ಪಡುಬಿದ್ರಿಗೆ ಬೇಕು ಉಚಿತ ಆ್ಯಂಬ್ಯುಲೆನ್ಸ್
Team Udayavani, Mar 31, 2018, 6:10 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಬದಿಯ ಪ್ರಮುಖ ಪಟ್ಟಣವಾಗಿ ಬೆಳೆಯುತ್ತಿರುವ ಪಡುಬಿದ್ರಿಗೆ ತುರ್ತಾಗಿ ಉಚಿತ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಬೇಕಿದೆ. ಇದರೊಂದಿಗೆ ವಾಹನಗಳ ಉತ್ತಮ ನಿರ್ವಹಣೆಯೂ ಬೇಕಿದ್ದು, ರೋಗಿಗಳ ಅಮೂಲ್ಯ ಜೀವ ಉಳಿಸಲು ನೆರವಾಗಬೇಕಿದೆ.
ಪಡುಬಿದ್ರಿಗೆ ಸದ್ಯ ಕಾಪು, ಮೂಲ್ಕಿ, ಸುರತ್ಕಲ್ಗಳ 108 ಸರಕಾರಿ ಆ್ಯಂಬುಲೆನ್ಸ್ ಸೇವೆ ಲಭ್ಯವಾಗುತ್ತಿದೆ. ಆದರೆ ಕೆಲವೊಮ್ಮೆ ಅಲ್ಲಿಂದ ಬಂದ ಆ್ಯಂಬ್ಯುಲೆನ್ಸ್ಗಳು ಮೂಲ್ಕಿಗೆ ತೆರಳಿ ಮತ್ತೂಂದು ವಾಹನಕ್ಕೆ ರೋಗಿಗಳನ್ನು ಶಿಫ್ಟ್ ಮಾಡುವ ನಿದರ್ಶನಗಳೂ ಇವೆ. ಇದಕ್ಕೆ ಕಾರಣ ವಾಹನದ ನಿರ್ವಹಣೆಯಲ್ಲಿನ ಕೊರತೆ. ಮೊನ್ನೆಯಷ್ಟೇ ಆ್ಯಂಬ್ಯುಲೆನ್ಸ್ ಕೆಟ್ಟು, ರೋಗಿಯೊಬ್ಬರು ಮೃತಪಟ್ಟ ಘಟನೆಯಲ್ಲೂ ನಿರ್ವಹಣೆ ಸಮಸ್ಯೆಯೇ ಕಂಡಿದೆ.
ಅಪಘಾತ ವಲಯ
ಹೆದ್ದಾರಿಯಲ್ಲಿರುವ ಪಡುಬಿದ್ರಿ ಅಪಘಾತ ವಲಯವಾಗಿ ರೂಪು ಗೊಂಡಿದ್ದು, 2016ರಲ್ಲಿ ಇಲ್ಲಿ 77 ಅಪಘಾತಗಳು ಸಂಭವಿಸಿ 24 ಮಂದಿ ಮೃತಪಟ್ಟಿದ್ದರು. 2017ರಲ್ಲಿ ಇಲ್ಲಿ 78 ಅಪಘಾತಗಳು ಸಂಭವಿಸಿದ್ದು 15 ಮಂದಿ ಮೃತಪಟ್ಟಿದ್ದರು. 2018ರಲ್ಲಿ ಈವರೆಗೆ 15 ಅಪಘಾತ ಮತ್ತು 2 ಜೀವಹಾನಿಯಾಗಿದೆ. ಆದರೂ ಇಲ್ಲಿ ಸರಕಾರಿ ಆಂಬ್ಯುಲೆನ್ಸ್ ವ್ಯವಸ್ಥೆ ಬಂದಿಲ್ಲ. ಇಲ್ಲಿನ ಜನತೆ ತುರ್ತು ಸಂದರ್ಭಗಳಲ್ಲಿ ಖಾಸಗಿ ಆಂಬ್ಯುಲೆನ್ಸ್ಗೆ ದುಪ್ಪಟ್ಟು ದರ ಪಾವತಿಸಿ ಸೇವೆ ಪಡೆದುಕೊಳ್ಳಬೇಕಾಗುತ್ತದೆ.
ಘಟನೆ ಪಾಠ ಕಲಿಸೀತೇ?
ಮಾ.29ರಂದು ನಡೆದ ಘಟನೆಯಿಂದ ಹೆಜಮಾಡಿಯ ಹೃದ್ರೋಗಿ ವಿನಯಾ ವಿ. ಶೆಣೈ ಅವರು ಮೃತಪಟ್ಟಿದ್ದು, ಪಡುಬಿದ್ರಿಗೆ ಪ್ರತ್ಯೇಕ ಆಂಬ್ಯುಲೆನ್ಸ್ ಬೇಕು ಎಂಬ ಬೇಡಿಕೆಯನ್ನು ಬಲಗೊಳಿಸಿದೆ. ಕರೆ ಮಾಡಿದ ಅರ್ಧಗಂಟೆ ಬಳಿಕ ಆಂಬ್ಯುಲೆನ್ಸ್ ಆಗಮಿಸಿದ್ದು, ರೋಗಿಯನ್ನು ಮಂಗಳೂರಿನ ಕೆಎಂಸಿಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ವಾಹನ ಕೆಟ್ಟು ನಿಂತಿತ್ತು. ಬಳಿಕ ಮತ್ತೆ ಖಾಸಗಿ ವಾಹನಕ್ಕೆ ವರ್ಗಾಯಿಸಿ, ಸಾಗಿಸುವ ವೇಳೆ ಅವರು ಮೃತಪಟ್ಟಿದ್ದರು. ಇದು ಆಂಬ್ಯುಲೆನ್ಸ್ನಂತಹ ತುರ್ತುಸೇವೆಯಲ್ಲೂ ಇರುವ ಅವ್ಯವಸ್ಥೆಗೆ ಕೈಗನ್ನಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಡುಬಿದ್ರಿಗೆ ಪತ್ಯೇಕ ಆಂಬ್ಯುಲೆನ್ಸ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ತುರ್ತು ಸೇವೆಗೆ ಅಗತ್ಯ
ತುರ್ತು ಸಂದರ್ಭ ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳುವಂತಾಗಿದೆ. ಸರಕಾರಿ 108 ಆ್ಯಂಬ್ಯುಲೆನ್ಸ್ ಸೇವೆ ಅಗತ್ಯವಿದ್ದು ಕೂಡಲೇ ಪಡುಬಿದ್ರಿಯಲ್ಲಿ ಶುರುವಾಗಬೇಕು.
– ಶ್ರೀಕಾಂತ್ ಪಡುಬಿದ್ರಿ, ಕ್ಲಿನಿಕಲ್ ಲ್ಯಾಬ್ ಮಾಲಕ
– ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
UV Fusion: ಜೀವನವನ್ನು ಪ್ರೀತಿಸೋಣ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್