ಗೋದಾಮುಗಳಿಗೂ ಬಯೋಮೆಟ್ರಿಕ್: ಖಾದರ್
Team Udayavani, Jan 14, 2018, 6:25 AM IST
ಧಾರವಾಡ: ನ್ಯಾಯಬೆಲೆ ಅಂಗಡಿಗಳಿಗೆ ಧಾನ್ಯ ಸರಬರಾಜು ಮಾಡುವ ಗೋದಾಮುಗಳಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲು ರಾಜ್ಯ ಸರ್ಕಾರ ಚಿಂತಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ. ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋದಾಮುಗಳಲ್ಲಿ ಪಡಿತರ ಸುರಕ್ಷತೆ ದೃಷ್ಟಿಯಿಂದ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲಾಗುವುದು. ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಈಗಾಗಲೇ ಅವುಗಳನ್ನು ರದ್ದುಗೊಳಿಸಿದ್ದು, ಆನ್ಲೈನ್ ಮೂಲಕವೇ ಪಡಿತರ ಚೀಟಿ ಅರ್ಜಿ ಸ್ವೀಕರಿಸಿ ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ. ಆನ್ಲೈನ್ ಸಹಾಯದಿಂದಲೇ ಪಡಿತರ ವಿತರಣೆಯೂ ನಡೆಯುತ್ತಿದೆ ಎಂದರು.
ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ 20 ಸಾವಿರ ಕ್ವಿಂಟಲ್ ಗೋಧಿಗೆ ಹುಳು ಹಿಡಿದ ಪ್ರಕರಣದ ವರದಿ ಇನ್ನೂ ಕೈ ಸೇರಿಲ್ಲ. ಈಗಾಗಲೇ ಅದನ್ನು ಪ್ರಾಣಿಗಳಿಗೆ ಕೊಡಬೇಕಾ ಅಥವಾ ಪ್ರಾಣಿಗಳಿಗೆ ಕೊಡಲೂ ಯೋಗ್ಯವಿಲ್ಲದೇ ಹೋದರೆ ನಾಶಪಡಿಸಬೇಕಾ ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ ಎಂದರು.
ರಾಜ್ಯದಲ್ಲಿ 15.5 ಲಕ್ಷ ಜನ ಪಡಿತರ ಚೀಟಿಗೆ ಅರ್ಜಿ ಹಾಕಿದ್ದರು. ಈ ಪೈಕಿ 1.5 ಲಕ್ಷ ಅರ್ಜಿಗಳು ಮನೆ ವಿಳಾಸ ಸರಿ ಇಲ್ಲದ ಕಾರಣ ಬಾಕಿ ಉಳಿದಿವೆ. ಉಳಿದ 14 ಲಕ್ಷ ಅರ್ಜಿಗಳ ಪೈಕಿ 12ಲಕ್ಷ ಜನರಿಗೆ ಪಡಿತರ ಚೀಟಿ ಅಂಚೆ ಮೂಲಕ ತಲುಪಿದೆ. ಇನ್ನುಳಿದವು ಜನವರಿ ತಿಂಗಳಾಂತ್ಯಕ್ಕೆ ಫಲಾನುಭವಿಗಳ ಕೈ ಸೇರಲಿವೆ. ರಾಜ್ಯದಲ್ಲಿ ಈಗಾಗಲೇ 8.50 ಲಕ್ಷ ಬೋಗಸ್ ಕಾರ್ಡ್ಗಳನ್ನು ರದ್ದು ಮಾಡಿದ್ದೇವೆ.
– ಯು.ಟಿ. ಖಾದರ್, ಆಹಾರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ