ಸಂಸ್ಥೆಗಳು ನಿಸ್ವಾರ್ಥ ಸೇವೆ ಸಲ್ಲಿಸಲಿ: ತಂಗಡಗಿ ಶ್ರೀ
Team Udayavani, Dec 4, 2017, 3:14 PM IST
ಮುದ್ದೇಬಿಹಾಳ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಘ, ಸಂಸ್ಥೆಗಳು ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ
ಮಾಡಬೇಕು ಎಂದು ತಂಗಡಗಿಯ ಹಡಪದ ಅಪ್ಪಣ್ಣ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿಗಳು ಹೇಳಿದರು.
ಅವರು ಪ್ರಗತಿ ಶಾಲೆಯಲ್ಲಿ ನಡೆದ ಜೆ.ಸಿ. 2018 ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ಶರೀರವಿರುವುದೇ ಸಮಾಜ ಸೇವೆಗಾಗಿ. ತನ್ನ ಸ್ವಾರ್ಥ ಸಾಧಿಸಿದರೆ ಮನುಷ್ಯ ದೊಡ್ಡವನಾಗುವುದಿಲ್ಲ. ಜೆ.ಸಿ.
ಸಂಸ್ಥೆ 15 ವರ್ಷಗಳಲ್ಲಿ ಮಾಡಿದ ಸೇವಾ ಕಾರ್ಯಗಳು ಹಾಗೂ ಸಾಧಿಸಿದ ಪ್ರಗತಿ ದೊಡ್ಡದು ಎಂದವರು ಹೇಳಿದರು.
ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ್ರ ಮಾತನಾಡಿ, ಜೆಸಿ ಸಂಸ್ಥೆಯಲ್ಲಿ ಜಾತಿ, ಮತ, ಧರ್ಮ ಮೀರಿದ ಸಮಾಜ ಸೇವೆ ನಡೆಯುತ್ತದೆ. ಇಲ್ಲಿಯ ಸದಸ್ಯರ ಒಮ್ಮನಸ್ಸಿನ ಕೆಲಸ ಇತರ ಸಂಘ, ಸಂಸ್ಥೆಗಳಿಗೆ ಮಾದರಿ ಎಂದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಲಯ 24ರ ನಿರ್ದೇಶಕ ಮಂಡಳಿಯ ಸದಸ್ಯೆ ಸವಿತಾ ರಮೇಶ
ಮಾತನಾಡಿದರು. ನೂತನ ಅಧ್ಯಕ್ಷರಾದ ಶ್ರೀನಿವಾಸ ಇಲ್ಲೂರ, ಕಾರ್ಯದರ್ಶಿ ರವಿ ಗೂಳಿ, ಉಪಾಧ್ಯಕ್ಷರಾದ ಮಹಾಬಲೇಶ ಗಡೇದ, ಶರಣು ಸಜ್ಜನ, ಸಂಗಮೇಶ ನಾವದಗಿ, ಮಾರುತಿ ನಲವಡೆ, ಸುನೀಲ ಇಲ್ಲೂರ, ಸಹ
ಕಾರ್ಯದರ್ಶಿ ಸುರೇಶ ಕಲಾಲ, ಖಜಾಂಚಿ ರಾಜು ಕರಡ್ಡಿ, ನಿರ್ದೇಶಕ ಮಂಡಳಿ ಸದಸ್ಯರಾದ ವಿಲಾಸ ದೇಶಪಾಂಡೆ, ಡಾ| ಉತ್ಕರ್ಷ ನಾಗೂರ, ಅರವಿಂದ ಲದ್ದಿಮಠ, ಭರತ ಭೋಸಲೆ, ಪಂಕಜ ಪೋರವಾಲ, ಅಪ್ಪು ಪೂಜಾರಿ ಹಾಗೂ ಲಾಡ್ಲೆಮಶ್ಯಾಕ ನಾಯ್ಕೋಡಿ ಅವರಿಗೆ ವಲಯ 24ರ ಉಪಾಧ್ಯಕ್ಷ ಅರವಿಂದಕುಮಾರ ಬುರೆಡ್ಡಿ ಸೇವಾ ಪ್ರತಿಜ್ಞಾವಿಧಿ ಬೋಧಿಸಿದರು.
ವೇದಿಕೆಯಲ್ಲಿ ಇಲಕಲ್ಲನ ಸಿಲ್ಕ್ ಸಿಟಿ ಜೆ.ಸಿ. ಸಂಸ್ಥೆ ಅಧ್ಯಕ್ಷೆ ಮಂಜುಳಾ ತೋಟಗೇರಿ, ಕಾರ್ಯದರ್ಶಿ ಅಪ್ಪು
ಪೂಜಾರಿ ಉಪಸ್ಥಿತರಿದ್ದರು. ಡಾ| ಉತ್ಕರ್ಷ ನಾಗೂರ ಜೆಸಿ ವಾಣಿ ಓದಿದರು. ಸಂಗಮೇಶ ನಾವದಗಿ ಸ್ವಾಗತಿಸಿದರು.
ಡಾ| ವೀರೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷ ಮುರಳಿಕೃಷ್ಣ ಬುಡ್ಡೋಡಿ 2017 ನೇ ಸಾಲಿನ ವರದಿ ವಾಚನ ಮಾಡಿದರು. ಪ್ರೊ| ಎಸ್.ಎಸ್. ಹೂಗಾರ
ಹಾಗೂ ಮಹಾಬಲೇಶ ಗಡೇದ ನಿರೂಪಿಸಿದರು. ಡಾ| ರಹೀಮ ಮುಲ್ಲಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು