ಲಂಕಾ ವಿರುದ್ಧ ಬೃಹತ್‌ ಜಯ: ಕೊಹ್ಲಿ,ಅಶ್ವಿ‌ನ್‌ ಹೊಸ ಮೈಲಿಗಲ್ಲು


Team Udayavani, Nov 27, 2017, 3:54 PM IST

India-Second-test-Victory-700.jpg

ನಾಗ್ಪುರ : ಇಂದಿಲ್ಲಿ 4ನೇ ದಿನದ ಆಟದೊಳಗೇ ಕೊನೆಗೊಂಡ ಪ್ರವಾಸಿ ಲಂಕಾ ಎದುರಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಲಂಕೆಯನ್ನು ಒಂದು ಇನ್ನಿಂಗ್ಸ್‌ ಹಾಗೂ 239 ರನ್‌ಗಳ ಭಾರೀ ದೊಡ್ಡ ಅಂತರದಿಂದ ಸೋಲಿಸುವಲ್ಲಿ ನಾಯಕ ವಿರಾಟ್‌ ಕೊಹ್ಲಿ ಮತ್ತು  ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಅವರು ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಮೂರು ಪಂದ್ಯಗಳ ಈ ಹಾಲಿ ಟೆಸ್ಟ್‌ ಸರಣಿಯಲ್ಲಿ ಆತಿಥೇಯ ಭಾರತ ಈಗ 1-0 ಮುನ್ನಡೆಯನ್ನು ಸ್ಥಾಪಿಸಿದೆ. ಮಳೆಯಿಂದ ಬಾಧಿತವಾಗಿದ್ದ ಕೋಲ್ಕತ ಈಡನ್‌ ಗಾರ್ಡನ್‌ ಅಂಗಣದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯವನ್ನು ಮಳೆ ಹಾಗೂ ಬೆಳಕಿನ ಕೃಪೆಯಿಂದ ಅದೃಷ್ಟಶಾಲಿ ಲಂಕಾ ತಂಡ ಡ್ರಾ ಮಾಡಿಕೊಂಡಿತ್ತು.

ಹತ್ತು ವರ್ಷಗಳ ಹಿಂದೆ ಬಾಂಗ್ಲಾದೇಶವನ್ನು ಮೀರ್‌ಪುರ್‌ನಲ್ಲಿ  ಇಷ್ಟೇ ದೊಡ್ಡ ಅಂತರದಿಂದ ಸೋಲಿಸಿದ್ದ ಭಾರತ, ಅನಂತದಲ್ಲಿ ಸಾಧಿಸಿರುವ ಅತೀ ದೊಡ್ಡ ವಿಜಯ ಇಂದಿನದ್ದಾಗಿದೆ. 

ರವಿಚಂದ್ರನ್‌ ಅಶ್ವಿ‌ನ್‌ ಅವರು ಲಂಕೆಯನ್ನು ಮಣಿಸುವಲ್ಲಿ 63 ರನ್‌ ವೆಚ್ಚಕ್ಕೆ 4 ವಿಕೆಟ್‌ ಕೀಳುವ ಮೂಲಕ ತಾವು ಆಡಿರುವ 54 ಪಂದ್ಯಗಳಲ್ಲಿ ಅತ್ಯಂತ ವೇಗದಲ್ಲಿ 300 ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಅವರು ಅಸ್ಟ್ರೇಲಿಯದ ಡೆನ್ನಿಸ್‌ ಲಿಲೀ ಅವರು 56 ಪಂದ್ಯಗಳಲ್ಲಿ 300 ವಿಕೆಟ್‌ ಕೀಳುವ ಮೂಲಕ ಮಾಡಿದ್ದ ದಾಖಲೆಯನ್ನು ಅಶ್ವಿ‌ನ್‌ ಮುರಿದರು.

ಈ ಟೆಸ್ಟ್‌ ಪಂದ್ಯದಲ್ಲಿ 5ನೇ ಡಬಲ್‌ ಸೆಂಚುರಿ ಹೊಡೆದು ತಮ್ಮ ಬ್ಯಾಟಿಂಗ್‌ ಪ್ರಾಬಲ್ಯ ಮೆರೆದು ಹೊಸ ಮೈಲುಗಲ್ಲನ್ನು ಸ್ಥಾಪಿಸಿದ ವಿರಾಟ್‌ ಕೊಹ್ಲಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್‌ ದಿಗ್ಗಜ ಕೆವಿನ್‌ ಪೀಟರ್‌ಸನ್‌ ಅಭಿನಂದಿಸಿದರು.

ಅಶ್ವಿ‌ನ್‌ ಅವರಿಂದು ಲಂಕೆಯ ಲಾಹಿರು ಗಮೇಜ್‌ ಅವರನ್ನು ಅನೂಹ್ಯ ದೂಸ್‌ರಾ ಹಾಕಿ ಔಟ್‌ ಮಾಡುವ ಮೂಲಕ ಲಂಕೆಯ ಇನ್ನಿಂಗ್ಸ್‌ಗೆ ತೆರೆ ಎಳೆದರು. ಈ ಮೂಲಕ ಅವರು ಕೇವಲ 130 ರನ್‌ ವೆಚ್ಚಕ್ಕೆ ಎಂಟು ವಿಕೆಟ್‌ ಕೀಳುವ ಸಾಧನೆಯನ್ನು ಈ ಟೆಸ್ಟ್‌ ಪಂದ್ಯದಲ್ಲಿ ಮಾಡಿದರು. 

ಲಂಕೆಯ ನಾಯಕ ದಿನೇಶ್‌ ಚಂಡಿಮಾಲ್‌ ಅವರೋರ್ವರೇ ಭಾರತದ ಮಾರಕ ಬೌಲಿಂಗ್‌ ದಾಳಿಯನ್ನು ತಾಳಿಕೊಂಡು ತಮ್ಮ ತಂಡಕ್ಕೆ  61 ರನ್‌ಗಳ ಗರಿಷ್ಠ ಕೊಡುಗೆಯನ್ನು ನೀಡಿದರು.

ಇಂದು ಲಂಕೆಯ ಬೆನ್ನೆಲುಬು ಮುರಿಯುವಲ್ಲಿ ಇಶಾಂತ್‌ ಶರ್ಮಾ (43/2) ಮತ್ತು ರವೀಂದ್ರ ಜಡೇಜ (2/28) ಗಮನಾರ್ಹ ಪಾತ್ರ ವಹಿಸಿದರು. ಮುರಳಿ ವಿಜಯ್‌ ಅವರ ಚುರುಕಿನ ಫೀಲ್ಡಿಂಗ್‌ ಲಂಕೆಗೆ ಮಾರಕವೆನಿಸಿತು. 

ಉಮೇಶ್‌ ಯಾದವ್‌ (2/30) ಅವರಿಗೆ ಇಂದು ತಮ್ಮ 100ನೇ ಟೆಸ್ಟ್‌ ವಿಕೆಟ್‌ ಗಳಿಸುವ ಅವಕಾಶ ಸ್ವಲ್ಪದರಲ್ಲೇ ಕಳೆದು ಹೋಯಿತು. ಅಶ್ವಿ‌ನ್‌ ಮತ್ತು ಇತರರು ಲಂಕೆಯ ವಿಕೆಟ್‌ಗಳನ್ನು ಹಂಚಿಕೊಂಡದ್ದು ಉಮೇಶ್‌ ಯಾದವ್‌ ಸಾಧನೆಗೆ ಅಡ್ಡಿಯಾಯಿತು.

2ನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ :
ಭಾರತ : ಮೊದಲ ಇನ್ನಿ,ಗ್ಸ್‌ 610/6 ಡಿಕ್ಲೇರ್‌ (176.1 ಓವರ್‌); ಲಂಕಾ : ಮೊದಲ ಇನ್ನಿಂಗ್ಸ್‌ : 205 (79.1), 2ನೇ ಇನ್ನಿಂಗ್ಸ್‌ 166 (49.3)

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.