ದಾವೋಸ್‌ನಲ್ಲಿ ಮೋದಿ ಮೋಡಿ


Team Udayavani, Jan 22, 2018, 6:00 AM IST

davos.jpg

ಹೊಸದಿಲ್ಲಿ: ಭಾರತದ ಆರ್ಥಿಕ ಸುಸ್ಥಿ ರತೆಯನ್ನು ವಿಶ್ವಮಟ್ಟದಲ್ಲಿ ಪ್ರಚುರಗೊಳಿಸಲು ಸ್ವಿಟ್ಸರ್ಲೆಂಡ್‌ನ‌ ದಾವೋಸ್‌ನಲ್ಲಿ ಆರಂಭವಾಗ ಲಿರುವ ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

1997ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ. ದೇವೇ ಗೌಡರ ಬಳಿಕ ಈ ಸಮ್ಮೇಳನಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಭಾಷಣದ ಗೌರವ ಸಿಕ್ಕಿದೆ. ಈ ಭಾಷಣ ದಲ್ಲಿ ಕುಸಿಯುತ್ತಿರುವ ಜಾಗತಿಕ ಆರ್ಥಿಕತೆ
ಯನ್ನು ಉತ್ತೇಜಿಸಲು ಭಾರತವೇ ಸೂಕ್ತ ಎಂಜಿನ್‌ ಎಂಬ ಸಂದೇಶವನ್ನು ಸಾರಲಿದ್ದಾರೆ.

ಯೋಗ ಕಾರ್ಯಕ್ರಮ: ವಿಶ್ವ ಮಟ್ಟದಲ್ಲಿ ಯೋಗ ವನ್ನು ಪ್ರಚುರಪಡಿಸುವ ಉದ್ದೇಶದಿಂದ ಯೋಗ ತರಗತಿಯನ್ನು ದಾವೋಸ್‌ನಲ್ಲಿ ಗಣ್ಯರಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ದಿನ ಎರಡು ಬಾರಿ, ಸಂಜೆ ಹಾಗೂ ಬೆಳಗ್ಗೆ ಭಾರತದ ಇಬ್ಬರು ಯೋಗ ಶಿಕ್ಷಕರು ಗಣ್ಯರಿಗೆ ಯೋಗ ಪಾಠ ಮಾಡಲಿದ್ದಾರೆ.

24 ಗಂಟೆಗಳಲ್ಲಿ ನೂರಾರು ಗಣ್ಯರ ಭೇಟಿ: ಪ್ರಧಾನಿ ಮೋದಿ ದಾವೋಸ್‌ ಪ್ರವಾಸದ ಅವಧಿ ಕೇವಲ 24 ಗಂಟೆ! ಆದರೆ ಈ ಪ್ರವಾಸ ಅತ್ಯಂತ ಪ್ರಮುಖವಾಗಿರಲಿದೆ. ಅಷ್ಟೇ ಅಲ್ಲ, ನೂರಕ್ಕೂ ಹೆಚ್ಚು ಗಣ್ಯರನ್ನು ಈ ಅವಧಿಯಲ್ಲಿ ಭೇಟಿ ಮಾಡಲಿದ್ದಾರೆ. ಸೋಮವಾರ ರಾತ್ರಿ ವಿವಿಧ ದೇಶಗಳ ಪ್ರಮುಖ ಸಿಇಒಗಳ ಜತೆ ಔತಣ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಇದರಲ್ಲಿ ಭಾರತದ 20 ಮತ್ತು ಇತರ ದೇಶಗಳ 40 ಉದ್ಯಮಿಗಳು ಭಾಗವಹಿಸಲಿದ್ದಾರೆ. ಮಂಗಳ ವಾರ ಆರಂಭಿಕ ಭಾಷಣ ಮಾಡಲಿರುವ ಮೋದಿ, ಭಾರತದ ಆರ್ಥಿಕತೆಯ ಸುಸ್ಥಿರತೆ ಮತ್ತು ಜಾಗತಿಕ ಆರ್ಥಿಕತೆಗೆ ಭಾರತ ನೀಡಬಹುದಾದ ಕೊಡುಗೆಯ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ ವಿಶ್ವ ಆರ್ಥಿಕ ವೇದಿಕೆಯ ಅಂತಾರಾಷ್ಟ್ರೀಯ ವ್ಯಾಪಾರ ಸಮುದಾಯದ 120 ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಸ್ವಿಟ್ಸರ್ಲೆಂಡ್‌ ಅಧ್ಯಕ್ಷ ಅಲಿಯನ್‌ ಬೆರ್ಸೆಟ್‌, ಇತರ ಮುಖಂಡರೊಂದಿಗೆ ಪ್ರತ್ಯೇಕ ಮಾತುಕತೆಯನ್ನೂ ಅವರು ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ದಾವೋಸ್‌ಗೆ ಭೇಟಿ ನೀಡಲಿದ್ದು, ಮೋದಿ ಹಾಗೂ ಟ್ರಂಪ್‌ ವೇಳಾಪಟ್ಟಿ ಹೊಂದಾಣಿಕೆ ಯಾಗದ್ದರಿಂದ ಇಬ್ಬರ ಭೇಟಿ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಪಾಕ್‌ ಪ್ರಧಾನಿ ಶಾಹಿದ್‌ ಕಖಾನ್‌ ಅಬ್ಟಾಸಿ ಕೂಡ ದಾವೋಸ್‌ಗೆ ಪ್ರಯಾಣಿಸ ಲಿದ್ದಾರೆ. ಇವರನ್ನೂ ಮೋದಿ ಭೇಟಿ ಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾರುಖ್‌ ಖಾನ್‌ಗೆ ಸನ್ಮಾನ: ಸೋಮವಾರ ಸಂಜೆ ವಿಶ್ವ ಆರ್ಥಿಕ ವೇದಿಕೆಯ ಚೇರ¾ನ್‌ ಕ್ಲಾಸ್‌ ಶ್ವಾಬ್‌ ಸ್ವಾಗತ ಸಂದೇಶವನ್ನು ಓದುವ ಮೂಲಕ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಬಳಿಕ ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಕ್ರಿಸ್ಟಲ್‌ ಅವಾರ್ಡ್ಸ್ ನೀಡಿ ಪುರಸ್ಕರಿಸಲಾಗುತ್ತದೆ. ವಿಶ್ವಕ್ಕೆ ನೀಡಿದ ಕೊಡುಗೆಗಾಗಿ ಈ ಪುರಸ್ಕಾರ ನೀಡಲಾಗುತ್ತಿದ್ದು, ಶಾರುಖ್‌ ಜತೆಗೆ ಆಸ್ಟ್ರೇಲಿಯ ನಟಿ ಕೇಟ್‌ ಬ್ಲಾನ್‌ಚೆಟ್‌ ಮತ್ತು ಸಂಗೀತಗಾರ ಎಲ್ಟನ್‌ ಜಾನ್‌ ಕೂಡ ಪುರಸ್ಕರಿಸಲ್ಪಡಲಿದ್ದಾರೆ.

ದಾವೋಸ್‌ನಲ್ಲಿ  ಏನೇನು ನಡೆಯುತ್ತೆ?
–  ಡಬುÉ éಇಎಫ್ ಸದಸ್ಯರಿಗೆ ಭಾರತದಿಂದ ಸ್ವಾಗತ ಕೂಟ ಆಯೋಜನೆ, 1,500 ಗಣ್ಯರು ಭಾಗವಹಿಸಿ ಭಾರತದ ಸಂಸ್ಕೃತಿ, ಆಹಾರ ಹಾಗೂ ಪರಂಪರೆಯನ್ನು ಆಸ್ವಾದಿಸುವ ನಿರೀಕ್ಷೆ

– 23ರಂದು ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ. 190 ದೇಶಗಳ ಒಟ್ಟು  2,000 ಗಣ್ಯರು ಭಾಗವಹಿಸುವ ನಿರೀಕ್ಷೆ

–  ಸ್ವಿಟ್ಸರ್ಲೆಂಡ್‌ ಅಧ್ಯಕ್ಷ ಅಲೈನ್‌ ಬೆರ್ಸೆಟ್‌ಜತೆ ಮೋದಿ ಮಾತುಕತೆ.

–  ಜ. 22ರಂದು ಪ್ರಮುಖ 60 ಸಿಇಒ ಗಳೊಂದಿಗೆ ಮೋದಿ ಔತಣಕೂಟ

–  ಜ. 23ರಂದು ಹೂಡಿಕೆ ಸಮುದಾಯದ  120 ಸದಸ್ಯರ ಜತೆ ಮೋದಿ ಸಂವಾದ‌.

–  ಜನರಲ್‌ ಮೋಟಾರ್ಸ್‌, ಸೇಲ್ಸ್‌ಫೋರ್ಸ್‌, ನೆಸ್ಲೆ, ಜೆಪಿ ಮಾರ್ಗನ್‌ನಂತಹ ಬೃಹತ್‌ ಕಂಪೆನಿಗಳ ಅಧಿಕಾರಿಗಳ ಜತೆಗೆ ಭಾರತದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಮಾತುಕತೆ.

–  ಸಚಿವರಾದ ಅರುಣ್‌ ಜೇಟಿÉ , ಸುರೇಶ್‌ ಪ್ರಭು, ಧರ್ಮೇಂದ್ರ ಪ್ರಧಾನ್‌, ಪಿಯೂಶ್‌ ಗೋಯಲ್‌, ಜಿತೇಂದ್ರ ಸಿಂಗ್‌ ಮತ್ತು ಎಂ.ಜೆ. ಅಕºರ್‌ ಸಂವಾದಗಳಲ್ಲಿ ಭಾಗಿ.

– ಡಬುÉ éಇಎಫ್ ಸಭೆಯಲ್ಲಿ 400 ಸಂವಾದ ನಡೆಯಲಿದ್ದು, 2,000 ಸಿಇಒಗಳು, ಜಾಗತಿಕ ಸಂಸ್ಥೆಗಳು, ಸರಕಾರಿ ಮುಖ್ಯಸ್ಥರು ಭಾಗಿ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.