ಮದ್ವೆ ಕಾರ್ಡ್ ಕೊಡಲು ಬಂದವ ದಂಪತಿಗೆ ಇರಿದು ದರೋಡೆಗೈದ!
Team Udayavani, Feb 1, 2018, 10:20 AM IST
ಹಾಸನ: ಅಣ್ಣನ ಮದುವೆಗೆಂದು ಆಮಂತ್ರಣ ಪತ್ರಿಕೆ ನೀಡಲು ಬಂದವ ದಂಪತಿಗೆ ಚೂರಿಯಿಂದ ಇರಿದು 3 ಲಕ್ಷ ರೂಪಾಯಿಗೂ ಹೆಚ್ಚು ನಗ, ನಗದನ್ನು ದೋಚಿ ಪರಾರಿಯಾದ ಕಳವಳಕಾರಿ ಘಟನೆ ಬುಧವಾರ ರಾತ್ರಿ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.
ಇಮ್ರಾನ್ ಎಂಬಾತ ತಾನು ಕೆಲಸಕ್ಕೆ ಬರುತ್ತಿದ್ದ ಮನೆಯ ಮಾಲೀಕರಾದ ವಾಗೀಶ್ (61) ಮತ್ತು ಸಾವಿತ್ರಿ (55) ಎನ್ನುವವರ ಮನೆಗೆ ಬಂದು ಅಣ್ಣನ ಮದುವೆ ಆಮಂತ್ರಣವನ್ನು ನೀಡಿ ಕಾಫಿಯನ್ನೂ ಸೇವಿಸಿದ್ದಾನೆ. ಬಳಿಕ ದಂಪತಿಗೆ ಇರಿದು 3 ಲಕ್ಷ ರೂಪಾಯಿ ಹಣ ಮತ್ತು ಚಿನ್ನಾಭರಣಗಳ ಸಮೇತ ಪರಾರಿಯಾಗಿದ್ದಾನೆ.
ವಾಗೀಶ್ ಅವರ ಮುಖದ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸಾವಿತ್ರಿ ಅವರ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುವೆಂಪು ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಇಮ್ರಾನ್ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ