ಕೋಸ್ಟ್ಗಾರ್ಡ್ಗೆ ಇಂಟರ್ಸೆಪ್ಟರ್ ಬೋಟ್ ಹಸ್ತಾಂತರ
Team Udayavani, Feb 1, 2018, 9:30 AM IST
ಪಣಂಬೂರು: ಭಾರತೀ ಡಿಫೆನ್ಸ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಡಿಐಎಲ್) ಸಂಸ್ಥೆಯ ಮಂಗಳೂರು ಯಾರ್ಡ್ನಲ್ಲಿ ತಯಾರಾದ ಇಂಟರ್ಸೆಪ್ಟರ್ ಬೋಟನ್ನು ಬುಧವಾರ ಕೋಸ್ಟ್ ಗಾರ್ಡ್ಗೆ ಹಸ್ತಾಂತರಿಸಲಾಯಿತು. ಕೊನೆಯ ಹಂತದ ತಪಾಸಣೆ ಬಳಿಕ ಫೆ. 20ರಿಂದ ಈ ಬೋಟು ಸಮುದ್ರದಲ್ಲಿ ಕಣ್ಗಾವಲು ನಿರತವಾಗಲಿದೆ.
ಬುಧವಾರ ತಣ್ಣೀರು ಬಾವಿಯಲ್ಲಿರುವ ಬಿಡಿಐಎಲ್ಗೆ ಸೇರಿದ ರಾಜ್ಯದ ಅತೀ ದೊಡ್ಡ ಹಡಗು ಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲ್ಪಾ ಕೋಯರ್ ಅವರು ತೆಂಗಿನಕಾಯಿ ಒಡೆ ಯುವ ಮೂಲಕ ಬೋಟನ್ನು ನೀರಿ ಗಿಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
500 ಕೋಟಿ ರೂ. ಒಪ್ಪಂದ
ಭಾರತದ ರಕ್ಷಣಾ ಇಲಾಖೆಯು ನೌಕಾ ಸೇನೆ, ಕೋಸ್ಟ್ ಗಾರ್ಡ್ಗೆ ಕಣ್ಗಾವಲು ನೌಕೆ ಸಹಿತ 15 ಸ್ಪೀಡ್ ಇಂಟರ್ಸೆಪ್ಟರ್ ಬೋಟ್ಗಳನ್ನು ತಯಾ ರಿಸಿಕೊಡಲು ಬಿಡಿಐಎಲ್ ಜತೆ ಸುಮಾರು 500 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ. ಸ್ಪೀಡ್ ಬೋಟ್ ಆವೃತ್ತಿಯಲ್ಲಿ ಇದು 6ನೆಯದು. ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕರ್ನಾಟಕ ವಿಭಾಗದ ಡಿಐಜಿ ಎಸ್.ಎಸ್. ದಸೀಲಾ, ಗೋವಾ ವಿಭಾಗದ ಡಿಐಜಿ ಅತುಲ್ ಪರ್ಲಿಕರ್ ಮತ್ತಿತರ ಅ ಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀ ಡಿಫೆನ್ಸ್ ಆ್ಯಂಡ್ ಇನ್ಫ್ರಾ ಸ್ಟ್ರಕ್ಚರ್ ಲಿಮಿಟೆಡ್ನ ಮಂಗಳೂರು ಯಾರ್ಡ್ನ ಪರವಾಗಿ ಚೀಫ್ ಆಪ ರೇಟಿಂಗ್ ಆಫೀಸರ್ ನಿವೃತ್ತ ಡಿಐಜಿ ನರೇಂದ್ರ ಕುಮಾರ್ ಸಿಂಗ್, ಮಂಗಳೂರು ಯಾರ್ಡ್ನ ಅಧ್ಯಕ್ಷ ಹಾಗೂ ಶಿಪ್ ಯಾರ್ಡ್ ಮುಖ್ಯಸ್ಥ ಪವಿತ್ರನ್ ಆಲೋಕನ್, ಜನರಲ್ ಮ್ಯಾನೇಜರ್ ಎಂ.ಎನ್. ಮಹೇಶ್ ಉಪಸ್ಥಿತರಿದ್ದರು.
ವಿಶೇಷತೆ
ವೆಸ್ಸೆಲ್ 5-410 ಸರಣಿಯ ಈ ಇಂಟರ್ಸೆಪ್ಟರ್ ಬೋಟ್ ಗಂಟೆಗೆ 35 ನಾಟಿಕಲ್ ಮೈಲ್ ಕ್ರಮಿಸುವ ಶಕ್ತಿ ಹೊಂದಿದ್ದು, ಮೀನುಗಾರರ ರಕ್ಷಣೆ, ಸಮುದ್ರ ಕಳ್ಳಸಾಗಣೆ ತಡೆ ಮತ್ತಿತರ ಕಾರ್ಯಾಚರಣೆಗಳಿಗೆ ಬಳಸ ಬಹುದಾಗಿದೆ. ಎರಡು ಪ್ರಬಲ ಎಂಜಿನ್ಗಳನ್ನು ಬೋಟ್ ಒಳಗೊಂಡಿದ್ದು ಅಲ್ಯೂಮಿನಿಯಂ ಹಲ್ನಿಂದ ತಯಾರಿಸಲಾಗಿದೆ. 28 ಮೀ. ಉದ್ದ, 60 ಟನ್ ಭಾರವಿದ್ದು 11 ಸಿಬಂದಿ ಗಸ್ತು ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…