ಮೂರ್ತಿ ಪೂಜೆಗಿಂತ ಆದರ್ಶ ಪಾಲಿಸಿ
Team Udayavani, Apr 16, 2018, 1:03 PM IST
ಕಲಬುರಗಿ: ಮೂರ್ತಿ ಪೂಜೆಗಿಂತ ಮೊದಲು ಮಹಾಪುರುಷರ ಆದರ್ಶ ಪಾಲಿಸುವುದು ಅಗತ್ಯವಾಗಿದೆ ಎಂದು ಎನ್.ವಿ. ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಹೇಮಂತ ಕೊಲ್ಹಾಪೂರ ತಿಳಿಸಿದರು.
ನಗರದ ಎನ್.ವಿ. ಸಂಸ್ಥೆಯ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಹಮ್ಮಿಕೊಂಡಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರರ 127ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾಪುರುಷರನ್ನು ದೇವರು ಎಂದು ತಿಳಿಯದೇ ಅವರ ಗುಣಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಬೇಕಾದರೆ, ವೈಚಾರಿಕ ಕ್ರಾಂತಿಯಾಗಬೇಕು. ವಿಚಾರಗಳನ್ನು ತಿಳಿ ಹೇಳಲಾಗಿದ್ದರೂ, ಅವುಗಳ ಆಚರಣೆಗಳು ಬಾಕಿ ಉಳಿದಿವೆ ಎಂದರು.
ಉಪಪ್ರಾಚಾರ್ಯ ಡಾ| ಆನಂದತೀರ್ಥ ಕಿತ್ತೂರ, ಪತ್ರಕರ್ತ ಸಂಗಮನಾಥ ಆರ್. ರೇವತಗಾಂವ ಅಂಬೇಡ್ಕರ ಕುರಿತು ಮಾತನಾಡಿದರು. ಸರ್ಕಾರಿ ಪದವಿ ಕಾಲೇಜನ ಇತಿಹಾಸ ಪ್ರಾಧ್ಯಾಪಕ ಡಾ| ಸರ್ವೋದಯ ಶಿವಪುತ್ರ ಅತಿಥಿ ಉಪನ್ಯಾಸಕರಾಗಿ ಅಂಬೇಡ್ಕರ್ರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಪವನಕುಮಾರ ಹೂಗಾರ ಪ್ರಾರ್ಥಿಸಿದರು. ಡಾ| ದಯಾನಂದ ಶಾಸ್ತ್ರೀ ಸ್ವಾಗತಿಸಿದರು. ಡಾ| ಕಾಶೀನಾಥ ನೂಲಕರ್ ಪರಿಚಯಿಸಿದರು. ಪ್ರೊ| ಉದಯಕುಮಾರ ದೇಶಮುಖ ನಿರೂಪಿಸಿದರು. ಪ್ರೊ| ಯು.ಜಿ. ಸರದೇಶಪಾಂಡೆ ವಂದಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಡಾ| ಕಾಶೀನಾಥ ನೂಲಕರ್ ನಗದು ಬಹುಮಾನ ವಿತರಿಸಿದರು. ಡಾ| ಗುರುರಾಜ ದಂಡಾಪೂರ, ಸುಖೇಶ ದೇಶಮುಖ, ನಾಗರಾಜ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಸೂರ್ಯಕಾಂತ ಸುಜ್ಯಾತ್ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ