ಉ.ಕೊರಿಯ ಕ್ಷಿಪಣಿ ಆಕಸ್ಮಿಕವಾಗಿ ಅದರ ನಗರದ ಮೇಲೇ ಬಿದ್ದಿತ್ತು !


Team Udayavani, Jan 5, 2018, 7:09 PM IST

North-Korea-Missile-700.jpg

ವಾಷಿಂಗ್ಟನ್‌  : ‘ನ್ಯೂಕ್ಲಿಯರ್‌ ಬಟನ್‌ ನನ್ನ ಟೇಬಲ್‌ ಮೇಲೆಯೇ ಸದಾ ಕಾಲ ಇರುತ್ತದೆ’ ಎಂದು ತನ್ನ ಅಣ್ವಸ್ತ್ರಗಳ ಸಮರ ಸನ್ನದ್ಧತೆಯನ್ನು ಎರಡು ದಿನಗಳ ಹಿಂದಷ್ಟೇ ಕೊಚ್ಚಿಕೊಂಡಿದ್ದ ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್‌ ಜೋಂಗ್‌ ಉನ್‌ ಗೆ ತನ್ನ ಅಣ್ವಸ್ತ್ರಗಳ ಮೇಲೆ ನಿಯಂತ್ರಣವೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆತ ಪ್ರಯೋಗಾರ್ಥವಾಗಿ ಹಾರಿಸಿದ್ದ  ಅಣು ಕ್ಷಿಪಣಿಯೊಂದು 40 ಕಿ.ಮೀ. ದೂರ ಸಾಗಿ, ಆಕಸ್ಮಿಕವಾಗಿ ಚೂರುಚೂರಾಗಿ, ಉತ್ತರ ಕೊರಿಯದ ನಗರವೊಂದರ ಮೇಲೆಯೇ ಬಿದ್ದಿತ್ತು ಎಂಬ ವಿಷಯ ಇದೀಗ ಬಹಿರಂಗವಾಗಿದೆ. 

ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಿಂದ ಸುಮಾರು 150 ಕಿ.ಮೀ. ದೂರದ, 2 ಲಕ್ಷ ಜನಸಂಖ್ಯೆ ಇರುವ ತೋಕ್‌ಶೋನ್‌ ನಗರದ ಮೇಲೆ ಹ್ವಾಸೋಂಗ್‌-12 ಬ್ಯಾಲಿಸ್ಟಿಕ್‌ ಕ್ಷಿಪಣಿ ಆಕಸ್ಮಿಕವಾಗಿ ಎರಗಿತ್ತು ಮತ್ತು ಪೌರ ವಾಸದ ಪ್ರದೇಶಗಳಲ್ಲಿ ಅಪಾರವಾದ ನಾಶ ನಷ್ಟ ಉಂಟು ಮಾಡಿತ್ತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿರುವುದನ್ನು ಉಲ್ಲೇಖೀಸಿ “ದಿ ಇಂಡಿಪೆಂಡೆಂಟ್‌’ ವರದಿ ಮಾಡಿದೆ.

ಹ್ವಾಸೋಂಗ್‌-12 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಕಳೆದ ವರ್ಷ ಎಪ್ರಿಲ್‌ 28ರಂದು ಪರೀಕ್ಷಾರ್ಥವಾಗಿ ಉಡಾಯಿಸಲಾಗಿತ್ತು. ಮಧ್ಯಮ ದೂರ ವ್ಯಾಪ್ತಿಯ ಈ ಬ್ಯಾಲಿಸ್ಟಿಕ್‌ ಮಿಸೈಲ್‌ ತನ್ನ ಗಮ್ಯ ಗುರಿಯ ಮೇಲೆ ಎರಗುವ ಮುನ್ನವೇ, ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ, ಚೂರು ಚೂರಾಗಿ ಉರಿದು ಬಿದ್ದಿತ್ತು. ಆದರೆ ಅದು ಹಾಗೆ ಉರಿದು ಬಿದ್ದದ್ದು ಎರಡು ಲಕ್ಷ ಜನಸಂಖ್ಯೆ ಇರುವ ತೋಕ್‌ಶಾನ್‌ ಪಟ್ಟದ ಮೇಲೆ ಎಂಬ ಬಗ್ಗೆ ಹೊಸ ಸಾಕ್ಷ್ಯಗಳು ಅನಂತರದಲ್ಲಿ ಲಭಿಸದವು ಎಂದು ದಿ ಇಂಡಿಪೆಂಡೆಂಟ್‌ ವರದಿ ಮಾಡಿದೆ. 

ಸರ್ವಾಧಿಕಾರಿ ಆಳ್ವಿಕೆ ಇರುವ ಉತ್ತರ ಕೊರಿಯದಲ್ಲಿ ಎಲ್ಲವೂ ರಹಸ್ಯಮಯವಾಗಿ ನಡೆಯುವ ಕಾರಣ ಅದರ ಐಆರ್‌ಬಿಎಂ ಬ್ಯಾಲಿಸ್ಟಿಕ್‌ ಮಿಸೈಲ್‌ ಅದರ ನಗರದ ಮೇಲೆಯೇ ಎರಗಿ ಪೌರ ವರ್ಗಕ್ಕೆ ಭಾರೀ ನಾಶ ನಷ್ಟ ಉಂಟುಮಾಡಿತೆಂಬ ವಿಷಯ ಬಹಿರಂಗವಾಗಿಯೇ ಇರಲಿಲ್ಲ. ಈ ಕ್ಷಿಪಣಿ ಪತನದ ದುರಂತವು ಉತ್ತರ ಕೊರಿಯಕ್ಕೆ ಭಾರೀ ಹಿನ್ನಡೆ ಮತ್ತು ಆಘಾತ ಉಂಟುಮಾಡಿದ ವಿದ್ಯಮಾನವಾಗಿತ್ತು. ಕಾರಣ ಅದರ ಹುಚ್ಚಾಪಟ್ಟೆ ಅಣ್ವಸ್ತ್ರ ವೃದ್ಧಿ ಕಾರ್ಯಕ್ರಮ ಅಮೆರಿಕ ಸಹಿತ ವಿಶ್ವಕ್ಕೇ ಬೆದರಿಕೆಯಾಗಿ ಪರಿಣಮಿಸಿತ್ತು. 

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.