ಸಂಸದರು, ಶಾಸಕರ ವಕೀಲ ವೃತ್ತಿಗೆ ಕೊಕ್?
Team Udayavani, Jan 11, 2018, 6:00 AM IST
ಹೊಸದಿಲ್ಲಿ: ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ರಾಜಕಾರಣಿಗಾಗಿ ಎತ್ತರಕ್ಕೆ ಬೆಳೆದಿರುವ ಕಪಿಲ್ ಸಿಬಲ್, ಪಿ. ಚಿದಂಬರಂ, ಅಭಿಷೇಕ್ ಮನು ಸಿಂ Ì ಅವರಂಥ ಘಟಾನುಘಟಿಗಳು ತಮ್ಮ ವಕೀಲಿಕೆ ವೃತ್ತಿ ತೊರೆಯಬೇಕಾದ ಸಂದರ್ಭ ಎದುರಾಗಿದೆಯೇ? “ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ’ (ಬಿಸಿಐ) ದೇಶದ ರಾಜಕಾರಣಿ-ಕಂ-ವಕೀಲ ವೃತ್ತಿಯ ಸುಮಾರು 500ಕ್ಕೂ ಹೆಚ್ಚು ಸಂಸದರು, ಶಾಸಕರಿಗೆ ನೋಟಿಸ್ ಜಾರಿಗೊಳಿಸಿ ಈ ಕುರಿತು ಪ್ರತಿಕ್ರಿಯೆ ಕೋರಿದೆ.
ಜನಪ್ರತಿನಿಧಿಗಳು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳದಂತೆ ಆದೇಶಿಸಬೇಕೆಂದು ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ್ ಮನವಿಗೆ ಸ್ಪಂದಿಸಿರುವ ಬಿಸಿಐ, ಈ ಪ್ರಕರಣವನ್ನು ಬಿಸಿಐ ತಜ್ಞರ ಸಮಿತಿಗೆ ವಹಿಸಿತ್ತು. ಇದೀಗ, ತಜ್ಞರ ಸಮಿತಿ ಈ ನೋಟಿಸ್ ಜಾರಿಗೊಳಿಸಿದೆ.
ಮೇಲ್ಮನವಿಯಲ್ಲೇನಿದೆ?: ಯಾವುದೇ ನ್ಯಾಯಾಧೀಶರಿಗೆ ವಾಗ್ಧಂಡನೆ ವಿಧಿಸುವ ಅಧಿಕಾರ ಶಾಸಕರು, ಸಂಸದರಿಗಿರುತ್ತದೆ. ಹಾಗಾಗಿ, ಯಾವುದೇ ಜನಪ್ರತಿನಿಧಿಯು ನ್ಯಾಯಾಲಯ ದಲ್ಲಿ ವಾದ ಮಂಡಿಸುವಾಗ ನ್ಯಾಯಪೀಠದಲ್ಲಿ ಕುಳಿತಿರುವ ನ್ಯಾಯಾಧೀಶ “ಸ್ವಹಿತಾಸಕ್ತಿ ಸಂಘ ರ್ಷ’ದ ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇರು ತ್ತದೆ. ವಾಗ್ಧಂಡನೆ ಭೀತಿಯಿಂದಾಗಿ ವಾದ ಮಂಡಿ ಸುವ ಸಂಸದ, ಶಾಸಕರ ಪರವಾಗಿ ನ್ಯಾಯ ನೀಡುವ ಅನಿವಾರ್ಯತೆಗೆ ಒಳಗಾಗು ತ್ತಾನೆ ಎಂಬುದು ಉಪಾಧ್ಯಾಯ್ ಅವರ ವಾದ.
ಮತ್ತೂಂದು ವಿಚಾರವೆಂದರೆ, ಸರ್ಕಾರಿ ನೌಕರರು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳ ಬಾರದೆಂಬ ನಿಯಮವಿದೆ. ದೇಶದ ಎಲ್ಲಾ ಸಂಸದರು ಹಾಗೂ ಶಾಸಕರು ಸರಕಾರದ ನಿಧಿಯಿಂದಲೇ ತಮ್ಮ ವೇತನ ಪಡೆಯುವು ದರಿಂದ ಅವರೂ ಸರ್ಕಾರಿ ನೌಕರರೆಂದೇ ಪರಿಗಣಿಸಲ್ಪಡುತ್ತಾರೆ. ಈ ಹಿನ್ನೆಲೆಯಲ್ಲೂ ಅವರನ್ನು ವಕೀಲಿಕೆಯಿಂದ ದೂರವಿಡಬೇಕೆಂದು ಉಪಾಧ್ಯಾಯ್ ಮನವಿಯಲ್ಲಿ ಹೇಳಿದ್ದಾರೆ.
ಯಾರ್ಯಾರಿಗೆ ನೋಟಿಸ್?
ಅರುಣ್ ಜೇಟಿÉ, ಕಪಿಲ್ ಸಿಬಲ್, ಪಿ. ಚಿದಂಬರಂ, ಕೆಟಿಎಸ್ ತುಳಸಿ, ಅಭಿಷೇಕ್ ಮನು ಸಿಂ Ì, ಕಲ್ಯಾಣ್ ಬ್ಯಾನರ್ಜಿ ಹಾಗೂ ಮೀನಾಕ್ಷಿ ಲೇಖೀ ಮುಂತಾದವರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ವಾರದೊಳಗೆ ಇದಕ್ಕೆ ಉತ್ತರಿಸುವಂತೆ ಸೂಚಿಸಲಾಗಿದೆ. ಪ್ರಕರಣದ ಅಂತಿಮ ವಿಚಾರಣೆ ಜ. 22ಕ್ಕೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು