ನಾನು ಕನ್ನಡಿಗ; ಮೊದಲು ನನಗೆ ತಮಿಳು ಬರುತ್ತಿರಲಿಲ್ಲ
Team Udayavani, Dec 30, 2017, 11:37 AM IST
ಚೆನ್ನೈ: ರಾಜಕೀಯ ಪ್ರವೇಶ ಕುರಿತಂತೆ ಕಳೆದ 6 ದಿನಗಳಿಂದ ಅಭಿಮಾನಿಗಳ ಅಭಿಪ್ರಾಯ ಸಂಗ್ರಹದಲ್ಲಿ ನಿರತರಾಗಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರು ‘ನಾನು,ನನ್ನ ಕುಟಂಬ ಕನ್ನಡಿಗರು’ ಎಂದು ಹೇಳುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ರಜನಿಕಾಂತ್ ‘ನಾನು ಕನ್ನಡಿಗ, ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ನನಗೆ ಮೊದಲು ತಮಿಳು ಬರುತ್ತಿರಲ್ಲಿಲ್ಲ,ಇಂಗ್ಲೀಷ್ ಅಂತೂ ಸ್ವಲ್ಪವೂ ಬರುತ್ತಲೇ ಇರಲ್ಲಿಲ್ಲ’ ಎಂದು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು.
‘ನನಗೆ ತಮಿಳು ಚಿತ್ರರಂಗ ತಮಿಳು ಭಾಷೆಯನ್ನು ಕಲಿಸಿ, ಬೆಳಸಿತು’ ಎಂದು ಅವರು ಹೇಳಿದರು.
ಗುರುವಾರ ಅಭಿಮಾನಿಗಳೊಂದಿಗೆ ನಡೆದ ಸಂದರ್ಶನದಲ್ಲಿ ‘ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರ ಸಾಂಗತ್ಯ ಪಡೆದಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ’ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cannes Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು
ಹೃದಯ ಸಂಬಂಧಿ ಕಾಯಿಲೆ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
Bollywood: ಜೂನ್ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್ ಭರಾಟೆ
Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್ ʼಬಾರ್ಡರ್ -2ʼ ರಿಲೀಸ್?