ಅನುಷ್ಕಾ-ವಿರಾಟ್ ಜಾಹೀರಾತಿಗೆ ಭಾರೀ ಬೇಡಿಕೆ !
Team Udayavani, Dec 11, 2017, 6:00 AM IST
ಮುಂಬಯಿ: ಬಾಲಿವುಡ್ನಲ್ಲಿ ತಾರಾ ದಂಪತಿಗಳ ಬಂಧ ಗಟ್ಟಿಯಾದಷ್ಟು ಬ್ರ್ಯಾಂಡ್ ಮೌಲ್ಯವೂ ಏರುತ್ತದೆ. ಕಾಲಕಾಲಕ್ಕೆ ಬಾಲಿವುಡ್ನಲ್ಲಿ ದಾಂಪತ್ಯಕ್ಕೆ ರೋಲ್ ಮಾಡೆಲ್ ಆದ ತಾರೆಯರು ಬದಲಾಗುತ್ತಾರೆ. ಅಮಿತಾಭ್ ಬಚ್ಚನ್-ಜಯಾ ಬಚ್ಚನ್, ಅಜಯ್ ದೇವಗನ್ ಮತ್ತು ಕಾಜೋಲ್, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಸದ್ಯ ತಾರಾ ಜೋಡಿಗಳಾಗಿದ್ದು, ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅತ್ಯಂತ ಚರ್ಚೆಯಲ್ಲಿರುವ ಜೋಡಿ ಎಂದರೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇನ್ನೇನು ಕೆಲವೇ ದಿನಗಳಲ್ಲಿ ವಿವಾಹ ವಾಗಲಿರುವ ಇವರು ಈಗಾಗಲೇ ಉಡುಪು ಬ್ರ್ಯಾಂಡ್ “ಮಾನ್ಯವರ್’ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾಲ್ಕು ವರ್ಷಗಳ ಹಿಂದೆ ಇವರ ಮಧ್ಯೆ ಪ್ರೇಮಾಂಕುರವಾಗುತ್ತಿದ್ದಂತೆ ಹಿಂದೂಸ್ಥಾನ್ ಯೂನಿಲಿವರ್ನ ಕ್ಲಿಯರ್ ಶಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಒಂದೊಂದು ಜೋಡಿಯೂ ಪ್ರತಿ ಬ್ರ್ಯಾಂಡ್ಗೆ 4ರಿಂದ 8 ಕೋಟಿ ರೂ.ವರೆಗೂ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ಅವರ ಜನಪ್ರಿಯತೆಯೇ ಅಳತೆಗೋಲು. ಈ ಬಾರಿ ಅನುಷ್ಕಾ ಮತ್ತು ವಿರಾಟ್ ಅತ್ಯಂತ ಜನಪ್ರಿಯ ವಾಗಿರುವುದರಿಂದ ಹಾಗೂ ಯುವಕರನ್ನು ಸೆಳೆಯುವ ಶಕ್ತಿ ಹೆಚ್ಚು ಇರುವುದರಿಂದ ಈ ಸಂಭಾವನೆಯ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಇವರ ಸಂಭಾವನೆ 10 -12 ಕೋಟಿ ರೂ.ಗೆ ತಲುಪುವ ಸಾಧ್ಯತೆಯಿದೆ. ಅಲ್ಲದೆ ಇವರು ಎರಡು ಕ್ಷೇತ್ರದ ಅಭಿಮಾನಿಗಳನ್ನು ಹೊಂದಿದ್ದಾರೆ. ವಿರಾಟ್ ಕ್ರಿಕೆಟ್ ಮೆಚ್ಚುವ ಯುವಕರನ್ನು ಸೆಳೆಯಲಿದ್ದರೆ, ಅನುಷ್ಕಾ ಸಿನೆಮಾ ಪ್ರಿಯ ರನ್ನು ಸೆಳೆಯಲಿದ್ದಾರೆ. ಹೀಗಾಗಿ ಅವರ ಜಾಹೀರಾತನ್ನು ನೋಡುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಮಾನ್ಯವರ್ನ ದೀಪಾವಳಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಇವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ರ್ಯಾಂಡ್ಗಳನ್ನೂ ಪ್ರಚಾರ ಮಾಡಬಹುದು. ವಿವಾಹವಾಗುತ್ತಿದ್ದಂತೆಯೇ ಬ್ರ್ಯಾಂಡ್ಗಳು ಇವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಹಾತೊರೆಯಲಿವೆ.
ಸದ್ಯ ಇಬ್ಬರೂ ಪ್ರತ್ಯೇಕವಾಗಿ ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿಗಳಾಗಿದ್ದಾರೆ. ಪುಮಾ, ಎಂಆರ್ಎಫ್, ಆಡಿ, ಕಾಲ್ಗೇಟ್ ಸಹಿತ ಹಲವು ಬ್ರ್ಯಾಂಡ್ಗಳಿಗೆ ಕೊಹ್ಲಿ ಜಾಹೀರಾತಿನಲ್ಲಿ ಭಾಗವಹಿಸಿ ದ್ದಾರೆ. ಅನುಷ್ಕಾ ಕೂಡ ಹಲವು ಬ್ರ್ಯಾಂಡ್ಗಳ ಪ್ರಚಾರ ರಾಯಭಾರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ