ಮಾರಿಕಾಂಬ ದೇವಸ್ಥಾನ ಕಟ್ಟಡ ಪ್ರಕರಣ ಇತ್ಯರ್ಥ
Team Udayavani, Dec 21, 2017, 5:17 PM IST
ಶಿರಸಿ: ಮಾರಿಕಾಂಬಾ ದೇವಸ್ಥಾನ ಹಾಗೂ ಪ್ರೋಗ್ರೆಸ್ಸೀವ್ ಶಿಕ್ಷಣ ಸಂಸ್ಥೆಯ ನಡುವೆ ಇದ್ದ ಕಟ್ಟಡ ಸಂಬಂಧಿತ ಕಾನೂನು ಹೋರಾಟ ಕೊನೆಗೂ ಇತ್ಯರ್ಥವಾಗಿದೆ. ಮಾರಿಕಾಂಬಾ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗಿ ದೇಗುಲದ ಪಕ್ಕದಲ್ಲಿನ ಕಟ್ಟಡದ ಕೀಲಿಯನ್ನು ನ್ಯಾಯಾಲಯದಲ್ಲೇ ಕಾಲೇಜಿನ ಪ್ರಮುಖರು ಹಸ್ತಾಂತರಿಸಿದ್ದಾರೆ.
ಎರಡೂ ಸಾರ್ವಜನಿಕ ಸಂಸ್ಥೆಗಳು ಪ್ರಕರಣ ಬಗೆಹರಿಸಿಕೊಂಡಿವೆ. ಈ ಕುರಿತು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರೋಗ್ರೆಸ್ಸೀವ್ ಅಧ್ಯಕ್ಷ, ಮಾಜಿ ಸಚಿವ ಪಿ.ಎಸ್. ಜಯವಂತ, ಮಾರಿಕಾಂಬಾ ದೇಗುಲದ ಕಾರ್ಯಕ್ಕೆ, ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಪರಸ್ಪರ ಸಹಕಾರದ ಮಾದರಿಯಲ್ಲಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
1961ರಿಂದ ಮಾರಿಗುಡಿ ಪ್ರದೇಶ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಕಾರಣದಿಂದ ಮಾರಿಕಾಂಬಾ ದೇಗುಲದ
ಕಟ್ಟಡದಲ್ಲಿ ಶಾಲೆ ಆರಂಭವಾಗಿತ್ತು. ಆದರೆ ಕಳೆದ 15 ವರ್ಷಗಳಿಂದ ಈ ಕಟ್ಟಡ ಸಂಬಂಧದ ಪ್ರಕರಣ ನ್ಯಾಯಾಲಯದ ಮೆಟ್ಟಿಲೂ ಏರಿತ್ತು. ಆದರೆ ದೇಗುಲಕ್ಕೆ ಸಂಬಂಧಪಟ್ಟ ಸ್ಥಳವನ್ನು ಸಮಾಧಾನದಿಂದ ಇತ್ಯರ್ಥ ಮಾಡಿಕೊಳ್ಳಬೇಕು ಎಂಬ ಕಾರಣದಿಂದ ರಾಜೀ ಮಾಡಿಕೊಳ್ಳಲಾಗಿದೆ. ಕಟ್ಟಡದಲ್ಲಿನ ಐದು ಕೊಠಡಿಯಲ್ಲಿ ನಡೆಯುತ್ತಿದ್ದ ಶಾಲಾ ಪೀಠೊಪಕರಣ ಸೇರಿದಂತೆ ಅವರು
ವಾಪಸ್ ಒಯ್ದಿದ್ದು, ಕೀಲಿ ನೀಡಿದ್ದಾರೆ ಎಂದು ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ ವಿವರಿಸಿದರು.
ಪಿ.ಎಸ್. ಜಯವಂತ ಮಾತನಾಡಿ, ಎರಡೂ ಸಾರ್ವಜನಿಕವೇ ಆಗಿದ್ದರಿಂದ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ನಗರಸಭೆಯಿಂದ
ಬನವಾಸಿ ರಸ್ತೆಯಲ್ಲಿ 4 ಗುಂಟೆ ಸ್ಥಳಕ್ಕೆ ಶಿಕ್ಷಣ ಸಂಸ್ಥೆ ಬೇಡಿಕೆ ಇಟ್ಟಿದ್ದು, ಅದನ್ನು ಒಪ್ಪಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಿದ್ದಾರೆ. ಅಲ್ಲಿಂದ ಅನುಮೋದನೆ ಪಡೆದು ಕಟ್ಟಡ ಕಟ್ಟುವ ಕಾರ್ಯದಲ್ಲಿ ಮಾರಿಗುಡಿ ಕೂಡ ನೆರವಾಗಬೇಕು ಎಂದರು. ನಮಗೆ ಮಿತಿ
ಇರುವುದರಿಂದ ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ಯಥಾವತ್ ಪ್ರಸ್ತಾವನೆ ಕಳಿಸಲಾಗುತ್ತದೆ. ಬಾಕಿ ಇರುವ ಇನ್ನೂ ನಾಲ್ಕು ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಿಕೊಳ್ಳುವ ವಿಶ್ವಾಸ ಇದೆ ಎಂದು ವೆಂಕಟೇಶ ತಿಳಿಸಿದರು.
ಮಾರಿಗುಡಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಪ್ರೋಗ್ರೆಸ್ಸೀವ್ನ ಎನ್.ವಿ.ಜಿ. ಭಟ್ಟ,
ಜಿ.ಜಿ. ಹೆಗಡೆ ಕಡೇಕೋಡಿ, ಸೂರಜ್ರಾಣಿ ಪ್ರಭು, ಎಂ.ಎನ್. ಹೆಗಡೆ ಹಲಸಿನಳ್ಳಿ, ರಮೇಶ ದುಭಾಶಿ, ಪರಮಾನಂದ ಹೆಗಡೆ, ಮೋಹಿನಿ ಬೆ„ಲೂರು, ಶಶಿಕಲಾ ಜಯವಂತ ಇತರರು ಇದ್ದರು. ಮಾರಿಗುಡಿ ವ್ಯವಸ್ಥಾಪಕ ನರೇಂದ್ರ ಜಾಧವ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು