ಖಲಿಸ್ತಾನ- ಕೆನಡಾ ನಂಟಿನ ಕಗ್ಗಂಟು
Team Udayavani, Feb 24, 2018, 3:02 PM IST
ಭಾರತ ಮತ್ತು ಕೆನಡಾ ಸಂಬಂಧ ಆಗಾಗ್ಗೆ ಬೇರೆ ಬೇರೆ ಕಾರಣಗಳಿಗೆ ಹಳಸುತ್ತಲೇ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆನಡಾದಲ್ಲಿ ಭಾರತೀಯ ರಿದ್ದಾರಾದರೂ, ಅಲ್ಲಿನ ಸರ್ಕಾರ ಮತ್ತು ಭಾರತ ಸರ್ಕಾರದ ಮಧ್ಯದ ಸಂಬಂಧ ಊರ್ಧ್ವಗತಿ ಕಾಣಲೇ ಇಲ್ಲ. ಎರಡೂ ದೇಶಗಳ ಸಂಬಂಧದಲ್ಲಿ ಮೊದಲು ಹುಳಿ ಹಿಂಡಿದ್ದು ಭಾರತದ ಅಣ್ವಸ್ತ್ರ ಪರೀಕ್ಷೆ. 2010ರಲ್ಲಿ ಈ ಸಂಬಂಧ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ ನಂತರದಲ್ಲಿ ಖಲಿಸ್ತಾನ ವಿಷಯದಲ್ಲಿ ದೇಶಗಳು ದೂರಾಗಿವೆ. ಇದೀಗ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಭಾರತಕ್ಕೆ ಆಗಮಿಸಿ ಸಂಬಂಧ ಸುಧಾರಣೆ ಯತ್ನ ನಡೆಸುತ್ತಿರುವ ಮಧ್ಯೆಯೇ, ಖಲಿಸ್ತಾನಿ ಪ್ರತ್ಯೇಕತಾವಾದಿಗೆ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತು ಎಂಬುದು ವಿವಾದಕ್ಕೆ ಕಾರಣವಾಗಿದೆ.
ಖಲಿಸ್ತಾನ ವಿವಾದದ ಸುತ್ತ
ಕೆನಡಾದ 12 ಲಕ್ಷ ಜನಸಂಖ್ಯೆಯಲ್ಲಿ 4.70 ಲಕ್ಷ ಜನರು ಸಿಖ್ಖರೇ ಇರುವುದರಿಂದ, ಅಲ್ಲಿ ಸಿಖ್ಖರು ರಾಜಕೀಯವಾಗಿ ಮಹತ್ವ ಪಡೆದಿದ್ದಾರೆ. 1984ರಲ್ಲಿ ಸಿಖ್ ದಂಗೆ ನಡೆದಾಗ ಖಲಿಸ್ತಾನ ಹೋರಾಟದ ನೆಲೆಯೇ ಕೆನಡಾಗೆ ಸ್ಥಳಾಂತರಗೊಂಡಿತು. ಅದಾಗಲೇ ಕೆನಡಾ ಗುಪ್ತಚರ ವಿಭಾಗದಲ್ಲಿ ಸಿಖ್ಖರ ಪ್ರಾಬಲ್ಯವಿತ್ತು. ಹೀಗಾಗಿ ಸಿಖ್ಖರು ಕೆನಡಾದಲ್ಲಿ ಸುಲಭವಾಗಿ ನೆಲೆ ಕಂಡುಕೊಂಡರು. ಆ ನಂತರದಲ್ಲಿ ತೆರೆಮರೆಯಲ್ಲೇ ಇದ್ದ ಖಲಿಸ್ತಾನ ಹೋರಾಟ, ಕೆನಡಾದಲ್ಲಿ ರಾಜಕೀಯವಾಗಿಯೂ ಸಿಖ್ಖರು ಪ್ರಾಮುಖ್ಯತೆ ಪಡೆದುಕೊಂಡ ಇತ್ತೀಚೆಗಿನ ಕೆಲವು ವರ್ಷಗಳಿಂದ ತೀವ್ರಗೊಳ್ಳುತ್ತಿದೆ. ಕಳೆದ ವರ್ಷ ಕೆನಡಾ ಸಂಸತ್ತಿನಲ್ಲಿ 1984ರಲ್ಲಿನ ಸಿಖ್ ದಂಗೆಯನ್ನು ನರಮೇಧ ಎಂದು ನಿಲುವಳಿ ಮಂಡಿಸಿದ್ದರಿಂದ ಸಂಬಂಧ ಹಳಸಿತ್ತು.
ಅದರ ನಂತರದಲ್ಲಿ, ಪಂಜಾಬ್ ಚುನಾವಣೆಯ ವೇಳೆ ಕೆನಡಾದಲ್ಲಿ ಪ್ರಚಾರ ಮಾಡಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವಕಾಶ ಕೇಳಿದಾಗ ನಿರಾಕರಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆನಡಾ ರಕ್ಷಣಾ ಸಚಿವ ಸಜ್ಜನ್ ಭಾರತಕ್ಕೆ ಆಗಮಿಸಿದಾಗ ಅಮರಿಂದರ್ ಸಿಂಗ್ ಭೇಟಿ ಮಾಡಿರಲಿಲ್ಲ. ಇದೀಗ ಭಾರತದ ಏಕತೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರಧಾನಿ ಜಸ್ಟಿನ್ ಹೇಳಿದ ಮರುದಿನವೇ ಔತಣಕೂಟಕ್ಕೆ ಖಲಿಸ್ತಾನಿ ಹೋರಾಟಗಾರನಿಗೆ ಆಹ್ವಾನ ಕಳುಹಿಸಲಾಗಿತ್ತು ಎಂಬ ಸುದ್ದಿ ಹೊರಬಿದ್ದಿದ್ದು, ಸಂಬಂಧ ಸುಧಾರಣೆಯ ಬಗ್ಗೆ ಜಸ್ಟಿನ್ ಮಾಡಿದ ಎಲ್ಲ ಪ್ರಯತ್ನಕ್ಕೂ ಹುಳಿ ಹಿಂಡಿದಂತಾಗಿದೆ.
ಅಣ್ವಸ್ತ್ರ ಪರೀಕ್ಷೆಯ ಬಿಕ್ಕಟ್ಟು
1974ರಲ್ಲಿ ಭಾರತವು ಕೆನಡಾ ಒದಗಿಸಿದ ರಿಯಾಕ್ಟರ್ ಬಳಸಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಕೆನಡಾವನ್ನು ಸಿಟ್ಟಿಗೆಬ್ಬಿಸಿತ್ತು. ಶಾಂತಿಯುತ ಉದ್ದೇಶಕ್ಕೆಂದು ಖರೀದಿಸಿದ ರಿಯಾಕ್ಟರ್ಅನ್ನು ಅಣ್ವಸ್ತ್ರ ಪರೀಕ್ಷೆಗೆ ಬಳಸಿದ್ದರಿಂದ ಭಾರತದ ಮೇಲೆ ಕೆನಡಾ ನಿಷೇಧ ಹೇರಿ, ಯುರೇನಿಯಂ ಪೂರೈಕೆಯನ್ನು ನಿಲ್ಲಿಸಿತ್ತು. ಆದರೆ 2010ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಕೆನಡಾಗೆ ತೆರಳಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕೆನಡಾ ಭಾರತಕ್ಕೆ ಯುರೇ ನಿಯಂ ಕಳುಹಿಸಲು ಆರಂಭಿಸಿತ್ತು. ಅಲ್ಲಿಗೆ ಈ ವಿವಾದ ಬಗೆಹರಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ