ಮಧುರೆ: ಪೆಂಟಾಕೋಸ್ಟಲ್ ಚರ್ಚ್ ಪ್ರಾರ್ಥನಾ ಗೃಹಗಳ ಮೇಲೆ ದಾಳಿ
Team Udayavani, Mar 14, 2018, 12:29 PM IST
ಮಧುರೆ : ಪಂಟಾ ಕೋಸ್ಟಲ್ ಚರ್ಚ್ ನ ಎರಡು ಕಡೆಗಳಲ್ಲಿರುವ ಪ್ರಾರ್ಥನಾ ನಿವಾಸಗಳ ಮೇಲೆ ದಾಳಿ ನಡೆದಿರುವುದಾಗಿ ತಿಳಿಸಿರುವ ಪೊಲೀಸರು ಇದು ಹಿಂದು ಮುನ್ನಾನಿ ಕಾರ್ಯಕರ್ತರು ನಡೆಸಿರುವ ಕೃತ್ಯವೆಂದು ಶಂಕಿಸಲಾಗಿರುವುದಾಗಿ ಹೇಳಿದ್ದಾರೆ.
ಪೊಲೀಸರಿಗೆ ಈ ದಾಳಿಗಳ ಬಗ್ಗೆ ದೂರು ನೀಡಿರುವ ಪಾಸ್ಟರ್ ರವಿ ಜೇಕಬ್ ಅವರು, ಸುಮಾರು 10 ಜನರು ಇದ್ದ ಸಮೂಹವೊಂದು ಪ್ರಾರ್ಥನಾ ಗೃಹದ ಮೇಲೆ ದಾಳಿ ನಡೆಸಿ ಅಲ್ಲಿದ್ದ ಕರಪತ್ರಗಳನ್ನು ಮತ್ತು ಬೈಬಲ್ ಪ್ರತಿಗಳನ್ನು ಸುಟ್ಟು ಬೆದರಿಕೆ ಹಾಕಿರುವುದಾಗಿ ಹೇಳಿದ್ದಾರೆ.
ಈ ದಾಳಿಯ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದ್ದು ದಾಳಿಕೋರರಲ್ಲಿ ಮೂವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 10 ಹಿಂದು ಮುನ್ನಾನಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ಇದೇ ವೇಳೆ ಹಿಂದು ಮುನ್ನಾನಿ ಕಾರ್ಯಕರ್ತರು ನಡೆಸಿರುವ ಈ ದಾಳಿಯು ಕ್ರೈಸ್ತ ಮತಾಂತರದ ವಿರುದ್ಧವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ