ಸನ್ನಿ ಈಗ ಬೆದರು ಬೊಂಬೆ
Team Udayavani, Feb 15, 2018, 9:55 AM IST
ಹೈದರಾಬಾದ್: ಯಾವುದೇ ಹೊಸ ಕಟ್ಟಡ ನಿರ್ಮಾಣ ಅಥವಾ ಹೊಲದಲ್ಲಿ ಬೆಳೆ ಬೆಳೆದ ಸಂದರ್ಭದಲ್ಲಿ ದೃಷ್ಟಿ ತಾಕದಿರಲಿ ಎಂಬ ಕಾರಣಕ್ಕಾಗಿ ಮಣ್ಣಿನ ಮಡಕೆಯ ಮೇಲೆ ಚಿತ್ರ ಮಾಡಿ ತೂಗುಹಾಕುತ್ತಾರೆ ಅಥವಾ ಬೆದರು ಬೊಂಬೆ ನಿಲ್ಲಿಸುತ್ತಾರೆ. ಆದರೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಬಂಡಕಿಲ್ಲಿ ಪಲ್ಲೆ ಎಂಬ ಗ್ರಾಮದ ರೈತ ಚೆಂಚು ರೆಡ್ಡಿಯವರಿಗೆ ಹೊಳೆ ದದ್ದೇ ಬೇರೆ. ಪಡ್ಡೆ ಹುಡುಗರ ಆಕ ರ್ಷಣೆಯಾಗಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್.
ಹತ್ತು ಎಕರೆಯಲ್ಲಿ ಬೆಳೆದಿರುವ ಬಂಪರ್ ಬೆಳೆಗೆ ತೋಟದ ಬಳಿಯಲ್ಲಿಯೇ ಸಾಗುವವರ ದೃಷ್ಟಿ ತಾಕದಿರಲಿ ಎಂದು ಕೆಂಪು ಬಣ್ಣದ ಬಿಕಿನಿ ಮತ್ತು ಬ್ರಾ ಧರಿಸಿರುವ ಸನ್ನಿ ಲಿಯೋನ್ನ ಆಳೆತ್ತರದ ಫೋಟೋ ಹಾಕಿ “ನನ್ನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡಿ ಅಥವಾ ಅಳಬೇಡಿ’ ಎಂದು ತೆಲುಗಿನಲ್ಲಿ ಬರೆದಿದ್ದಾರೆ.
ಆಹಾ ತೋಟದಲ್ಲಿ ಬೆಳೆ ಎಷ್ಟು ಚೆನ್ನಾಗಿ ಬಂದಿದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುವು ದಕ್ಕಿಂತ ನೇರವಾಗಿ ನಟಿಯ ದೇಹ ಸೌಂದರ್ಯದತ್ತ ಸಾರ್ವಜನಿಕರ ದೃಷ್ಟಿ ಹೋಗುತ್ತದೆ. ಈಗ ತೋಟದಲ್ಲಿ ಬೆಳೆದಿರುವ ಬೆಳೆಯತ್ತ ನೋಡುವುದೇ ಇಲ್ಲ ಎಂದು ಚೆಂಚು ರೆಡ್ಡಿ ಹರ್ಷ ವ್ಯಕ್ತಪಡಿಸುತ್ತಾರೆ. ಬೆಳೆಯನ್ನು ರಕ್ಷಿಸಲು ಮಾತ್ರ ಇಂಥ ಕ್ರಮ ಕೈಗೊಂಡಿರುವುದಾಗಿ ಹೇಳಿರುವ ರೆಡ್ಡಿ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದೂ ಒಂದು ಟ್ರೆಂಡ್ ಆದರೂ ಅಚ್ಚರಿ ಇಲ್ಲ.