ಕೃಷಿ ಸಿರಿಯ ಕೊಂಡಾಡಿದಡಾ| ಡಿ.ವೀರೇಂದ್ರ ಹೆಗ್ಗಡೆ
Team Udayavani, Dec 4, 2017, 9:47 AM IST
ವಿದ್ಯಾಗಿರಿ: ಆಳ್ವಾಸ್ ನುಡಿಸಿರಿಯಲ್ಲಿ ಪಾಲ್ಗೊಳ್ಳಲು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ವಿದ್ಯಾಗಿರಿಗೆ ಆಗಮಿಸಿದರು. ಸಾಹಿತ್ಯ ಸಮ್ಮೇಳನ ವೇದಿಕೆಗೆ ಹೋಗುವುದಕ್ಕೂ ಮೊದಲು ನೇರವಾಗಿ ಕೃಷಿ ಸಿರಿಗೆ ಭೇಟಿ ನೀಡಿದರು.
ಅಲ್ಲಿನ ಫಲ ಪುಷ್ಪ ಹಾಗೂ ವಿವಿಧ ತಳಿಯ ತರಕಾರಿ/ ಹಣ್ಣಿನ ಬೀಜಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಭತ್ತದಿಂದ ಮಾಡಿದ ವಿಶೇಷ ಉತ್ಪನ್ನವೊಂದನ್ನು ಡಾ| ಹೆಗ್ಗಡೆ ಅವರಿಗೆ ಕೃಷಿಕರೊಬ್ಬರು ಪ್ರದಾನಿಸಿದರು. “ನಮ್ಮ ಅನ್ನದಾತರು ನೀವು’ ಎಂದು ಕೃಷಿಕರೊಬ್ಬರು ಡಾ| ಹೆಗ್ಗಡೆ ಅವರನ್ನು ಉಲ್ಲೇಖೀಸಿದರು. ಆ ಬಳಿಕ ತರಕಾರಿ ತೋಟ ವನ್ನು ವೀಕ್ಷಿಸಿದ ಹೆಗ್ಗಡೆ ಅವರು, ಡಾ| ಮೋಹನ್ ಆಳ್ವ ಅವರ ಕಾರ್ಯಕ್ಷಮ ತೆಯನ್ನು ಶ್ಲಾಘಿಸಿ, ನುಡಿಸಿರಿಗೆ ಕೃಷಿಸಿರಿಯ ಮೂಲಕ ಪರಿಪೂರ್ಣತೆ ದೊರೆಯಿತು ಎಂದು ಉದ್ಗರಿಸಿದರು. ಬಳಿಕ ಕೃಷಿಸಿರಿ ನಡೆಯುವಲ್ಲಿ ಸಿದ್ಧ ಪಡಿಸಲಾದ ಭೋಜನ ವ್ಯವಸ್ಥೆಯನ್ನು ವೀಕ್ಷಿಸಿದರು. ನುಡಿ
ಸಿರಿಯ ಮುಖ್ಯವೇದಿಕೆಯ ಹತ್ತಿರದಲ್ಲಿ ಪುಸ್ತಕ ಮೇಳ, ಗಾಳಿಪಟ ವೀಕ್ಷಿಸಿದರು.
ಡಾ| ಎಂ. ಮೋಹನ್ ಆಳ್ವ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ