ತೊಗರಿ ತಳಿ-ಕೃಷಿ ಪರಿಕರ ವೀಕ್ಷಿಸಿದ ಅನ್ನದಾತ


Team Udayavani, Nov 26, 2017, 10:49 AM IST

kal-2.jpg

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆರಂಭಗೊಂಡ ಮೂರು ದಿನಗಳ ಕೃಷಿ ಮೇಳದಲ್ಲಿ ಮೊದಲ ದಿನ ತೊಗರಿಯ ಜಿಆರ್‌ಜಿ-8111 ತಳಿ, ಟಿಎಸ್‌3 ಆರ್‌ ಎನ್ನುವ ತಳಿಗಳನ್ನು ಪ್ರದರ್ಶಿಸಲಾಯಿತು.

ಎರಡು ಮಳಿಗೆಯಲ್ಲಿ ತೊಗರಿ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಹಾಗೂ ಕೆವಿಕೆ ಪ್ರಾಧ್ಯಾಪಕರು ಮಾಹಿತಿ ನೀಡಿದರು. ಮೇಳದಲ್ಲಿ 110 ಮಳಿಗೆಗಳನ್ನು ಹಾಕಲಾಗಿತ್ತು. ಟ್ರ್ಯಾಕ್ಟರ್‌ ಮತ್ತು ಪುಸ್ತಕ ಹಾಗೂ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಮಳಿಗೆಯ ಪ್ರಾತ್ಯಕ್ಷಿಕೆ ಮಾದರಿಗಳಿದ್ದವು. ಬಹುತೇಕ ಮಳಿಗೆಯಲ್ಲಿ ಪ್ರಾತ್ಯಕ್ಷಿಕೆಗಳಿಗಿಂತ ಮುದ್ರಿತ ಮಾಹಿತಿ ಪತ್ರಗಳೇ ಹೆಚ್ಚಾಗಿ ಕಂಡು ಬಂದವು.

150ಕ್ಕೂ ಹೆಚ್ಚು ರೈತರು ಬಿಪಿ ಮತ್ತು ಶುಗರ್‌ ಪರೀಕ್ಷೆ ಮಾಡಿಸಿಕೊಂಡರು. ಮೇಳದಲ್ಲಿ ರೈತರಿಗೆ ಸಾವಯವ, ಕೊಟ್ಟಿಗೆ ಗೊಬ್ಬರ, ಸೋಲಾರ ಬಳಕೆ, ವಿದ್ಯುತ್‌ ಸಮಸ್ಯೆಗೆ ಪರಿಹಾರದ ಸಲಕರಣೆಗಳು ಮತ್ತು ಮೀನುಗಾರಿಕೆ, ಹೈನುಗಾರಿಕೆ, ಜಾನುವಾರು ಸಾಕಾಣಿಕೆ ಕುರಿತು ಮಾಹಿತಿ ನೀಡಬೇಕು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ದ್ವಾರದ ಬಳಿಯಲ್ಲಿ ರೈತರನ್ನು ಸೆಳೆಯಲು ಎತ್ತು, ಕುರಿ ಹಾಗೂ ಆಕಳುಗಳ ಪ್ರದರ್ಶನ ಮಳಿಗೆ ಹಾಕಲಾಗಿತ್ತು.

ಕೆವಿಕೆ ಸಂಶೋಧನೆ ಭಾಗವಾಗಿ ಹಾಕಲಾಗಿದ್ದ ಮಳಿಗೆಯಲ್ಲಿ ಆಜೋಲಾ ಹಸಿರು ಮೇವು ಮಾತ್ರ ರೈತರನ್ನು ಆಕರ್ಷಿತು. ಒಂದಷ್ಟು ಆಜೋಲಾ ತೆಗೆದುಕೊಂಡು ಸ್ವತ್ಛ ನೀರಿಗೆ ಹಾಕಿದರೆ ಅದರಿಂದ ಕೇವಲ ಒಂದು ದಿನದಲ್ಲಿ ಐದಾರು ಕೆಜಿಯಷ್ಟು ಹಸಿ ಮೇವು ಉತ್ಪಾದನೆ ಮಾಡಬಹುದು ಎಂದು ವಿಭಾಗದ ಮುಖ್ಯಸ್ಥ ಡಾ| ರಾಜು ತೆಗ್ಗಳ್ಳಿ ವಿವರಿಸಿದರು.

ಹನಿ ನೀರಾವರಿಯಿಂದ ಶೆಡ್ಡುಗಳಲ್ಲಿ ಒಂದರ ಮೇಲೆ ಒಂದರಂತೆ ಟ್ರೇಗಳನ್ನು ಇಟ್ಟು ಹಸಿ ಮೇಕ್ಕೆಜೋಳದ ಮೇವು
ಉತ್ಪಾದನೆ ಮಾಡುವ ಕ್ರಮವನ್ನು ರೈತರು ವೀಕ್ಷಿಸಿದರು. ವಿದ್ಯುತ್‌ ಇಲ್ಲದೆಯೇ ಕೇವಲ ಸೋಲಾರ್‌ ಮತ್ತು ಬ್ಯಾಟರಿ ಚಾಲಿತ ಸಣ್ಣ ಯಂತ್ರಗಳ ಸಹಾಯದಿಂದ ಸ್ಪಿಂಕ್ಲರ್‌ಗಳನ್ನು ಬಳಕೆ ಮಾಡಿ ಅಟ್ಟಣಿಗೆಗಳಲ್ಲಿ ಮೇವನ್ನು ಬೆಳೆಯಬಹುದು ಎನ್ನುವ ಪದ್ಧತಿ ಉತ್ತಮ ಮಾಹಿತಿ ಬಿತ್ತರಿಸಿತು.

ಯಂತ್ರಗಳಿಂದ ಬಿತ್ತನೆ, ಕುಂಟೆ ಹೊಡೆಯುವುದು, ನೀರುಣಿಸುವುದು ಸೇರಿದಂತೆ ಇತರೆ ಕೃಷಿ ಪರಿಕರಗಳ ಮಳಿಗೆಗಳು ಹೆಚ್ಚು ಕಂಡುಬಂದವು. ಬ್ಯಾಂಕುಗಳ ಮಳಿಗೆಯಲ್ಲಿ ಯಂತ್ರಗಳ ಸಾಲಗಳ ಕುರಿತು ರೈತರು ಮಾಹಿತಿ ಪಡೆದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕೃಷಿ ಪರಿಕರಗಳ ಮಾಹಿತಿ ಪಡೆದರು. 

ಟಾಪ್ ನ್ಯೂಸ್

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.