ರಜನಿ ಹುಟ್ಟೂರಲ್ಲಿ ಪುಳಕ
Team Udayavani, Jan 8, 2018, 9:20 AM IST
ಪುಣೆ/ಹೊಸದಿಲ್ಲಿ: ಸೂಪರ್ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರ ಅಭಿಮಾನಿಗಳಲ್ಲಿ ಪುಳಕ ತಂದಿರುವುದರ ಜತೆಗೆಯೇ ಅವರ ಹುಟ್ಟೂರಲ್ಲೂ ಸಂಭ್ರಮ ಮನೆಮಾಡಿದೆ. ಅವರು ಹುಟ್ಟೂರು ಇರುವುದು ಮಾವಡಿ ಕಡೇಪಥರ್ ಗ್ರಾಮದಲ್ಲಿ. ಪುಣೆಯಿಂದ 60 ಕಿಮೀ ದೂರದಲ್ಲಿದೆ ಈ ಗ್ರಾಮ. ರಜನೀಕಾಂತ್ ಆಗಿ ಬದಲಾಗುವುದಕ್ಕಿಂತ ಮೊದಲು ಅವರು ಶಿವಾಜಿ ರಾವ್ ಗಾಯಕ್ವಾಡ್ ಆಗಿದ್ದರು. “ನಮ್ಮ ಗ್ರಾಮದ ಮಣ್ಣಿನ ಮಗ ಸಿನೆಮಾದಲ್ಲಿ ದೊಡ್ಡ ಹೆಸರು ಗಳಿಸಿದ್ದಾನೆ. ಈಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾನೆ. ಸಿನೆಮಾದಲ್ಲಿ ಹಿಟ್ ಆದಂತೆ ರಾಜಕೀಯದಲ್ಲೂ ಹೆಸರು ಮಾಡುತ್ತಾನೆ’ ಎಂದು ಗ್ರಾಮಸ್ಥರು ಸಂತಸಪಟ್ಟಿದ್ದಾರೆ. ಈಗ ಅವರು ಅಲ್ಲಿಗೆ ಭೇಟಿ ನೀಡುತ್ತಾರಾ ಎಂಬ ಕುತೂಹಲ ಸ್ಥಳೀಯರದ್ದು.
ಈ ಸ್ಥಳ ಸುಪ್ರಸಿದ್ಧ ಯಾತ್ರಾ ಸ್ಥಳ ಜೆಜೂರಿಗೆ ಸಮೀಪದಲ್ಲಿದೆ. ರಜನಿಯವರ ಅಜ್ಜ ಕರ್ನಾಟಕದ ಬಸವನ ಬಾಗೇವಾಡಿಗೆ ತೆರಳಿ, ಅಲ್ಲಿಂದ ಬೆಂಗಳೂರಿಗೆ ಹೋದರು ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿ ಜಮೀನು ಇದ್ದರೂ ರಜನಿ ಕುಟುಂಬ ಕರ್ನಾಟಕದಲ್ಲಿಯೇ ಉಳಿಯಿತು. ಪುಣೆಯ ಪುರಂದರ ತಾಲೂಕಿನ ಇತರ ಗ್ರಾಮಗಳೂ ರಜನಿಯ ಸಂಪರ್ಕವನ್ನು ಮೆಲುಕು ಹಾಕುತ್ತವೆ. 2016ರಲ್ಲಿ ಬಿಜೆಪಿ ಶಾಸಕ ಅನಿಲ್ ಗೋಟೆ, ತಲೈವಾಗೆ “ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದರು.
ನಮ್ಮಂತೆಯೇ ಇದೆ
ತಲೈವಾ ರಜನಿ ಪ್ರದರ್ಶಿಸಿದ “ಅಪಾನ ಮುದ್ರೆ’ಯ ಚಿಹ್ನೆ ನಾವು ವಿನ್ಯಾಸ ಮಾಡಿದ ಮುದ್ರೆಯಂತೆಯೇ ಇದೆ ಎಂದು ಮುಂಬಯಿಯ ಯೋಗ ಸ್ಟಾರ್ಟಪ್ವೊಂದು ಹೇಳಿಕೊಂಡಿದೆ. ಆದರೆ ಹೆಬ್ಬೆರಳನ್ನು ಮುಕ್ತವಾಗಿ ಇರಿಸಲಾಗಿದೆ. 2002ರಲ್ಲಿ ರಜನಿ ಅಭಿನಯಿಸಿದ “ಬಾಬಾ’ ಸಿನೆಮಾದಲ್ಲಿ ಆ ಮುದ್ರೆ ಪ್ರದರ್ಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ