ಹಿಂದೂ ಸಂಘಟನೆಗಳಿಂದ ಭಯೋತ್ಪಾದಕ ಚಟುವಟಿಕೆ: ಮಟ್ಟು


Team Udayavani, Jan 31, 2018, 12:45 PM IST

31-28.jpg

ಮಂಗಳೂರು: ನಾಥೂರಾಮ್‌ ಗೋಡ್ಸೆಯ ಬೂದಿಯನ್ನು ಇಟ್ಟು ಇಂದಿಗೂ ಪೂಜೆ ಮಾಡಲಾಗುತ್ತದೆ. ಅದೇ ಮೂಲದಿಂದ ಹುಟ್ಟಿದ ಹಿಂದೂ ಸಂಘಟನೆಗಳು ಬೇರೆ ಬೇರೆ ರೀತಿಯ ಭಯೋತ್ಪಾದಕ ಕೆಲಸಗಳಲ್ಲಿ ನಿರತವಾಗಿವೆ. ಗೋಡ್ಸೆಗೆ ಗುಡಿ ಕಟ್ಟಲು ಹೊರಟಿದ್ದಾರೆ. ಆದರೆ ಗಾಂಧೀಜಿಗೆ ಚಪ್ಪಲಿ ಹಾರ ಹಾಕಿದ್ದರೂ ಪ್ರತಿಭಟನೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಮಾನವ ಸರಪಳಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಗೌರಿ ಲಂಕೇಶ್‌ ಸಾವನ್ನು ಲಕ್ಷಾಂತರ ಮಂದಿ ಸಂಭ್ರಮಿಸುತ್ತಾರೆ. ಇದು ನಾವು ತಲುಪಿರುವ ಅಧೋಗತಿಗೆ ಉದಾಹರಣೆ. ಚುನಾವಣೆಯಲ್ಲಿ ಅಬಿವೃದ್ಧಿ, ಭ್ರಷ್ಟಾಚಾರ ವಿಷಯದ ಚರ್ಚೆಯಾಗಬೇಕೇ ಹೊರತು, ದೇವರನ್ನು ಚುನಾವಣೆಯ ಪೋಸ್ಟರನ್ನಾಗಿ ಮಾಡಬಾರದು ಎಂದರು.

ಕಲ್ಲಡ್ಕ ಪ್ರಭಾಕರ ಭಟ್ಟರಿಂದ ನಾರಾಯಣ ಗುರುಗಳಿಗೆ ಅವಮಾನ ಆರ್‌ಎಸ್‌ಎಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರು ಜನಾರ್ದನ ಪೂಜಾರಿ ಅವರ ಆತ್ಮಕತೆ ಬಿಡುಗಡೆ ಸಮಾರಂಭಕ್ಕೆ ಕುದ್ರೋಳಿಗೆ ಆಗಮಿಸಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮಾಡಿದ ಅವಮಾನವಾಗಿದೆ ಎಂದು ಮಟ್ಟು ಹೇಳಿದ್ದಾರೆ.

ಯಾರು ನಮ್ಮ ಶತ್ರುಗಳು, ಯಾರು ನಮ್ಮ ಮಿತ್ರರು ಎನ್ನುವುದನ್ನು ಗುರುತಿಸುವ ಶಕ್ತಿ ನಮ್ಮಲ್ಲಿರಬೇಕು. ಇದು ಯುದ್ಧದ ಕಾಲವೇ ಹೊರತು ಶಾಂತಿಯ ಕಾಲವಲ್ಲ. ಸಮಾನ ಮನಸ್ಕ ರೆಲ್ಲರೂ ಜತೆಗೂಡಬೇಕು. ಆದರೆ ಯಾರನ್ನು ದೂರ ಇಡಬೇಕೋ ಅದನ್ನು ಯೋಚನೆ ಮಾಡ ಬೇಕಿದೆ. ಸ್ವಾರ್ಥಕ್ಕಾಗಿ ರಾಜಕೀಯ ಉದ್ದೇಶಕ್ಕಾಗಿ ಸೈದ್ಧಾಂತಿಕ ರಾಜಿ ಮಾಡಬಾರದು. ಆಗ ಮಾತ್ರ ಸೌಹಾರ್ದ ಪರಂಪರೆಯನ್ನು ಗಟ್ಟಿ ನೆಲದಲ್ಲಿ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದರು.

ಮನುಷ್ಯ ವಿರೋಧಿಗಳಿದ್ದಾರೆ
20 ವರ್ಷಗಳ ಹಿಂದೆ ನಾನು ದಕ್ಷಿಣ ಕನ್ನಡದವ ಎಂದು ಎದೆ ತಟ್ಟಿ ಹೇಳುತ್ತಿದ್ದೆ. ಈ ಜಿಲ್ಲೆಯವರು ಉದ್ಯಮಶೀಲರು, ಮಹತ್ವಾಕಾಂಕ್ಷಿಗಳು, ಸಾಹಸಿ ಗಳು ಎಂಬ ಅಭಿಪ್ರಾಯ ಸಮಾಜದಲ್ಲಿತ್ತು. ಆದರೆ ಇಂದು ಚಿತ್ರಣ ಬದಲಾಗಿದೆ. ದ.ಕ.ದಲ್ಲಿ ಕೋಮುವಾದಿಗಳಿದ್ದಾರೆ, ಮನುಷ್ಯ ವಿರೋಧಿಗಳಿದ್ದಾರೆ ಎಂದು ಸ್ವತಃ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕೂಡ ಹೇಳಿದ್ದಾರೆ ಎಂದು ತಿಳಿಸಿದರು.

ದ.ಕ. ಬಹು ಸಂಸ್ಕೃತಿಯ ತೊಟ್ಟಿಲು. ಆದರೆ ಇದನ್ನು ಇಂದು ಒಡೆದು ಹಾಕಲಾಗುತ್ತಿದೆ. ಮತ್ತೆ ಕಟ್ಟುವ ಕೆಲಸದಲ್ಲಿ ನಾವು ತೊಡಗಬೇಕು. ಕಳೆದ 25 ವರ್ಷಗಳಿಂದ ಕೋಮುವಾದದ ಜ್ವಾಲೆಯಲ್ಲಿ ದಹಿಸುತ್ತಾ ಇದ್ದೇವೆ. ಗಾಂಧೀಜಿ ಅವರು ಸಮಾನತೆ, ಏಕತೆ, ಅಸ್ಪೃಶ್ಯತೆಯ ಬಗ್ಗೆ ಹೋರಾಟ ನಡೆಸಿದ್ದರು. ಗಾಂಧೀಜಿಯ ಈ ಕನಸುಗಳು ಇಂದಿಗೂ ಈಡೇರಿಲ್ಲ ಎಂದರು.

ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಮೇಯರ್‌ ಕವಿತಾ ಸನಿಲ್‌, ವಂ| ವಾಲಿನ್‌ ಡಿ’ಸೋಜಾ, ವಂ| ಜಾನಿಯಲ್‌ ಡಿ’ಸೋಜಾ, ಮಾಜಿ ಮೇಯರ್‌ ಅಶ್ರಫ್‌, ಕಾರ್ಮಿಕ ಮುಂದಾಳು ಸಿಯಾನ್‌, ವಾಸುದೇವ ಬೋಳೂರು, ದೇವದಾಸ್‌, ದಿನೇಶ್‌ ಹೆಗ್ಡೆ, ಚಂದ್ರಕಲಾ ನಂದಾವರ ಮುಂತಾದವರು ಉಪಸ್ಥಿತರಿದ್ದರು.

ಕಲ್ಲಡ್ಕ ಭಟ್‌ ಪ್ರಧಾನಿಯಾ? ರಾಷ್ಟ್ರಪತಿಯಾ?
ಕಲ್ಲಡ್ಕ ಪ್ರಭಾಕರ ಭಟ್‌ ಯಾರು ಎಂದು ತಿಳಿಯಲು ಇತಿಹಾಸವನ್ನು ಓದಬೇಕಾಗಿಲ್ಲ. ಇತ್ತೀಚಿನ ಅವರ ಕೆಲ ಭಾಷಣಗಳನ್ನು ಕೇಳಿದರೆ ಸಾಕು. ಕಾಂಗ್ರೆಸ್‌ ನಾಯಕರಲ್ಲಿ ಅನೇಕರು ಇಂದು ಕಲ್ಲಡ್ಕ ಪ್ರಭಾಕರ್‌ ಭಟ್‌ ಹೆಸರು ಹೇಳಲು ಹೆದರುತ್ತಾರೆ. ಅವರ್ಯಾರು ಪ್ರಧಾನಿಯಾ ? ರಾಷ್ಟ್ರಪತಿಯಾ ? ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಕೊಲೆಯ ವಿಚಾರದಲ್ಲಿ ಜೈಲಿಗೆ ಹೋದವರ ಬಗ್ಗೆ ದ್ವೇಷವಿಲ್ಲ. ಅವರು ಕೇವಲ ಕೈಗಳು ಮಾತ್ರ. ಆ ಕೈಗಳನ್ನು ಆಡಿಸುವ ಮೆದುಳು ಬೇರೆ ಕಡೆ ಇದೆ ಎಂದು ದಿನೇಶ್‌ ಅಮೀನ್‌ ಹೇಳಿದರು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.