ಮೋದಿ ಎಂಬ ಹೆಸರಲ್ಲೇ ವಂಚನೆ ಅಡಗಿದೆ! :ರಾಹುಲ್ ವಾಗ್ದಾಳಿ
Team Udayavani, Mar 18, 2018, 4:34 PM IST
ಹೊಸದಿಲ್ಲಿ: ಮೋದಿ ಎಂಬ ಹೆಸರಿನಲ್ಲೇ ವಂಚನೆ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನ 84ನೇ ಪೂರ್ಣಾಧಿವೇಶನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರವಾಗಿ ಕಿಡಿ ಕಾರಿದರು.
ಪಿಎನ್ಬಿ ಹಗರಣದ ನೀರವ್ ಮೋದಿ, ಐಪಿಎಲ್ ಹಗರಣದ ಲಲಿತ್ ಮೋದಿ ಅವರು ಹೆಸರು ಹೇಳಿ ‘ಮೋದಿ ಎಂಬ ಹೆಸರಿನಲ್ಲೇ ಮೋಸ ಇದೆ. ಪ್ರಧಾನಿ ಮೋದಿ ಮನಿ ಮಾರ್ಕೆಟಿಂಗ್ ಮಾಡಿ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಇದೇ ಅವರ ತಂತ್ರ’ ಎಂದರು.
‘ನಾನು ಕೇವಲ ದೇವಾಲಯಕ್ಕೆ ಮಾತ್ರ ಹೋಗುವುದಲ್ಲ, ಮಸೀದಿ,ಚರ್ಚ್, ಗುರುದ್ವಾರಗಳಿಗೆ ಹೋಗುತ್ತೇನೆ.ಆದರೆ ದೇವಾಲಯಕ್ಕೆ ತೆರಳಿದ್ದು ಮಾತ್ರ ದೊಡ್ಡ ಸುದ್ದಿ ಮಾಡುತ್ತಾರೆ. ದೇವರು ಎಲ್ಲಾ ಕಡೆ ಇದ್ದಾರೆ. ಮಂದಿರ ಮಸೀದಿ , ಮರ ಎಲ್ಲಾ ಕಡೆಯಲ್ಲಿ ದೇವರನ್ನು ಕಾಣಬಹುದು’ ಎಂದರು.
‘ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಆಗ ಬಿಜೆಪಿ ಎಲ್ಲಿ ಇತ್ತು’ ಎಂದು ಪ್ರಶ್ನಿಸಿದ ಅವರು ಬಿಜೆಪಿಯವರು ಕೌರವರು, ಕಾಂಗ್ರೆಸ್ ಪಾಂಡವರಂತೆ ಸತ್ಯದ ಹೋರಾಟದಲ್ಲಿ ತೊಡಗಿದ ಪಕ್ಷ ಎಂದರು.
ಯುವ ಜನತೆಗೆ ಉದ್ಯೋಗ ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಕಾಂಗ್ರೆಸ್ ಯುವಕರ ಪರ ಇರುವ ಪಕ್ಷ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ