ಸದ್ದಿಲ್ಲದೇ ಮಂಗಳೂರಿಗೆ ಬಂದಿದ್ದ ನಟಿ ಐಶ್ವರ್ಯಾ ರೈ!
Team Udayavani, Dec 4, 2017, 11:19 AM IST
ಮಂಗಳೂರು: ಬಾಲಿವುಡ್ ಸ್ಟಾರ್ಗಳು ಆಗಮಿಸುತ್ತಾರೆ ಎಂದರೆ ಸುದ್ದಿ ಆಗುವುದು ಸಹಜ. ಆದರೆ ಖ್ಯಾತ ನಟಿ ಐಶ್ವರ್ಯಾ ರೈ ಶನಿವಾರ ಮಂಗಳೂರಿಗೆ ಆಗಮಿಸಿದ್ದು ಹೊರ ಜಗತ್ತಿಗೆ ಗೊತ್ತೇ ಆಗಲಿಲ್ಲ!
ನಗರದ ಟಿಎಂಎ ಪೈ ಹಾಲ್ನಲ್ಲಿ ಮದುವೆ ಸಮಾರಂಭದ ಔತಣ ಕೂಟವೊಂದರಲ್ಲಿ ಪಾಲ್ಗೊಳ್ಳಲು ನಟಿ ಐಶ್ವರ್ಯ ಅವರು ಶನಿವಾರ ಮುಂಬಯಿಯಿಂದ ಆಗಮಿಸಿದ್ದರು. ಅವರೊಂದಿಗೆ ಮಗಳು ಆರಾಧ್ಯಾ ಮತ್ತು ತಾಯಿ ಬೃಂದಾ ಅವರೂ ಇದ್ದರು.
ಬೃಂದಾ ಅವರ ಸಹೋದರ ಸೋಂತಾಡಿ ಉದಯಕುಮಾರ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಅವರ ವಿವಾಹ ಔತಣಕೂಟಕ್ಕೆ ನಟಿ ಐಶ್ವರ್ಯಾ ಅವರು ರಾತ್ರಿ 10.30ರ ಸುಮಾರಿಗೆ ಬಂದಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮುಂಬಯಿಗೆ ತೆರಳಿದ್ದಾರೆ. ಸಂಬಂಧಿಕರೊಂದಿಗೆ ಬೆರೆತು ತುಳುವಿನಲ್ಲೇ ಮಾತನಾಡಿದ ಅವರು, ಕರಾವಳಿಯ ಮಾಂಸಾಹಾರಿ ಖಾದ್ಯಗಳನ್ನು ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ