ಅಚ್ಚುಕಟ್ಟು ಪ್ರದೇಶದ ಹೃದಯಭಾಗ ಹುಣಸಗಿ


Team Udayavani, Feb 5, 2018, 5:11 PM IST

yad-2.jpg

ಯಾದಗಿರಿ: ಜಿಲ್ಲೆಯಲ್ಲಿ ಬೆಳೆಯುತ್ತಿರುವ ದೊಡ್ಡ ಪಟ್ಟಣಗಳಲ್ಲಿ ಹುಣಸಗಿ ಮುಂಚೂಣಿಯಲ್ಲಿದ್ದು, ತಾಲೂಕು ಕೇಂದ್ರವಾಗಿ ರಚನೆಯಾಗಿದೆ. ಸುರಪುರ ತಾಲೂಕಿನ ಹುಣಸಗಿ ಹಾಗೂ ಕೆಂಭಾವಿ ಪಟ್ಟಣಗಳ ನಡುವೆ ತಾಲೂಕಿಗಾಗಿ ದೊಡ್ಡ ಹೋರಾಟಗಳು, ಪ್ರತಿಭಟನೆಗಳು ನಡೆದಿವೆ. ರಾಜ್ಯ ಸರಕಾರ ಹುಣಸಗಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದು, ಈಗಾಗಲೇ ತಾಲೂಕು ರಚನೆ ಪ್ರಕ್ರಿಯೆಗಳು ನಡೆಯುತ್ತಿವೆ.

ಹುಣಸಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೃದಯ ಭಾಗದಂತಿದೆ. ಇಲ್ಲಿಯ ಜನರ 40 ವರ್ಷದ ಹೋರಾಟದ ಫಲವಾಗಿ ಹುಣಸಗಿ ತಾಲೂಕು ಕೇಂದ್ರವಾಗಿದೆ. ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸುರಪುರ ತಾಲೂಕಿನ ಹುಣಸಗಿ ಬೇರ್ಪಡಿಸುವ ಮೂಲಕ ಸಾಕಷ್ಟು ಅನುಕೂಲತೆಗಳಾಗಲಿವೆ. 2011ರ ಜನಗಣತಿ ಪ್ರಕಾರ ಹುಣಸಗಿ 1,49,068 ಜನಸಂಖ್ಯೆ ಹೊಂದಿದೆ. ಹುಣಸಗಿ ಪಟ್ಟಣದಲ್ಲಿ ವಿಶೇಷ ತಹಶೀಲ್ದಾರ ಕಚೇರಿ, ಹುಣಸಗಿ ವೃತ್ತ ಪೊಲೀಸ್‌ ಕಚೇರಿ, ಪತ್ರಾಂಕಿತ ಉಪ ಖಜಾನೆ ಅಧಿಕಾರಿಗಳ ಕಚೇರಿ, ನೋಂದಣಿ ಕಚೇರಿ, ಜೆಸ್ಕಾಂ ಉಪವಿಭಾಗ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಮುಖ ಕಚೇರಿಗಳು, ನಾರಾಯಣಪುರದಲ್ಲಿ ಮುಖ್ಯ ಇಂಜಿನಿಯರ್‌ ಕಚೇರಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಕೃಷ್ಣಾಭಾಗ್ಯ ಜಲ ನಿಮಗದ ಕ್ಯಾಂಪ್‌ನಲ್ಲಿ 41 ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿ ಕಚೇರಿ ನಿರ್ಮಾಣಕ್ಕೆ ಯಾವುದೇ ಸ್ಥಳದ ಕೊರತೆ ಇಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಹುಣಸಗಿ ತಾಲೂಕು ಘೋಷಣೆಯಿಂದಾಗಿ ಆಡಳಿತಾತ್ಮಕ ಸಾಕಷ್ಟು ಅನುಕೂಲವಾಗಲಿದೆ.

ಪ್ರತಿಯೊಂದು ಕೆಲಸಕ್ಕೆ ಇಲ್ಲಿಯ ಸುತ್ತಮುತ್ತಲಿನ ಗ್ರಾಮಸ್ಥರು ಸುರಪುರಕ್ಕೆ ಹೋಗಬೇಕಾಗಿತ್ತು. ಸಾಕಷ್ಟು ಸಮಯ ಹಾಗೂ ಹಣ ಖರ್ಚಾಗುತ್ತಿದ್ದು, ಅದೆಲ್ಲವೂ ಉಳಿತಾಯವಾಗುತ್ತದೆ. ಅಧಿಕಾರ ವಿಕೇಂದ್ರೀಕರಣದಿಂದಾಗಿ ಸುರಪುರ ಹಾಗೂ ಹುಣಸಗಿ ತಾಲೂಕು ಅಭಿವೃದ್ಧಿಗೆ ಅನುಕೂಲವಾಗಲಿದೆ.

ಹುಣಸಗಿ ತಾಲೂಕು ರಚನೆಯಿಂದ ಆಡಳಿತ ಪಕ್ಷಕ್ಕೆ ಸಾಕಷ್ಟು ರಾಜಕೀಯ ಲಾಭ ದೊರೆಯಲಿದೆ. ಹೊಸ ತಾಲೂಕು ರಚನೆಯಾಗಿದೆ ಎಂಬ ಮನೋಭಾವ ಇಲ್ಲಿಯ ಮತದಾರರಲಿದೆ. ಹುಣಸಗಿ ಹೊಸ ತಾಲೂಕು ಘೋಷಣೆಯಿಂದಾಗಿ ಕೆಂಭಾವಿ ಗ್ರಾಮಸ್ಥರು ಸಹ ಕೆಂಭಾವಿ ತಾಲೂಕು ಎಂದು ಘೋಷಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ತಾಲೂಕು ಕೇಂದ್ರಕ್ಕೆ ಪ್ರಮುಖವಾಗಿ ನ್ಯಾಯಾಲಯ, ತಾಪಂ, ಬಂಧಿಖಾನೆ, ತೋಟಗಾರಿಕೆ, ಕೃಷಿ, ಅಗ್ನಿ ಶಾಮಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಸೇರಿದಂತೆ ವಿವಿಧ ಇಲಾಖೆ ತಾಲೂಕು ಕಚೇರಿಗಳು ಕಾರ್ಯಾರಂಭಿಸಬೇಕಿದೆ.

ಹುಣಸಗಿ ಹೊಸ ತಾಲೂಕಿಗೆ ತೆಗಳ್ಳಿ, ಬದಲಾಪುರ (ಡಿ), ಸಲಗೊಂಡ (ಡಿ), ಕೊಜ್ಜಪುರ (ಡಿ), ಶಾಕಪುರ (ಎಸ್‌.ಕೆ), ಯಡಿಯಾಪುರ, ಕಲ್ಲದೇವನಹಳ್ಳಿ, ಕಾಮನಟಗಿ, ಬಲಶೆಟ್ಟಿ ಹಾಳ, ಕನಗಂಡನಹಳ್ಳಿ, ಬನ್ನಟ್ಟಿ, ದೇವಾಪುರ (ಜೆ), ಹುಣಸಗಿ, ವಜ್ಜಲ, ಚನ್ನೂರ, ಶ್ರೀನಿವಾಸಪುರ, ಮಂಜಲಪುರ ಹಳ್ಳಿ, ಕೋಳಿಹಾಳ, ಇಸ್ಲಾಂಪುರ, ಗುಂಡಲಗೇರಾ, ಆಗ್ನಿ, ಆಗ್ನಿತೀರ್ಥ, ಕರಿಬಾವಿ, ಅಮಲಿಹಾಳ, ಹಂದ್ರಾಳ (ಜೆ), ಅರಕೇರಾ (ಜೆ), ಸದಬಾ, ಯಡಹಳ್ಳಿ, ಬೈಚ್‌ಬಾಳ್‌, ಕನ್ನಳ್ಳಿ, ಕೊಡಳಗಿ, ಮುದನೂರ (ಕೆ), ಮುದನೂರ (ಬಿ), ರಾಮಪುರ, ಹೆಬ್ಟಾಳ (ಬಿ), ಹೆಬ್ಟಾಳ(ಕೆ), ಸಿದ್ದಾಪುರ (ಬಿ), ಬೈಲಾಪುರ, ಹೊಂಬಾಳಕಾಲ್‌, ಸೊನ್ನಾಪುರ, ಹನಮನಾಳ (ಡಿ), ಇಡ್ಲಾಬಾವಿ, ಬೆಂಚಿಗಡ್ಡಿ, ಕತಾಪುರ ಡಿ, ಕಕ್ಕೇರಾ ಹೋಬಳಿಯ ತೋಳದಿನ್ನಿ.

ಕೋಡೆಕಲ್‌ ಹೋಬಳಿಗೆ ಸೇರಿದ ಗ್ರಾಮಗಳು: ಬಸಪುರ, ತಂಗಡಬೈಲ್‌ (ಡಿ), ಗೆದ್ದಲಮರಿ, ಜುಮಲ್‌ಪುರ, ಬೈಲ್‌ಕುಂಟಿ, ಬೊಮ್ಮಗುಡ್ಡ, ಕಡದರಾಳ, ರಾಜಾವಾಳ, ಹನಮಸಾಗರ, ರಾಜನಕೊಳ್ಳೂರು, ತೀರ್ಥ, ಕೊಡೇಕಲ್‌, ರಾಯನಪಾಳ, ಮರನಾಳ, ಎಣ್ಣಿವಡಗೇರಾ, ಕಮಲಪುರ, ಮದಲಿಂಗನಹಾಳ, ನಾರಾಯಣಪುರ, ಜಂಗಿನಗಡ್ಡಿ, ಮೇಲಿನಗಡ್ಡಿ, ಜೊಗುಂಡಭಾವಿ, ಹುಲಿಕೇರಾ, ರಾಯನಗೋಳ, ಕೋಟೆಗುಡ್ಡ, ಅಮ್ಮಾಪುರ (ಎಸ್‌. ಕೆ), ಬರದೇವನಾಳ, ಕುರೇಕನಾಳ, ಯರಕೀಹಾಳ, ಉಪ್ಪಲದ್ದಿನ್ನಿ, ಬಪ್ಪರಗಾ, ಹಗರಟಗಿ, ಬೂದಿಹಾಳ, ಮಾಳನೂರ, ಮರಳಭಾವಿ, ಗುಳಬಾಳ, ಕುಪ್ಪಿ, ದ್ಯಾಮನಾಳ ಗ್ರಾಮಗಳು ಸೇರ್ಪಡೆ ಮಾಡಲಾಗಿದೆ. ರಾಜ್ಯ ಸರಕಾರ ನೂತನ ತಾಲೂಕನ್ನಾಗಿ ಹುಣಸಗಿ ಪಟ್ಟಣವನ್ನು ಮಾಡಲು ಹೊರಟಿದೆ. ಅದರೊಂದಿಗೆ ಸಿಬ್ಬಂದಿಗಳನ್ನು ನೇಮಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಮೂರು ತಾಲೂಕುಗಳನ್ನು ಮಾಡುವ ಜಿಲ್ಲೆಯಲ್ಲಿ ಅಧಿಕಾರ ವೀಕೇಂದ್ರಿಕರಿಸಿದ್ದು, ಅದು ಎಷ್ಟರ ಮಟ್ಟಿಗೆ ಯಶಸ್ಸು ದೊರೆಯುತ್ತದೆ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನೂತನ ತಾಲೂಕುಗಳಲ್ಲಿರುವ ವಿಶೇಷ ತಹಶೀಲ್ದಾರ ಕಚೇರಿಗಳನ್ನೇ ತಾಲೂಕು ಕಚೇರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಕಚೇರಿ ನಿರ್ಮಾಣ ಕಾರ್ಯ
ನಡೆಯಲಿದೆ.  
 ಜೆ. ಮಂಜುನಾಥ, ಜಿಲ್ಲಾಧಿಕಾರಿ, ಯಾದಗಿರಿ

ರಾಜೇಶ ಪಾಟೀಲ ಯಡ್ಡಳಿ

ಟಾಪ್ ನ್ಯೂಸ್

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.