ಬೇಸಗೆ ಶುರುವಾಗುವ ಮೊದಲೇ ನೀರಿನ ಕೊರತೆ!​​​​​​​


Team Udayavani, Mar 12, 2018, 6:00 AM IST

1103kde7C.jpg

ಕುಂದಾಪುರ: ಬೇಸಿಗೆ ತೀವ್ರವಾಗುತ್ತಿರುವಂತೆಯೇ, ಕುಂದಾಪುರ ಪುರಸಭೆಯ 23 ವಾರ್ಡ್‌ಗಳ ಪೈಕಿ 3 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಉಳಿದ 20 ವಾರ್ಡ್‌ಗಳಿಗೆ ಸದ್ಯ ನೀರಿನ ಪೂರೈಕೆ ಆಗುತ್ತಿದ್ದು, ಮುಂದಿನ ದಿನಗಳ ಬಗ್ಗೆ ಅವರಿಗೂ ಪ್ರಶ್ನಾರ್ಥಕ ಚಿಹ್ನೆ ಕಾಡಿದೆ. 

ಕೋಡಿ ಭಾಗದ ಕೋಡಿ ಉತ್ತರ, ಕೋಡಿ ದಕ್ಷಿಣ ಹಾಗೂ ಕೋಡಿ ಮಧ್ಯ ಭಾಗದ 3 ವಾರ್ಡ್‌ಗಳಿಗೆ ಪುರಸಭೆಯಿಂದ ಈವರೆಗೆ ಯಾವುದೇ ನೀರಿನ ಸಂಪರ್ಕವಿಲ್ಲ. ಕೆಲವೊಂದು ಮನೆಗಳಲ್ಲಿ ಬಾವಿಗಳಿದ್ದರೂ, ನದಿ, ಸಮುದ್ರ ತೀರದಲ್ಲಿರುವುದರಿಂದ ಉಪ್ಪು ನೀರಿನ ಪ್ರಭಾವದಿಂದಾಗಿ ಬಳಸಲು ಯೋಗ್ಯವಿಲ್ಲದಂತಾಗಿದೆ. ಇದರಿಂದ ಕುಡಿವ ನೀರಿಗೆ ಸುಮಾರು 60-70 ಮನೆಗಳು ತ್ರಾಸ ಪಡೆವಂತಾಗಿದೆ. ಇವರೆಲ್ಲ ಅಕ್ಕಪಕ್ಕದ ಮನೆಗಳಿಗೆ ಎಡತಾಕುವಂತಾಗಿದೆ. 
 
ನೀರಿನ ಸಂಪರ್ಕ ಯಾಕಿಲ್ಲ
7-8 ವರ್ಷಗಳ ಹಿಂದೆ ಪುರಸಭೆಯಿಂದ ನೀರಿನ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾಗ ಚರ್ಚ್‌ ರೋಡ್‌ ಮಾರ್ಗವಾಗಿ ನೀರಿನ ಸಂಪರ್ಕ ಕೊಡಿ ಎಂದು ಸ್ಥಳೀಯರು ಕೇಳಿದ್ದರು. ಅದು ಸಾಧ್ಯವಾಗದ್ದರಿಂದ ನೀರಿನ ಸಂಪರ್ಕ ಯೋಜನೆ ಕೈಬಿಡಲಾಗಿತ್ತು. ಈಗ ನೀರಿನ ಸಮಸ್ಯೆ ಜೋರಾಗಿರುವುದರಿಂದ ಪುರಸಭೆ ನೀರು ಪೂರೈಕೆ ಮಾಡಬೇಕೆಂದು ಜನ ಕೇಳುತ್ತಿದ್ದಾರೆ.  ಕೋಡಿ ಭಾಗದಲ್ಲಿ 1,500 ಮನೆಗಳಿದ್ದು, 4,500 ರಿಂದ 5 ಸಾವಿರ ಮಂದಿ ಜನಗಳಿದ್ದಾರೆ. ಕೆಲವೊಂದು ಮನೆಗಳಿಗೆ ಬಾವಿಗಳಿವೆ. 3 ಸರಕಾರಿ ಬಾವಿಗಳಿವೆ. ಈ 3 ವಾರ್ಡ್‌ಗಳಲ್ಲಿಯೂ ಯಾವುದೇ ಬೋರ್‌ವೆಲ್‌ಗ‌ಳಿಲ್ಲ. 

20 ವಾರ್ಡ್‌ಗಳಿಗೆ ನೀರು
ಉಳಿದಂತೆ ಪುರಸಭೆಯ ಫೆರಿ ರಸ್ತೆ, ಮದ್ದುಗುಡ್ಡೆ, ಈಸ್ಟ್‌ಬ್ಲಾಕ್‌, ಖಾರ್ವಿಕೇರಿ, ಚಿಕ್ಕನ್‌ಸಾಲ್‌, ಚರ್ಚ್‌ ರೋಡ್‌, ಸೆಂಟ್ರಲ್‌ ವಾರ್ಡ್‌ಗಳು ಸೇರಿದಂತೆ ಇತರೆ ಎಲ್ಲ ವಾರ್ಡ್‌ಗಳಲ್ಲಿ 24 ಗಂಟೆಗಳ ಕಾಲ ಇಲ್ಲದಿದ್ದರೂ, ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನೀರು ಪೂರೈಸಲಾಗುತ್ತಿದೆ. ಪುರಸಭೆ 33 ಕೋ.ರೂ. ವೆಚ್ಚದ ಎರಡನೇ ಹಂತದ ನೀರಾವರಿ ಯೋಜನೆ ಜತೆಗೆ ಈ ಬಾರಿ ನೀರಿನ ಪೂರೈಕೆಗಾಗಿ 18.75 ಲಕ್ಷ ರೂ., ದುರಸ್ತಿಗಾಗಿ 20 ಲಕ್ಷ ರೂ., ನಿರ್ವಹಣೆಗಾಗಿ 18 ಲಕ್ಷ ರೂ. ಮೀಸಲಿಡಲಾಗಿದೆ.

ಎರಡನೇ ಹಂತದ ಯೋಜನೆ ಸಿದ್ಧ
ಎಡಿಬಿ ನೆರವಿನಿಂದ ಜಲಸಿರಿ ಯೋಜನೆಯಡಿ 33 ಕೋ. ರೂ. ವೆಚ್ಚದಲ್ಲಿ ಪುರಸಭೆಯ ಎರಡನೇ ಹಂತದ ಯೋಜನೆ ಸಿದ್ಧವಾಗಿದ್ದು, ಟೆಂಡರ್‌ ಕೂಡ ಆಗಿದೆ. ಇದರಿಂದ ಮುಂದಿನ 2046 ವರೆಗೆ ನಿರಂತರ 24 ಗಂಟೆಗಳ ಕಾಲ ನೀರು ಪೂರೈಸಲು ಸಹಾಯವಾಗಲಿದೆ. ಈಗ 1 ಓವರ್‌ ಹೆಡ್‌ ಟ್ಯಾಂಕ್‌ ಇದ್ದು, ಹಳೆಕೋಟೆಯಲ್ಲಿ 5 ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌, ಕೋಡಿಯಲ್ಲಿ 4 ಲಕ್ಷ ಲೀಟರ್‌ ಸಾಮರ್ಥ್ಯದ 1 ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾಗಲಿದೆ. ಇದರಿಂದ ಪುರಸಭೆಗೆ 1.5 ರಿಂದ 2 ದಶಲಕ್ಷ ಲೀಟರ್‌ ನೀರು ಹೆಚ್ಚುವರಿಯಾಗಿ ಪೂರೈಕೆಯಾಗಲಿದೆ. 

4 ದಶಲಕ್ಷ ಲೀಟರ್‌ ನೀರು ಬೇಕು
ಕುಂದಾಪುರ ಪುರಸಭೆಯಲ್ಲಿ 2011 ರ ಜನಗಣತಿ ಪ್ರಕಾರ 30,444 ಜನರಿದ್ದು, ಈಗ ಇದು ಇನ್ನಷ್ಟು ಹೆಚ್ಚಾಗಿದೆ. 12,500 ಮನೆ, (ಅದರಲ್ಲಿ 8,544 ವಾಸ್ತವ್ಯ) ಕಟ್ಟಡಗಳಿವೆ. 2,925 ನಳ್ಳಿ ನೀರಿನ ಸಂಪರ್ಕಗಳಿವೆ. ದಿನಕ್ಕೆ 4 ದಶಲಕ್ಷ (ಎಂಎಲ್‌ಡಿ) ನೀರು ನಿತ್ಯ ಪೂರೈಕೆಯಾಗುತ್ತಿವೆ. 0.18 ಎಂಎಲ್‌ಡಿ ಕೊರತೆಯಾಗುತ್ತಿದೆ. ವಾರಾಹಿ ನದಿಯ ಉಪ ನದಿ ಜೊಂಬುವಿನಿಂದ ಜಪ್ತಿಯಲ್ಲಿ ನೀರು ಶುದ್ಧೀಕರಣವಾಗಿ ಅಲ್ಲಿಂದ ಪುರಸಭೆಗೆ ನೀರು ಪೂರೈಕೆ ಆಗುತ್ತಿದೆ. ಜಪ್ತಿಯಲ್ಲಿರುವ ಶುದ್ಧೀಕರಣದಲ್ಲಿ 7.6 ದಶಲಕ್ಷ ನೀರು ಸಂಗ್ರಹ ಸಾಮರ್ಥ್ಯವಿದೆ. 6 ಗ್ರಾಮಗಳಿಗೂ ಇಲ್ಲಿಂದ ನೀರನ್ನು ಪೂರೈಸಲಾಗುತ್ತಿದೆ. 

ಅಗತ್ಯಕ್ಕೆ ತಕ್ಕಷ್ಟು ನೀರು
ಪುರಸಭೆಯ ಅಗತ್ಯತೆಗೆ ತಕ್ಕಷ್ಟು ನೀರಿನ ಪೂರೈಕೆ ಆಗುತ್ತಿದೆ.  ಕೋಡಿ ಭಾಗದಲ್ಲಿ ಪುರಸಭೆಯಿಂದ ನೀರಿನ ಸಂಪರ್ಕಗಳು ಇಲ್ಲದಿದ್ದರೂ, ಅಗತ್ಯವಿರುವಷ್ಟು ಬಾವಿಗಳಿವೆ. ಅಗತ್ಯವಿದ್ದರೆ ಅದಕ್ಕಾಗಿ ಅನುದಾನ ಮೀಸಲಿಟ್ಟಿದ್ದು, ಬಳಸಲಾಗುವುದು.

–  ಕೆ. ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ

6 ತಿಂಗಳಲ್ಲಿ ಪೂರ್ಣ
ಕೋಡಿ ಭಾಗದ ನೀರಿನ ಸಮಸ್ಯೆ ಬಗ್ಗೆ ಪ್ರತಿ ಬಾರಿ ಸಾಮಾನ್ಯ ಸಭೆಗಳಲ್ಲಿಯೂ ಪ್ರಸ್ತಾಪ ಮಾಡುತ್ತಿದ್ದೇನೆ. ಈ ಬಾರಿ 12 ಕೋ. ರೂ. ವೆಚ್ಚದ ಎರಡನೇ ಹಂತದ ನೀರಾವರಿ ಯೋಜನೆ ಪ್ರಾರಂಭವಾಗುತ್ತಿದೆ. ಅದು 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.  
–  ಪ್ರಭಾಕರ ಕೋಡಿ, 
ಪುರಸಭೆಯ ಸದಸ್ಯ

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ. ಕುಂದಾಪುರ – ಕಾರ್ಕಳ ಗ್ರಾಮೀಣ ಭಾಗದ ಹಲವು ಪ್ರದೇಶಗಳ ಲೇಖನಗಳು ಮೂಡಿಬರಲಿವೆ. ನಿಮ್ಮ ಭಾಗದಲ್ಲೂ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು. ವಾಟ್ಸಪ್‌ ನಂಬರ್‌ 91485 94259

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.