ರಾಜೇಶ್ವರಿ ಶೆಟ್ಟಿ ಮನೆಯಲ್ಲಿ ಕಳವು:ವರವಾಯಿತೆ ನಿರ್ಜನ ಬಂಗಲೆ?


Team Udayavani, Mar 9, 2018, 10:27 AM IST

6522.jpg

ಉಡುಪಿ: ಪತಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿರುವ ರಾಜೇಶ್ವರಿ ಶೆಟ್ಟಿ ಅವರಿಗೆ ಸೇರಿರುವ ಇಂದ್ರಾಳಿ ಹಯಗ್ರೀವ ನಗರದ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 

ಹಯಗ್ರೀವನಗರ 6ನೇ ಅಡ್ಡರಸ್ತೆಯಲ್ಲಿರುವ ಈ ಬಂಗಲೆ ಒಂಟಿ ಮನೆಯಲ್ಲ. ಹಾಗಂತ ಒಂದಕ್ಕೊಂದು ತಾಗಿಕೊಂಡು ಮನೆಗಳಿಲ್ಲ. ಮನೆಗಳ ನಡುವೆ ಅಂತರ ಇರುವುದು ಹಾಗೂ ಈ ಮನೆ 2 ವರ್ಷಗಳಿಂದ ನಿರ್ಜನವಾಗಿರುವುದು ಕಳ್ಳರಿಗೆ ವರದಾನವಾಗಿದೆ. ಮನೆಯ ಗೇಟು ಹಾಗೂ ಬಾಗಿಲುಗಳನ್ನು ತೆರೆಯದೆ ತಿಂಗಳುಗಳೇ ಕಳೆದಿವೆ. 2016ರಲ್ಲಿ ಭಾಸ್ಕರ ಶೆಟ್ಟಿ ಅವರ ಕೊಲೆ ನಡೆದ ಬಳಿಕ ಆ ಮನೆಯಲ್ಲಿ ಯಾರೂ ವಾಸ ಇರಲಿಲ್ಲ.

ಬೆಂಗಳೂರಿನ ರೇಣುಕಾ ವಿಶ್ವನಾಥ ರೈ ಅವರು ರಾಜೇಶ್ವರಿ ಶೆಟ್ಟಿ ಅವರಿಂದ ಈ ಮನೆಯ ಜಿಪಿಎ ಅಧಿಕಾರ ಪತ್ರ ಪಡೆದುಕೊಂಡಿದ್ದು, 2-3 ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಆದರೆ ಒಳಗೆ ಹೋಗುತ್ತಿರಲಿಲ್ಲ. ಗೇಟು, ಆವರಣಗೋಡೆಯ ಮೇಲೆ ಹುಲ್ಲು, ಬಳ್ಳಿ ಬೆಳೆದು ಬಹುತೇಕ ಪಾಳು ಬಿದ್ದಂತಿರುವ ಮನೆಗೆ ಕಳ್ಳರು ನುಗ್ಗಿ 3.25 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. 2017ರ ನ. 1ರಿಂದ 2018ರ ಮಾ. 6ರ ನಡುವೆ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಿಸಿ ಕೆಮರಾ ಇಲ್ಲ
ಮನೆಗೆ ಸಿಸಿ ಕೆಮರಾ ಅಳವಡಿಸಿಲ್ಲ ಹಾಗೂ ಇಲ್ಲಿ ಯಾರೂ ವಾಸವಿಲ್ಲ ಎಂಬ ಮಾಹಿತಿಯನ್ನು ನಮಗೂ ನೀಡಿರಲಿಲ್ಲ ಎನ್ನುತ್ತಾರೆ ಪೊಲೀಸರು. ಮೇಲ್ನೋಟಕ್ಕೆ ಇದು ತಿಂಗಳ ಹಿಂದೆಯೇ ನಡೆದಿರುವ ಘಟನೆಯಂತೆ ತೋರುತ್ತದೆ. ಇದು ಕೇವಲ ಕಳವು ಪ್ರಕರಣವೇ ಹೊರತು ಕೊಲೆ ಮತ್ತು ಈ ಕಳವಿಗೆ ಸಂಬಂಧ ಇರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಪೊಲೀಸರು.

ಅಕ್ಕಪಕ್ಕದಲ್ಲಿರುವ ಮನೆಗಳು ಬಹುತೇಕ ದಿನವಿಡೀ ಬಾಗಿಲು ಮುಚ್ಚಿಕೊಂಡಿರುತ್ತವೆ. ಹಾಗಾಗಿ ಅವರು ಕೂಡ ಈ ಮನೆಯ ಕಡೆ ಕಣ್ಣುಹಾಕಿದಂತಿಲ್ಲ. “ಇತ್ತೀಚೆಗೆ ಇಲ್ಲಿ ಇಂತಹ ಕಳ್ಳತನ ಪ್ರಕರಣಗಳು 
ನಡೆದಿಲ್ಲ. ಆದರೂ ಪೊಲೀಸರು ಹೆಚ್ಚು ಗಸ್ತು ನಡೆಸಬೇಕು. ರಾತ್ರಿ ವೇಳೆ ಹೆಚ್ಚು ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ನಮ್ಮಲ್ಲಿ ಆತಂಕ ಮೂಡಿಸಿವೆ’ ಎನ್ನುತ್ತಾರೆ ಸ್ಥಳೀಯರು.

ಕಾರು ಕೂಡ ಅನಾಥ?
ಎರಡು ಗೇಟುಗಳುಳ್ಳ ಮನೆ ಅನಾಥವಾಗಿ ನಿಂತಿರುವಂತೆ ಭಾಸವಾಗುತ್ತದೆ. ಮನೆಯಂಗಳ ದ‌ಲ್ಲಿ ನಿಲ್ಲಿಸಿರುವ ಕಾರನ್ನು ಕೆಲವು ತಿಂಗಳುಗಳಿಂದ ಹೊರತೆಗೆದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. 

ಸಂಶಯಕ್ಕೆ ಕಾರಣವಾದುದು ತೆರೆದಿಟ್ಟಿದ್ದ ಕಾರಿನ ಬಾಗಿಲು! 

ಮನೆಯಲ್ಲಿ ಕಳವಾಗಿರುವುದು ಬೆಳಕಿಗೆ ಬರಲು ಕಾರಣವಾದದ್ದು ಮನೆಯಂಗಳದಲ್ಲಿ ನಿಲ್ಲಿಸಿರುವ ಕಾರಿನ ಬಾಗಿಲು!

2016ರ ಜುಲೈನ  ಬಳಿಕ ಆ ಮನೆಯ ಬಾಗಿಲು ಮಾತ್ರವಲ್ಲ ಗೇಟನ್ನು ಕೂಡ ತೆರೆದಿರಲಿಲ್ಲ. ರಾಜೇಶ್ವರಿ ಅವರಿಂದ ಮನೆಯ ಜಿಪಿಎ ಅಧಿಕಾರ ಪಡೆದಿದ್ದ ಬೆಂಗಳೂರಿನ ರೇಣುಕಾ ವಿಶ್ವನಾಥ ರೈ ಅವರು 2-3 ತಿಂಗಳಿಗೊಮ್ಮೆ ಮನೆ ಪರಿಸರಕ್ಕೆ ಬಂದು ನೋಡುತ್ತಿದ್ದರು.  ಮಾ.6ರಂದು ಕೂಡ ಇದೇ ರೀತಿ ಮನೆಯ ಹೊರಗಿಂದ ರೌಂಡ್‌ ಹೊಡೆಯುವಾಗ  ಅಂಗಳದೊಳಗಿದ್ದ ಕಾರಿನ ಬಾಗಿಲು ತೆರೆದಿರುವುದು ಕಂಡು ಬಂತು. ಅದನ್ನು ಕಂಡು ಗಾಬರಿಗೊಂಡ ಅವರು ಗೇಟು ತೆರೆದು ಅಂಗಳ ಪ್ರವೇಶಿಸಿದರು. ಆಗ ಮನೆಯ ಹಿಂಬದಿಯ ಕಬ್ಬಿಣದ ಬಾಗಿಲನ್ನು ಮುರಿದು ಯಾರೋ ಒಳ ಪ್ರವೇಶಿಸಿರುವುದು ತಿಳಿಯಿತು ಎಂದು ಗೊತ್ತಾಗಿದೆ.

ಮನೆಯಿಡೀ ಜಾಲಾಡಿದ್ದರು
ಒಳಗೆ ಪ್ರವೇಶಿಸಿರುವ ಕಳ್ಳರು  ಸಾವಕಾಶದಿಂದ ಮನೆಯಿಡೀ ಜಾಲಾ ಡಿದ್ದಾರೆ.  ನಳ್ಳಿ ನೀರನ್ನು  ಹರಿಯಬಿಟ್ಟು  ಹೋಗಿದ್ದರು. ಇದರಿಂದ ಕಪಾಟಿನಿಂದ ಕೆಳಕ್ಕೆ ಬಿದ್ದಿದ್ದ ಸೀರೆಗಳು ಕೂಡ ನೀರಿನಲ್ಲಿ ತೋಯ್ದು ಹೋಗಿವೆ.   ಕೋಣೆಗಳಿಗೆ ಅಳವಡಿಸಿದ್ದ ಎ.ಸಿ.ಗಳನ್ನು ಕೂಡ ಕಿತ್ತು ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ.

ಕಾರಿನಿಂದಲೂ ಕಳವು
ಅಂಗಳದಲ್ಲಿದ್ದ ಎರ್ಟಿಗಾ ಕಾರಿನ ಬಾಗಿಲು ತೆರೆದು ಅದರ ಡ್ಯಾಶ್‌ಬೋರ್ಡ್‌ ಮತ್ತಿತರ ಕೆಲವು ಪರಿಕರಗಳನ್ನು ಹೊತ್ತೂಯ್ದಿದ್ದಾರೆ. ಈ ರೀತಿಯ ಕೃತ್ಯ ಮಾಡುವಾಗ ಕಾರಿನ ಬಾಗಿಲಿನಲ್ಲಿ ಕುಶನ್‌ನ ತುಂಡುಗಳು ಸಿಲುಕಿ ಬಾಗಿಲು ಮುಚ್ಚಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಬಾಗಿಲು ತೆರೆದೇ ಇತ್ತು. 
ಇದರಿಂದಾಗಿ ಪ್ರಕರಣ ಬೆಳಕಿಗೆ ಬರುವಂತಾಗಿದೆ ಎಂದು ತಿಳಿದುಬಂದಿದೆ.  

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.