ನೀರಿಗಾಗಿ ವಾರ್‌: ಅಧಿಕಾರಿಗಳಿಂದ ಸಂಧಾನ ಸೂತ್ರ


Team Udayavani, Feb 11, 2018, 6:20 AM IST

Chikmagalur.jpg

ಚಿಕ್ಕಮಗಳೂರು: ಕೆರೆ ನೀರು ಬಿಡುವ ವಿಚಾರವಾಗಿ ಸಖರಾಯಪಟ್ಟಣದಲ್ಲಿ ಉಂಟಾಗಿದ್ದ ಗಲಭೆ ನಿಯಂತ್ರಣಕ್ಕೆ ಬಂದಿದ್ದು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಶನಿವಾರ ಶಾಂತಿ ಸಭೆ ನಡೆಸಿದ್ದಾರೆ. ಅಯ್ಯನಕೆರೆಯಲ್ಲಿ ಇರುವ ನೀರನ್ನು ಬ್ರಹ್ಮಸಮುದ್ರ ಕೆರೆಗೆ ಶೇ.50 ಹಾಗೂ ಸಖರಾಯಪಟ್ಟಣ ಕೆರೆಗೆ ಶೇ.50ರಷ್ಟು ಹಂಚಿಕೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬ್ರಹ್ಮಸಮುದ್ರ ಕೆರೆಗೆ ಅಯ್ಯನಕೆರೆಯಿಂದ ನೀರು ಬಿಡುವ ವಿಚಾರವಾಗಿ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಸಖರಾಯಪಟ್ಟಣದ ಗ್ರಾಮಸ್ಥರ ನಡುವೆ ಶುಕ್ರವಾರ ಮಾರಾಮಾರಿ ನಡೆದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ತರೀಕೆರೆ ಉಪವಿಭಾಗಾಧಿಕಾರಿ ಬಿ.ವಿ. ಸರೋಜ, ಕಡೂರು ತಹಶೀಲ್ದಾರ್‌ ಭಾಗ್ಯ, ತರೀಕೆರೆ ಡಿವೈಎಸ್‌ಪಿ ತಿರುಮಲೇಶ್‌, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಯು.ವಿ.ನಾರಾಯಣ್‌, ಎಇಇ ಚನ್ನಬಸಪ್ಪ ಅಯ್ಯನಕೆರೆಗೆ ತೆರಳಿ ಅಲ್ಲಿ ಇರುವ ನೀರಿನ ಪ್ರಮಾಣ ಕುರಿತು ಪರಿಶೀಲನೆ ನಡೆಸಿದರು. ನಂತರ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಎರಡೂ ಕಡೆಯ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಯು.ವಿ. ನಾರಾಯಣ್‌ ಮಾತನಾಡಿ , ಕೆರೆಯಲ್ಲಿ ಈಗ 4 ಅಡಿ ನೀರು ಲಭ್ಯವಿದೆ. ಕಳೆದ ವರ್ಷ ಮಳೆಗಾಲದ ನಂತರ ಕೆರೆಯಲ್ಲಿ 32 ಅಡಿ ನೀರಿತ್ತು. ಆದರೆ ಈ ವರ್ಷ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕೇವಲ 22 ಅಡಿ ನೀರಿತ್ತು.  ಫೆ.7ರಂದು ಸಖರಾಯಪಟ್ಟಣ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕೆರೆಯಲ್ಲಿ ನೀರು ಕಡಿಮೆ ಇದೆ. ಅದನ್ನೂ ಬಿಟ್ಟರೆ ಸಖರಾಯಪಟ್ಟಣ ಗ್ರಾಮಕ್ಕೆ ಕುಡಿವ ನೀರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು. ಆಗ ಜಿಲ್ಲಾಧಿಕಾರಿಗಳು ನಾಲೆಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದರು ಎಂದು ತಿಳಿಸಿದರು.

ಈಗ ಕೆರೆಯಲ್ಲಿ ಕೇವಲ 4 ಅಡಿ ನೀರಿದೆ. ನೀರನ್ನು ನಾಲೆಯ ಮೂಲಕ ಬ್ರಹ್ಮಸಮುದ್ರ ಕೆರೆಗೆ ಬಿಟ್ಟರೂ ನೀರು ಇಂಗುವುದರಿಂದ ಪೂರ್ಣ ಪ್ರಮಾಣದ ನೀರು ಬ್ರಹ್ಮಸಮುದ್ರ ಕೆರೆ ತಲುಪುವುದಿಲ್ಲ. ಜತೆಗೆ ಮಾರ್ಗ ಮಧ್ಯೆ ಕೆಲವರು ಮೋಟರ್‌ ಮೂಲಕ ನೀರು ತೆಗೆಯುತ್ತಾರೆ. ನೀರು ಬಿಡುವುದರಿಂದ ಬ್ರಹ್ಮಸಮುದ್ರ ಕೆರೆಗೆ ನೀರು ತಲುಪುವುದೂ ಇಲ್ಲ. ಇತ್ತ ಸಖರಾಯಪಟ್ಟಣ ಗ್ರಾಮಕ್ಕೆ ಕುಡಿವ ನೀರು ಒದಗಿಸಲೂ ಆಗುವುದಿಲ್ಲ ಎಂದು ಹೇಳಿದರು.

ಇದಕ್ಕೆ ಒಪ್ಪದ ಬ್ರಹ್ಮಸಮುದ್ರ ಕೆರೆ ವ್ಯಾಪ್ತಿಯ ಗ್ರಾಮಸ್ಥರು,  ನಿರ್ಣಯದಂತೆ ಊರುಕಾಲುವೆ, ಬಸವನಕಾಲುವೆ, ಕಡೆಕಾಲುವೆಗಳಿಗೆ ನೀರು ಬಿಡಲಾಗಿದೆ. ಆದರೆ ಬ್ರಹ್ಮಸಮುದ್ರ ಕೆರೆಗೆ ಮಾತ್ರ ನೀರು ಬಿಟ್ಟಿಲ್ಲ. ಒಬ್ಬೊಬ್ಬರಿಗೊಂದು ನ್ಯಾಯ ಸರಿಯಲ್ಲ ಎಂದು ಕಿಡಿಕಾಡಿದರು. ಕುಡಿಯುವ ನೀರು ಟ್ಯಾಂಕರ್‌ ಆದರೂ ಸರಿ, ಕೆರೆಗೆ ನೀರು ಹರಿಸುವ ಮೂಲಕವಾದರೂ ಸರಿ, ಒಟ್ಟು ಕುಡಿವ ನೀರು ಬಿಡಿ. ಈವರೆಗೂ ಟ್ಯಾಂಕರ್‌ ಮೂಲಕ ನೀರು ಕೊಟ್ಟಿರುವುದಕ್ಕೆ ಗ್ರಾಪಂನಿಂದ ಹಣವನ್ನೇ ಕೊಟ್ಟಿಲ್ಲ. ಅಯ್ಯನಕೆರೆ ಕೇವಲ ಸಖರಾಯಪಟ್ಟಣಕ್ಕೆ ಮಾತ್ರ ಸೇರಿಲ್ಲ. ಸುತ್ತಲ ಎಲ್ಲ ಗ್ರಾಮಗಳಿಗೂ ಸೇರಿದೆ. ಕುಡಿವ ನೀರು ಕೊಡುವುದಾದರೂ ಎಲ್ಲರಿಗೂ ಕೊಡಿ, ಇಲ್ಲವೇ ಯಾರಿಗೂ ಕೊಡಬೇಡಿ ಎಂದು ಆಗ್ರಹಿಸಿದರು.

ಸಂಧಾನ ಸೂತ್ರ
ಶಾಂತಿಸಭೆಯಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆದ ನಂತರ ಈಗ ಕೆರೆಯಲ್ಲಿ 4 ಅಡಿ ನೀರಿದೆ. ಅದರಲ್ಲಿ 2 ಅಡಿಯಷ್ಟು ನೀರು ಬ್ರಹ್ಮಸಮುದ್ರ ಕೆರೆಗೆ ಬಿಡುವುದು, ಉಳಿದ ನೀರನ್ನು ಸಖರಾಯಪಟ್ಟಣಕ್ಕೆ ಕುಡಿವ ನೀರಿಗಾಗಿ ಬಳಸಿಕೊಳ್ಳುವುದು. ಕೆರೆಯಲ್ಲಿ ಎಷ್ಟು ನೀರಿದೆ, ಎಷ್ಟು ನೀರನ್ನು ಬ್ರಹ್ಮಸಮುದ್ರ ಕೆರೆಗೆ ಬಿಡಬೇಕೆಂಬ ಬಗ್ಗೆ ಎಲ್ಲರೂ ಕೆರೆಯ ಬಳಿ ತೆರಳಿ ಗುರುತು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.