ಬುಲ್‌ ಟ್ರಾಲ್‌ ವಿರುದ್ಧ ಭಾರೀ ಪ್ರತಿಭಟನೆ


Team Udayavani, Jan 9, 2018, 3:11 PM IST

09-40.jpg

ಕಾರವಾರ: ಸಮುದ್ರದಲ್ಲಿ ರಾತ್ರಿ ವೇಳೆ ಫ್ಲಡ್‌ಲೈಟ್‌ ಫಿಶ್ಶಿಂಗ್‌ ಮಾಡುತ್ತಿರುವುದರಿಂದ ಮೀನಿನ ಸಂತತಿಯೇ ನಾಶವಾಗಲಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೊನಲಗದ್ದೆ ಕುಮಟಾ, ಅಂಕೋಲಾ, ಭಟ್ಕಳ, ಕಾರವಾರ, ಗಂಗಾವಳಿ, ದೇವಭಾಗ, ಗೋಕರ್ಣ ಮತ್ತು ಜಿಲ್ಲೆಯ ವಿವಿಧ ಕರಾವಳಿ ತಾಲೂಕುಗಳಿಂದ ಬಂದಿದ್ದ ಸಾವಿರಾರು ಮೀನುಗಾರರು ಕಾರವಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ
ಮನವಿ ಸಲ್ಲಿಸಿದರು.

ಉತ್ತರ ಕನ್ನಡ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರು ಒಕ್ಕೂಟದ ಸದಾನಂದ ಹರಿಕಂತ್ರ, ಸುಧಾಕರ ತಾರಿ, ಸೋಮಯ್ಯ ಹರಿಕಂತ್ರ ನೇತೃತ್ವ ವಹಿಸಿದ್ದರು. ಕೇಂದ್ರ ಸರ್ಕಾರ ರಾತ್ರಿ ವೇಳೆ ಫಡ್‌ಲೈಟ್‌ ಫಿಶ್ಶಿಂಗ್‌ ನಿಷೇಧ ಹೇರಿದೆ. ಮೀನುಗಾರಿಕೆಯಲ್ಲಿ ಏಕ ರೀತಿ ನಿಯಮ ರೂಪಿಸಿ ಕಳೆದ ನ.10 ರಂದು ಆದೇಶ ಹೊರಡಿಸಿದೆ. ಈ ಆದೇಶ ಎಲ್ಲಾ ರಾಜ್ಯಗಳ ಕೈ ಸೇರಿದೆ. ಆದರೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಫಡ್‌ಲೈಟ್‌ ಫಿಶ್ಶಿಂಗ್‌ ನಡೆಯುತ್ತಿದ್ದು ಸಮುದ್ರವನ್ನೇ ಬರಿದು ಮಾಡಿದೆ ಎಂದು ನಾಡದೋಣಿ ಮೀನುಗಾರ ಸಂಘಟನೆಯ ಮುಖಂಡ ಸದಾನಂದ ಹರಿಕಂತ್ರ
ಹೇಳಿದರು. 

ಅಸಮಾನತೆ ಸೃಷ್ಟಿ: ಫಡ್‌ಲೈಟ್‌ ಮೀನುಗಾರಿಕೆಯಿಂದ ಸಮುದ್ರ ಬರಿದಾಗುತ್ತಿದೆ. ಸಮುದ್ರದಲ್ಲಿ ಮೀನುಗಾರಿಕಾ ವೃತ್ತಿ ಮೌಲ್ಯಗಳನ್ನು, ಸಿದ್ಧಾಂತಗಳನ್ನು ಗಾಳಿಗೆ ತೂರಿ ಹಣ ಮಾಡುವ ದಂಧೆ ಮಾಡಲಾಗುತ್ತಿದೆ. ಇದು ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಸಮುದ್ರದ ಜೀವವೈವಿಧ್ಯಕ್ಕೂ ಧಕ್ಕೆ ತಂದಿದೆ. ಬುಲ್‌ ಟ್ರಾಲ್‌ ಸಹ ಸಮುದ್ರದಲ್ಲಿ ಮೀನಿನ ಸಂತತಿಯನ್ನೇ ಬಾಚುತ್ತಿದೆ. ಹಾಗಾಗಿ ಸಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರರು, ದಡದ ಮೀನುಗಾರಿಕೆ ಮಾಡುವವರಿಗೆ ಉದ್ಯೋಗವೇ ಇಲ್ಲದಂತಾಗಿದೆ ಎಂದು ಸದಾನಂದ ಹರಿಕಂತ್ರ ಕಳವಳ ವ್ಯಕ್ತಪಡಿಸಿದರು.

ಆಹಾರ ಉತ್ಪನ್ನಗಳಲ್ಲಿ ಸಮುದ್ರ ಮೀನು ಸಹ ಒಂದು. ಆದರೆ ಅವೈಜ್ಞಾನಿಕ ಮತ್ತು ದುರಾಸೆಯ ಮೀನುಗಾರಿಕೆಯಿಂದ ಸಮುದ್ರ ಬರಿದಾಗಿದೆ. ಮೀನು ಸಿಗದೆ ಸಮುದ್ರ ಆಧಾರಿತ ಉತ್ಪನ್ನದಲ್ಲಿ ರಾಜ್ಯಕ್ಕೆ ಗಂಡಾಂತರ ಎದುರಾಗಬಹುದು ಎಂದು ಹರಿಕಂತ್ರ ಎಚ್ಚರಿಸಿದರು.

ಬೇಡಿಕೆಗಳು: ಮೀನು ಸಂತತಿ ಉಳಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಉತ್ತರ ಕನ್ನಡದಲ್ಲಿ ರಾತ್ರಿ ವೇಳೆ ಬುಲ್‌ ಟ್ರಾಲ್‌ ಬಳಸಿ ಮೀನುಗಾರಿಕೆ ನಡೆದಿದೆ. ಬೆಳಕು ಬಿಟ್ಟು ಸಮುದ್ರದಲ್ಲಿ ಮೀನು ಬೇಟೆ ಮಾಡುವುದರಿಂದ ಬೆಳಕಿಗೆ ಸಣ್ಣ ಸಣ್ಣ ಮೀನು ಮರಿ ಸಹಿತ ಎಲ್ಲಾ ಮೀನುಗಳು ಬಲೆಗೆ ಬೀಳುತ್ತವೆ. ಹಾಗಾಗಿ ಫಡ್‌ಲೈಟ್‌ ಫಿಶ್ಶಿಂಗ್‌ ತಡೆಯಬೇಕು. ಪ್ಲಡ್‌ಲೈಟ್‌ ಫಿಶ್ಶಿಂಗ್‌ ಮಾಡುವವರ ಲೈಸೆನ್ಸ ರದ್ದು ಮಾಡಬೇಕು ಎಂದು ಡಿಸಿಗೆ ವಿನಂತಿಸಿದರು.

ಕಾಣೆಯಾಗುತ್ತಿದೆ ಮೀನು ಸಂತತಿ:
ನಾಡದೋಣಿ ಮೀನುಗಾರರಿಗೆ ಈ ಹಿಂದೆ ಸಿಗುತ್ತಿದ್ದ ಸಣ್ಣ ಮೀನುಗಳು ಸಿಗುತ್ತಿಲ್ಲ. ತಿಪ್ಪೆ, ಬಣಗು, ಸಮುದಾಳೆ, ಜಾಲಿ ಮೀನುಗಳು ಬಲೆಗೆ ಬೀಳುತ್ತಿಲ್ಲ.
ಈ ಸಂತತಿ ವಿನಾಶದ ಅಂಚಿನಲ್ಲಿವೆ. ಹಾಗಾಗಿ ಜಿಲ್ಲಾಡಳಿತ ಬೆಳಕಿನ ಮತ್ಸ ಬೇಟೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ: ಮನವಿ ಸ್ವೀಕರಿಸಿದ  ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮಾತನಾಡಿ ಮೀನುಗಾರಿಕಾ ಅಧಿಕಾರಿಗಳಿಂದ ಮಾತ್ರ ಫಡ್‌ಲೈಟ್‌ ಫಿಶ್ಶಿಂಗ್‌, ಬುಲ್‌ಟ್ರಾಲ್‌ ಮೀನುಗಾರಿಕೆ ತಡೆಯಲು ಆಗದು. ಅಕ್ರಮ ಮೀನುಗಾರಿಕೆ ಮಾಡುವವರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿ, ಅಂಥವರ ವಿರುದ್ಧ ಕ್ರಮಕ್ಕೆ ಮೀನುಗಾರರು ಸಹಕರಿಸಬೇಕು ಹೇಳಿದರು.

ಮುಖಂಡರಾದ ಸೋಮಯ್ಯ ಹರಿಕಂತ್ರ, ಕೃಷ್ಣ, ಮಹಾದೇವ, ಪಾಂಡುರಂಗ ಕಿರ್ಲೋಸ್ಕರ್‌, ದೇವರಾಯ ಸೈಲ್‌, ರಮೇಶ್‌ ಮೇಥಾ, ಮಂಕಾಳಿ
ಅಂಬಿಗ, ಜ್ಞಾನೇಶ್ವರ ದತ್ತಾ ಮೋರ್ಜೆ, ಗಣಪತಿ ಅಘನಾಶಿನಿ, ಇಬ್ರಾಹಿಂ ಅಬ್ದುಲ್‌ ಇಂಗ್ರೇಜಿ ವನ್ನಳ್ಳಿ, ಅಬ್ದುಲ್‌ ಅದಮ್‌ ಕಬಿಲ್‌ದಾರ, ಥಾಕೂ
ದುಗೇìಕರ್‌, ವೆಂಕಟೇಶ್‌ ಭಟ್ಕಳ, ಸೋಮಯ್ಯ ಭಟ್ಕಳ, ಎನ್‌.ಎಸ್‌.ಅಂಬಿಗ ಸೇರಿದಂತೆ ಸಾವಿರಾರು ಜನ ನಾಡದೋಣಿ ಮತ್ತು ಸಂಪ್ರದಾಯಿಕ
ಮೀನುಗಾರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.