“ಅಮ್ಮಾ ಐ ಲವ್ ಯೂ’ ಹೆಸರಿಗಾಗಿ ಕಾಯುತ್ತಿರುವ ಚಿತ್ರತಂಡ
Team Udayavani, Mar 6, 2018, 11:01 AM IST
ದ್ವಾರಕೀಶ್ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾದ “ಅಮ್ಮಾ ಐ ಲವ್ ಯೂ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಬೇಕೆಂಬುದು ನಿರ್ಮಾಪಕ ಯೋಗಿ ದ್ವಾರಕೀಶ್ ಯೋಚನೆ. ಆದರೆ, ಇದುವರೆಗೂ ಚಿತ್ರದ ಪ್ರಚಾರವನ್ನೇ ಶುರು ಮಾಡಿಲ್ಲ. ಅದಕ್ಕೆ ಕಾರಣ, ಇನ್ನೂ ಟೈಟಲ್ ಸಿಗದಿರುವುದು.
ಹೌದು, “ಅಮ್ಮಾ ಐ ಲವ್ ಯೂ’ ಎಂಬ ಹೆಸರಿನಲ್ಲೇ ಚಿತ್ರದ ಚಿತ್ರೀಕರಣವಾಗಿದ್ದರೂ ಮತ್ತು ಅದೇ ಹೆಸರಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡದವರು ಹೊರಟಿದ್ದರೂ, ಇದುವರೆಗೂ ಚಿತ್ರತಂಡದವರಿಗೆ ಟೈಟಲ್ ಸಿಕ್ಕಿಲ್ಲವಂತೆ. ಇನ್ನೂ ಹೆಸರು ಸಿಗದ ಕಾರಣ, ಚಿತ್ರತಂಡದವರು ಚಿತ್ರದ ಪ್ರಚಾರವನ್ನೂ ಮಾಡುತ್ತಿಲ್ಲ. ಹಾಗಾಗಿ ಚಿತ್ರದ ಬಿಡುಗಡೆಗೆ ಇನ್ನು ಒಂದೇ ಒಂದು ತಿಂಗಳಿದ್ದರೂ ಪ್ರಚಾರ ಮಾತ್ರ ಆಗುತ್ತಿಲ್ಲ.
“ನಾವು “ಅಮ್ಮಾ ಐ ಲವ್ ಯೂ’ ಹೆಸರಿನಲ್ಲಿ ಚಿತ್ರ ಮಾಡಿದ್ದೇವೆ. ಆದರೆ, ವಾಣಿಜ್ಯ ಮಂಡಳಿಯಲ್ಲಿ “ಅಮ್ಮ’ ಎಂಬ ಹೆಸರು ಬೇರೆ ನಿರ್ಮಾಪಕರ ಹೆಸರಿನಲ್ಲಿದೆ. ಅವರು “ಅಮ್ಮ¾’ ಎಂಬ ಹೆಸರು ಮೊದಲು ನೋಂದಾಯಿಸಿದ್ದರಿಂದ, ಅವರು ಚಿತ್ರ ಮಾಡಿದ ನಂತರ, ನೀವು ಬೇಕಾದರೆ “ಅಮ್ಮಾ ಐ ಲವ್ ಯೂ’ ಹೆಸರಿನಲ್ಲಿ ಚಿತ್ರ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಚಿತ್ರ ರೀ-ರೆಕಾರ್ಡಿಂಗ್ ಹಂತದಲ್ಲಿದೆ.
ಮುಂದಿನ ತಿಂಗಳು ಬಿಡುಗಡೆ ಮಾಡುವ ಯೋಚನೆ ಇದೆ. ಹೀಗಿರುವಾಗ ಅವರು ಮಾಡಿ ಮುಗಿಸಿದ ನಂತರ, ನಾವು ಚಿತ್ರ ಮಾಡಬೇಕು ಎಂದರೆ ಹೇಗೆ? ಅವರು ಯಾವಾಗ ಚಿತ್ರ ಮಾಡುತ್ತಾರೋ ಗೊತ್ತಿಲ್ಲ. ಮೇಲಾಗಿ ಅದು “ಅಮ್ಮ’, ನಮ್ಮದು “ಅಮ್ಮಾ ಐ ಲವ್ ಯೂ’. ಎರಡೂ ಬೇರೆ ಟೈಟಲ್ಗಳು. ಈಗಾಗಲೇ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಒಂದೇ ಹೆಸರಿಟ್ಟುಕೊಂಡು ಸಾಕಷ್ಟು ಚಿತ್ರಗಳು ಬಂದಿವೆ.
ಎಲ್ಲಕ್ಕಿಂತ ಹೆಚ್ಚಾಗಿ “ಅಮ್ಮ’ ಎಂಬ ಹೆಸರಿನ ಅವಧಿ ಮುಗಿದಿದೆ. ಅದನ್ನು ಆ ನಿರ್ಮಾಪಕರು ವಿಸ್ತರಿಸಿಲ್ಲ. ಹಾಗಿದ್ದರೂ ನಮಗೆ ಇನ್ನು ಹೆಸರು ಸಿಗುತ್ತಿಲ್ಲ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಜೊತೆಗೆ ಮಾತನಾಡಿ, “ಅಮ್ಮಾ ಐ ಲವ್ ಯೂ’ ಎಂಬ ಹೆಸರನ್ನು ಕೊಡಿ ಎಂದು ಮನವಿ ಮಾಡಿದ್ದೇನೆ’ ಎನ್ನುತ್ತಾರೆ ಯೋಗಿ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಕಡೆಯಿಂದ ಹೆಸರು ಸಿಗುತ್ತಿದ್ದಂತೆಯೇ, ಚಿತ್ರದ ಪ್ರಚಾರ ಶುರು ಮಾಡಿ, ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಯೋಗಿ ದ್ವಾರಕೀಶ್. ಅಂದ ಹಾಗೆ, “ಅಮ್ಮಾ ಐ ಲವ್ ಯೂ’ ಚಿತ್ರವನ್ನು ಕೆ.ಎಂ. ಚೈತನ್ಯ ನಿರ್ದೇಶಿಸಿದ್ದು, ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರಾ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ