರು.

ಮತಾಂತರ ತಡೆ
ಮತಾಂತರದ ಮೂಲಕ ಹಿಂದೂ ಸಮಾಜವನ್ನು ಕುಗ್ಗಿಸುವ ಯತ್ನ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ನಮ್ಮವರ ಸಂಘಟಿತ ಮನಸ್ಸಿನಿಂದಾಗಿ ಅವರ ಪ್ರಯತ್ನ ಕೈಗೊಡುತ್ತಿಲ್ಲ. ಭಾರತ ಅಖಂಡ ಸ್ವರೂಪವನ್ನು ಕಾಣುತ್ತಾ ವಿಶ್ವಗುರುವಾಗುವ ದಿನಗಳನ್ನು ನೋಡಬೇಕಾದರೆ ನಮ್ಮಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು ಎಂದರು.

ಎಲ್ಲರೂ ಹಿಂದೂ ಸೋದರರೇ ಆಗಿದ್ದು ಅದಕ್ಕೆ ಪ್ರತ್ಯೇಕ ಘೋಷಣೆಯ ಅಗತ್ಯವಿಲ್ಲ. ಪ್ರೀತಿ, ವಾತ್ಸಲ್ಯ ಹಾಗೂ ಆದರಣೀಯ ಭಾವ ಹಳ್ಳಿಹಳ್ಳಿಗಳಲ್ಲಿ ಪ್ರತಿಯೊಬ್ಬರಲ್ಲೂ ಮೂಡಿ ಬರಬೇಕು ಎಂದು ಭಾಗವತ್‌ ತಿಳಿಸಿದರು. ಒಟ್ಟುಗೂಡಿಸಬೇಕು ಧರ್ಮ ಸಂಸದ್‌ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ವಿಹಿಂಪ ಸಮಗ್ರ ಹಿಂದೂ ಸಮಾಜವನ್ನು ಒಟ್ಟುಗೂಡಿಸಿದೆ. ಹಿಂದೂ ಧರ್ಮ ಸನಾತನವಾಗಿದ್ದು ಯಾವ ಕಾಲದಲ್ಲೂ ನಿರ್ಮೂಲವಾಗಲು, ನಿಸ್ತೇಜವಾಗಲು ಸಾಧ್ಯವಿಲ್ಲ. ಎದುರಿಸಿ ಅಳಿಯದೇ ಶಕ್ತಿಪೂರ್ಣವಾಗಿ ಬೆಳೆದು ನಿಂತಿರುವ ಮತ್ಯುಂಜಯ ಧರ್ಮ ಎಂದರು.

ಒಳಗಿನ ಶತ್ರು ನಾಶವಾಗಲಿ
ದೇಶದ ಗಡಿಯಲ್ಲಿಂದು ನಮ್ಮ ಶತ್ರುಗಳಿದ್ದಾರೆ. ಅಂತರಂಗದಲ್ಲೂ ದೇಶದ ಒಳಗೂ ಅನೇಕ ಮಂದಿ ಶತ್ರುಗಳಿದ್ದಾರೆ. ನಮ್ಮ ಪ್ರಾದೇಶಿಕವಾಗಿಯೂ ಕೂಡ ಹಿಂದೂ ಧರ್ಮಕ್ಕೆ ಸವಾಲುಗಳನ್ನು, ಸಮಸ್ಯೆಗಳನ್ನು ಒಡ್ಡುವಂತಹ ಅನೇಕ ಶತ್ರುಗಳಿದ್ದಾರೆ. ಇವರೆಲ್ಲರನ್ನೂ ಎದುರಿಸಬೇಕಾದರೆ ನಮ್ಮ ಈ ಸಂಘಟನೆ, ಸಮಾವೇಶ, ಏಕತೆಯ ಜತೆಗೆ ನಮ್ಮ ಪ್ರಾರ್ಥನೆ ಮತ್ತು ತಪಸ್ಸು ಗಟ್ಟಿಯಾಗಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.