ಅಂಚೆ ಇಲಾಖೆ ಪಾರ್ಸೆಲ್ ಕಳೆದರೆ ಪರಿಹಾರ ನೀಡಬೇಕು: ಗ್ರಾಹಕ ಕೋರ್ಟ್
Team Udayavani, Jan 9, 2018, 6:10 PM IST
ಅಹಮದಾಬಾದ್: ಭಾರತೀಯ ಅಂಚೆ ಇಲಾಖೆ ಪಾರ್ಸೆಲ್ಗಳನ್ನು ಕಳೆದು ಹಾಕಿದರೆ ಪರಿಹಾರ ನೀಡದೇ ಕೈತೊಳೆದುಕೊಳ್ಳುವುದು ಅತ್ಯಂತ ಸಾಮಾನ್ಯ ಸಂಗತಿ. ಆದರೆ ಇನ್ನು ಈ ನೀತಿ ಮುಂದುವರಿಯುವುದಿಲ್ಲ.
ಅಹಮದಾಬಾದ್ನ ಉದ್ಯಮಿ ಶ್ರೀಪಾಲ್ ಷಾ ನೀಡಿದ ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ, ಕಳೆದು ಹೋದ ಪಾರ್ಸೆಲ್ನ ಮೌಲ್ಯ ಹಾಗೂ ಗ್ರಾಹಕರಿಗೆ ಉಂಟಾದ ತೊಂದರೆಗಾಗಿ ಪರಿಹಾರ ನೀಡುವಂತೆ ಸೂಚಿಸಿದೆ.
2015ರಲ್ಲಿ ಕಳುಹಿಸಿದ ಒಂದು ಪಾರ್ಸೆಲ್ ಕಳೆದು ಹಾಕಿದ್ದ ಅಂಚೆ ಇಲಾಖೆ, ಪರಿಹಾರ ನೀಡಲು ನಿರಾಕರಿಸಿತ್ತು. ಆದರೆ ಪಾರ್ಸೆಲ್ನ ಸಾಮಗ್ರಿ ಮೌಲ್ಯ 28 ಸಾವಿರ ರೂ. ಹಾಗೂ ಶೇ. 19 ರಂತೆ ಬಡ್ಡಿ ಮತ್ತು 5 ಸಾವಿರ ರೂ. ಪರಿಹಾರವನ್ನು ಷಾಗೆ ನೀಡುವಂತೆ ಆದೇಶಿಸಿದೆ.