ಮೊಬೈಲ್‌ ಬಳಸಿ ದಾರಿ ತಪ್ಪಿಸುತ್ತಿದ್ದ ದರೋಡೆಕೋರರು


Team Udayavani, Apr 13, 2018, 9:50 AM IST

Robbery-Symbolic-600.jpg

ಉಪ್ಪಿನಂಗಡಿ: ನಾಲ್ಕು ತಿಂಗಳ ಹಿಂದೆ ಧರ್ಮಸ್ಥಳ ಗ್ರಾಮದ ಪಟ್ರಮೆ ರಸ್ತೆಯ ದೇಂತನಾಜೆಯ ನಾಗೇಂದ್ರ ಪ್ರಸಾದ್‌ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫ‌ಲವಾಗಿರುವುದರಿಂದಲೇ ಪುತ್ತೂರಿನ ಕೆದಿಲ ಹಾಗೂ ಉಪ್ಪಿನಂಗಡಿಯ ಇಚ್ಲಂಪಾಡಿಯಲ್ಲಿ ದರೋಡೆ ನಡೆಯುವಂತಾಗಿದೆ. ಈಗ ಉಪ್ಪಿನಂಗಡಿ ಪೊಲೀಸರು ದರೋಡೆಕೋರರನ್ನು ಬಂಧಿಸುವ ಮೂಲಕ ಶ್ಲಾಫ‌ನೆಗೆ ಪಾತ್ರರಾಗಿದ್ದಾರೆ.

2017 ನ. 29ರಂದು ಸಾಯಂಕಾಲ ಪೇಟೆಗೆ ಹೋಗಿದ್ದ ನಾಗೇಂದ್ರ ಪ್ರಸಾದ್‌ ಕತ್ತಲಾಗುತ್ತಿದ್ದಂತೆ ಮನೆಗೆ ಮರಳಿದ್ದರು. ಅವರು ಬೀಗ ತೆರೆದು ಒಳ ಪ್ರವೇಶಿಸುತ್ತಿದ್ದಂತೆಯೇ ಹಿತ್ತಿಲಿನಲ್ಲಿ ಅಡಗಿದ್ದ ಮೂವರು ದರೋಡೆಕೋರರು ಒಳ ನುಗ್ಗಿ ನಾಗೇಂದ್ರ ಪ್ರಸಾದ್‌ನನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಬಟ್ಟೆಯಿಂದ ಕಟ್ಟಿ ಹಾಕಿದ್ದರು. ಪಿಸ್ತೂಲ್‌ ಹಾಗೂ ಚೂರಿ ತೋರಿಸಿ ಹಣ ನೀಡುವಂತೆ ಆಗ್ರಹಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಮನೆಯನ್ನು ಜಾಲಾಡಿ 40 ಸಾ.ರೂ., 60 ಸಾವಿರ ರೂ ಮೌಲ್ಯದ ಚಿನ್ನಾಭರಣ, ಮೊಬೈಲ್‌ ಸೆಟ್‌, ಪಿನ್‌  ನಂಬರ್‌ ಸಹಿತ ಎಟಿಎಂ ಕಾರ್ಡ್‌ ಅನ್ನು ಒಯ್ದಿದ್ದರು. ದರೋಡೆಕೋರರು ತಮ್ಮ ವಾಹನದಲ್ಲಿ ನೆಲ್ಯಾಡಿಗೆ ಹೋಗಿ ಅಲ್ಲಿನ ಫೆಡರಲ್‌ ಬ್ಯಾಂಕಿನ ಎಟಿಎಂನಿಂದ ಸ್ವಲ್ಪ ಹಣ ಪಡೆದರು. ಬಳಿಕ ಉಪ್ಪಿನಂಗಡಿಗೆ ಬಂದು ಅಲ್ಲಿನ ಕರ್ಣಾಟಕ ಬ್ಯಾಂಕ್‌ ಎಟಿಎಂನಿಂದ ಆ ದಿನದ ಕೋಟಾದ ಉಳಿಕೆ ಮೊತ್ತವನ್ನು ಪಡೆದು ನೆಲ್ಯಾಡಿಗೆ ಹಿಂದಿರುಗಿ, ಬಳಿಕ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿ ಕೇರಳಕ್ಕೆ ಪ್ರಯಾಣಿಸಿದ್ದರು.

ಮಿಕ್ಸಿ ಗ್ರ್ಯೆನ್ಡರ್‌ ಮಾರಾಟ ನೆಪದಲ್ಲಿ ಸಮೀಕ್ಷೆ
ಮನೆ ಮನೆಗಳಿಗೆ ಮಿಕ್ಸಿ ಗ್ರ್ಯೆನ್ಡಡರ್‌ ಮಾರಾಟ, ಹಳೆ ಮಿಕ್ಸಿಗೆ ಹೊಸ ಮಿಕ್ಸಿ ಗ್ರ್ಯೆನ್ಡಡರ್‌ ಬದಲಾಯಿಸುವ ಆಫ‌ರ್‌ಗಳೊಂದಿಗೆ ಮನೆ ಮನೆ ಭೇಟಿ ನೀಡುವ ಈ ದರೋಡೆಕೋರರು ನಿರ್ಜನ ಪ್ರದೇಶ, ಅಲ್ಲಿನ ಶ್ರೀಮಂತರ ಮನೆ ಹಾಗೂ ಅಲ್ಲಿರುವ ಸದಸ್ಯರ ಮಾಹಿತಿ ಸಂಗ್ರಹಿಸುತ್ತಿದ್ದರು. ತಾವು ಯಾವುದೇ ಮನೆಗೆ ನುಗ್ಗಿದರೂ ಕೂಡಲೇ ಅಲ್ಲಿನ ಟಿವಿ ಧ್ವನಿಯನ್ನು ಹೆಚ್ಚಿಸುತ್ತಿದ್ದರು. ಮಾತ್ರವಲ್ಲದೆ ಪ್ರತಿ ಊರಿನಲ್ಲೂ ಮಾಹಿತಿದಾರರನ್ನು ಹಾಗೂ ವಾಹನ ಸೌಲಭ್ಯವನ್ನು ಒದಗಿಸುವ ನೆಟ್‌ ವರ್ಕ್‌ ಹೊಂದಿದ್ದರು.

ಆಟಿಕೆ ಪಿಸ್ತೂಲ್‌
ಇವರು ಬಳಸುವ ಪಿಸ್ತೂಲ್‌ ಸಹಿತ ಮಾರಕಾಯುಧಗಳೆಲ್ಲವೂ ಅಟಿಕೆಯದ್ದಾಗಿದ್ದು, ಪ್ರತಿ ಕೃತ್ಯದ ಬಳಿಕ ಅದನ್ನು ಎಸೆಯುತ್ತಿದ್ದರು. ಕೇರಳದ ತ್ರಿಶ್ಶೂರ್‌ನ ಸಲಾಂ, ಇಲ್ಯಾಸ್‌, ನೆಲ್ಸನ್‌  ಅವರೇ ಇಂಥ ಚಾಣಾಕ್ಷ ದರೋಡೆಕೋರರು. ಇವರನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ವಿಫ‌ಲರಾಗಿದ್ದರೂ ಉಪ್ಪಿನಂಗಡಿ ಎಸ್ಸ್ಯೆ ನಂದಕುಮಾರ್‌ ಮತ್ತವರ ಅಪರಾಧ ಪತ್ತೆ ದಳ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿದೆ.

ಕದ್ದ ಮೊಬೈಲ್‌ ಸಿಮ್‌ನಲ್ಲಿ ದಾರಿ ತಪ್ಪಿಸುತ್ತಿದ್ದರು!
ಮೊಬೈಲ್‌ ಕದ್ದು ಕೊಂಡೊಯ್ದರೆ ಪೊಲೀಸರ ಕೈಗೆ ಸಿಕ್ಕಿಬೀಳಲು ಸುಲಭವಾಗುತ್ತದೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ತಂತ್ರ ಈ ದರೋಡೆಕೋರರದ್ದು. ನೆಲ್ಯಾಡಿಯಿಂದ ಮಂಗಳೂರಿಗೆ ಬಂದು ಅಲ್ಲಿನ ಬಿಗ್‌ ಬಜಾರ್‌ನಿಂದ ಕಡಿಮೆ ಬೆಲೆಯ ಮೊಬೈಲ್‌ ಸೆಟ್‌ ಖರೀದಿಸಿ ತಾವು ದರೋಡೆ ನಡೆಸಿ ತಂದಿದ್ದ ಮೊಬೈಲ್‌ನಲ್ಲಿದ್ದ ಎರಡು ಸಿಮ್‌ಗಳನ್ನು ಪ್ರತ್ಯೇಕಿಸಿ ಎರಡು ಸೆಟ್‌ಗಳಿಗೆ ಹಾಕಿ ಅವುಗಳ ಪೈಕಿ ಒಂದನ್ನು ಶಿರಸಿ ಬಸ್ಸಿನ ಸೀಟಿನಡಿಯಲ್ಲಿ ಹಾಗೂ ಇನ್ನೊಂದನ್ನು ತಮಿಳುನಾಡಿಗೆ ಸಂಚರಿಸುವ ಬಸ್ಸಿನಲ್ಲಿ ಹಾಕಿ ಕೇರಳಕ್ಕೆ ಹೋಗಿದ್ದರು. ಸಾಮಾನ್ಯವಾಗಿ ಮೊಬೈಲ್‌ ನೆಟ್‌ವರ್ಕ್‌ ಆಧರಿಸಿ ಪೊಲೀಸ್‌ ತನಿಖೆ ನಡೆಯುತ್ತದೆ ಎನ್ನುವುದನ್ನು ಅರಿತಿದ್ದ ಇವರು ಪೊಲೀಸರನ್ನು ಶಿರಸಿ ಹಾಗೂ ತಮಿಳುನಾಡಿನೆಲ್ಲೆಡೆ ಅಲೆಯುವಂತೆ ಮಾಡಿದ್ದರು.

ಟಾಪ್ ನ್ಯೂಸ್

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Untitled-1

ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.