ಮಹಿಳೆಯ ಮೇಲೆ ಅಮಾನುಷ ಅತ್ಯಾಚಾರ, ಗುಪ್ತಾಂಗಕ್ಕೆ ಲೋಹದ ವಸ್ತು
Team Udayavani, Feb 20, 2018, 4:47 PM IST
ಕೋಲ್ಕತ : ಪಶ್ಚಿಮ ಬಂಗಾಲದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಮಾನುಷ ಅತ್ಯಾಚಾರ ನಡೆಸಲಾಗಿದ್ದು ಅತ್ಯಾಚಾರಿಗಳು ಆಕೆಯ ಗುಪ್ತಾಂಗಕ್ಕೆ ಲೋಹದ ವಸ್ತು ತುರುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ದಿನಾಜ್ಪುರದ ಗ್ರಾಮವೊಂದರ ಸೇತುವೆಯ ಕೆಳಗೆ ಅತ್ಯಾಚಾರಕ್ಕೆ ಗುರಿಯಾದ ಸುಮಾರು 19 – 20ರ ಹರೆಯದ ಮಹಿಳೆಯು ಸುಮಾರು 18 ತಾಸುಗಳ ಕಾಲ ಪ್ರಜ್ಞಾಹೀನಳಾಗಿ ಬಿದ್ದಿದ್ದಳು.
ಫೆ.18ರ ಮಧ್ಯಾಹ್ನ ದಾರಿಹೋಕನೋರ್ವ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ. ಆಕೆಯ ಕರುಳು ಗುಪ್ತಾಂಗದಿಂದ ಹೊರಬಂದಿತ್ತು. ಮಾಲ್ಡಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಕೆಗೆ ಎರಡು ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ.
ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯು ದೇಹಾಬಂದ್ ನಿವಾಸಿಯಾಗಿದ್ದಾಳೆ. ಫೆ.17ರಂದು ಆಕೆಯ ಮೇಲೆ ಹಲ್ಲೆ, ಅತ್ಯಾಚಾರ ನಡೆದಿದೆ.
ಮಹಿಳೆಯು ಹೇಳಿರುವ ಪ್ರಕಾರ ಆಕೆಯನ್ನು ದೇಹಾಬಂದ್ ಗ್ರಾಮದ ನಿವಾಸಿಯಾಗಿರುವ ರಾಮ್ ಪ್ರಬೇಶ್ ಶರ್ಮಾ ಮತ್ತು ಇತರ ಕೆಲವರು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾರೆ; ಬಳಿಕ ಆಕೆಯ ಮೇಲೆ ಅತ್ಯಂತ ಅಮಾನುಷವಾಗಿ ಲೋಹದ ವಸ್ತುವಿನಿಂದ ಗಾಯಮಾಡಿದ್ದಾರೆ.
ಈ ಅಮಾನುಷ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಕಾರ್ಯಕರ್ತೆಯರು, ಅತ್ಯಾಚಾರಿಗಳಿಗೆ ಕಠಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ