ಇನ್ನು ಖಾತಾ ಕೂಡ ಆನ್‌ಲೈನ್‌ನಲ್ಲೇ


Team Udayavani, Apr 17, 2018, 12:07 PM IST

innu-khata.jpg

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಒಂಧು ಸೈಟು ಖರೀದಿಸಿ, ಅದರಲ್ಲೊಂದು ಮನೆ ಕಟ್ಟುವುದೇ ಹರಸಾಹಸ. ಅದರಲ್ಲೂ ಕಟ್ಟಡಕ್ಕೆ ಸಂಬಂಧಿಸಿದ ನಕ್ಷೆ, ಖಾತಾ ಮತ್ತಿತರ ಅಗತ್ಯ ಪತ್ರಗಳಿಗಾಗಿ ಪಾಲಿಕೆ ಕಚೇರಿಗೆ ಅಲೆಯುವ ಗೋಳು ಅನುಭವಿಸಿದವರಿಗೇ ಗೊತ್ತು. ಪಾಲಿಕೆ ಕಚೇರಿಗೆ ಹೋದಾಗಲೆಲ್ಲಾ ಒಂದೊಂದು ದಾಖಲೆ ಮಿಸ್ಸಾಗಿದೆ ಎನ್ನುವ ಅಧಿಕಾರಿಗಳ ಮಾತು ಕೇಳಿ ನೀವು ರೋಸಿಹೋಗಿದ್ದರೆ, ನಿಮಗೊಂದು ಖೂಷಿ ಸುದ್ದಿಯಿದೆ.

ಈಗಾಗಲೇ ಕಟ್ಟಡದ ನಕ್ಷೆ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಿರುವ ಬಿಬಿಎಂಪಿ, ಇದೀಗ ಕಟ್ಟಡದ ಖಾತಾ ಪಡೆಯುವಿಕೆಯನ್ನೂ ಆನ್‌ಲೈನ್‌ ವ್ಯವಸ್ತೆ ವ್ಯಾಪ್ತಿಗೆ ತರಲು ಮುಂದಾಗಿದೆ. ಜನರು ಅನಗತ್ಯವಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದು, ಅಧಿಕಾರಿಗಳಿಗೆ ಲಂಚ ನೀಡುವುದನ್ನು ತಪ್ಪಿಸುವ ಸದುದ್ದೇಶದೊಂದಿಗೆ ಖಾತಾ ಸೇವೆಗಳನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಪ್ರಸ್ತುತ ಬಿಬಿಎಂಪಿಯಿಂದ ಖಾತಾ ಸೇವೆಗಳನ್ನು ಪಡೆಯಲು ಹತ್ತಾರು ದಿನ ಕಚೇರಿಗಳಿಗೆ ಅಲೆಯಬೇಕು. ಜತೆಗೆ ಲಂಚ ನೀಡಿದವರಿಗೆ ಮಾತ್ರ ಖಾತಾ ದೊರೆಯುತ್ತಿದ್ದು, ಹಣ ನೀಡದಿದ್ದರೆ ಖಾತಾ ದೊರೆಯುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ಜತೆಗೆ ಖಾತಾ ನೀಡುವಲ್ಲಿ ಪಾಲಿಕೆ ಅಧಿಕಾರಿಗಳು ಎಸಗುತ್ತಿರುವ ಅಕ್ರಮಗಳ ಕುರಿತು ಪಾಲಿಕೆ ಸದಸ್ಯರು ಹಲವಾರು ಬಾರಿ ಕೌನ್ಸಿಲ್‌ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಆಕ್ರೋಶ ಹೊರಹಾಕಿದ್ದೂ ಆಗಿದೆ.

ಈ ಎಲ್ಲ ಆರೋಪ, ಆಕ್ರೋಶಗಳ ಹಿನ್ನೆಲೆಯಲ್ಲಿ ಜನರಿಗೆ ಸುಲಭ ಮತ್ತು ಶೀಘ್ರವಾಗಿ ಖಾತಾ ದೊರೆಯುವಂತೆ ಮಾಡಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ಆನ್‌ಲೈನ್‌ ಮೂಲಕವೇ ಖಾತಾ ಸೇವೆಗಳನ್ನು ಕಲ್ಪಿಸಲು ಮುಂದಾಗಿದ್ದಾರೆ. ಈಗಾಗಲೇ ಪಾಲಿಕೆಯಿಂದ ಜಾರಿಗೊಳಿಸಿರುವ ಆನ್‌ಲೈನ್‌ ಖಾತಾ ವರ್ಗಾವಣೆ ಸೇವೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಉಳಿದ ಸೇವೆಗಳನ್ನು ಆನ್‌ಲೈನ್‌ಗೆ ತರಲು ಪಾಲಿಕೆ ತೀರ್ಮಾನಿಸಿದೆ. 

ಈಗಾಗಲೇ ಕಟ್ಟಡ ನಕ್ಷೆ, ಸ್ವಾಧೀನಾನುಭವ ಪ್ರಮಾಣ ಪತ್ರ ಹಾಗೂ ಆರಂಭಿಕ ಪ್ರಮಾಣ ಪತ್ರಗಳ ವಿತರಣೆ ಆನ್‌ಲೈನ್‌ಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಬಿಬಿಎಂಪಿ, ಇದೀಗ ಹೊಸ ಖಾತಾ ನೋಂದಾಣಿ, ಖಾತಾ ವಿಭಜನೆ ಹಾಗೂ ಖಾತಾ ಜೋಡಣೆಯಂತಹ ಸೇವೆಗಳನ್ನು ಆನ್‌ಲೈನ್‌ಗೊಳಿಸುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಮುಂದಾಗಿದೆ. 

ಖಾತಾ ವಿಭಜನೆ: ಬಿಡಿಎ, ಕರ್ನಾಟಕ ಗೃಹ ಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಸಂಸ್ಥೆ, ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ ಮಂಜೂರು ಮಾಡಿದ ಹಾಗೂ ಕಂದಾಯ ಪಾಕೆಟ್ಸ್‌, ಅನುಮೋದಿತ ಬಡಾವಣೆ (ನಿವೇಶನ), ಅನುಮೋದಿತ ಕಟ್ಟಡ (ಅಪಾರ್ಟ್‌ಮೆಂಟ್‌) ಮತ್ತು ಗ್ರಾಮಠಾಣಾದಲ್ಲಿರುವ ಆಸ್ತಿಗಳಿಗೆ ಖಾತಾ ವಿಭಜನೆ ಮಾಡಿಕೊಡಲಾಗುತ್ತದೆ. 

ಹೊಸ ಖಾತಾ ನೋಂದಣಿ: ಬಿಡಿಎ, ಕರ್ನಾಟಕ ಗೃಹ ಮಂಡಳಿ ಮತ್ತು ಇನ್ನಿತರ ಸರ್ಕಾರಿ ಪ್ರಾಧಿಕಾರವು ಹಂಚಿಕೆ ಮಾಡಿದ (ಗ್ರಾಮ ಠಾಣಾ ಹೊರತುಪಡಿಸಿ), ಬಿಡಿಎ ಅನುಮೋದಿತ ಬಡಾವಣೆ ಮತ್ತು ಬಿಡಿಎ ರೀ ಕನ್ವೇಡ್‌ ಬಡಾವಣೆಯಲ್ಲಿನ ಆಸ್ತಿಗಳಿಗೆ ಖಾತಾ ನೋಂದಣಿ ಮಾಡಲಾಗುತ್ತದೆ. 

30 ದಿನಗಳಲ್ಲಿ ಖಾತಾ ಕೈಗೆ: ಖಾತಾ ಸೇವೆಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವವರಿಗೆ ಕಾಲಮಿತಿಯೊಳಗೆ ಸೇವೆ ಒದಗಿಸುವ ಯೋಜನೆಯನ್ನು ಪಾಲಿಕೆ ಹೊಂದಿದ್ದು, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಅರ್ಜಿದಾರರಿಗೆ ಖಾತಾ ದಾಖಲೆ ದೊರೆಯುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಅದರಂತೆ 30 ದಿನದೊಳಗೆ ಪಾಲಿಕೆ ಅಧಿಕಾರಿಗಳು ಅರ್ಜಿಗಳ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅರ್ಜಿ ವಿಲೇವಾರಿ ಮಾಡದಿದ್ದರೆ ಅದಕ್ಕೆ ಸಮರ್ಪಕ ಕಾರಣ ನೀಡಬೇಕಾಗುತ್ತದೆ.

ಸುಧಾರಣಾ ಶುಲ್ಕ ಪಾವತಿ ಕಡ್ಡಾಯ: ಪಾಲಿಕೆಯಿಂದ ಹೊಸದಾಗಿ ಖಾತಾ ನೋಂದಣಿ, ಖಾತಾ ವಿಭಜನೆ ಹಾಗೂ ಖಾತಾ ಜೋಡಣೆ ಬಯಸುವ ಆಸ್ತಿ ಮಾಲೀಕರು ಕಡ್ಡಾಯವಾಗಿ ಸುಧಾರಣಾ ಶುಲ್ಕ ಪಾವತಿಸಬೇಕು. ಇಲ್ಲವೆ, ನಿಗದಿತ ಸಮಯದೊಳಗೆ ಶುಲ್ಕ ಪಾವತಿಸಲು ಅಧಿಕಾರಿಗಳು ಕಾಲಾವಕಾಶ ನೀಡುತ್ತಾರೆ.

ಸುಮೋಟೋ ಮೂಲಕ ವರ್ಗಾವಣೆ: ಅಪಾರ್ಟ್‌ಮೆಂಟ್‌ಗಳ ಸಂದರ್ಭದಲ್ಲಿ ಸ್ವತ್ತಿನ ಖಾತಾ ವಿಭಜನೆಯಾಗಿಲ್ಲವೆಂಬ ಕಾರಣ ನೀಡಿ ಖಾತಾ ವರ್ಗಾವಣೆಯ ಅರ್ಜಿಯನ್ನು ಅಧಿಕಾರಿಗಳು ತಿರಿಸ್ಕರಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳು ಸುಮೋಟೋ ಆಧಾರದ ಮೇಲೆ ಸ್ವತ್ತಿನ ಖಾತಾ ವಿಭಜನೆ ಮಾಡಿ ಅರ್ಜಿದಾರರಿಗೆ ಖಾತಾ ವರ್ಗಾವಣೆ ಮಾಡಿಕೊಡಬೇಕು. 

ಖಾತಾ ವರ್ಗಾವಣೆ ಅರ್ಜಿಗಳ ಸ್ಥಿತಿಗತಿ
-ಸ್ವೀಕರಿಸಿದ ಒಟ್ಟು ಅರ್ಜಿಗಳು    5909
-ಅನುಮತಿ ನೀಡಿರುವುದು        685
-ತಿರಸ್ಕೃತ ಅರ್ಜಿಗಳು    812
-ಪರಿಶೀಲನಾ ಹಂತದ ಅರ್ಜಿಗಳು    1253
-ಶುಲ್ಕ ಪಾವತಿಸಿದವರು    725
-ಬಾಕಿಯಿ ಇರುವ ಅರ್ಜಿಗಳು    2069
-ಸ್ಥಳ ಪರಿಶೀಲನೆ ನಡೆಸಿರುವುದು    50
-ಪ್ರಮಾಣ ಪತ್ರ ವಿತರಣೆ ಹಂತ    201

ಪಾಲಿಕೆಯಿಂದ ಜಾರಿಗೊಳಿಸಿದ ಆನ್‌ಲೈನ್‌ ಖಾತಾ ವರ್ಗಾವಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಎಲ್ಲ ಖಾತಾ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ. ಇದರಿಂದಾಗಿ ಜನರಿಗೆ ಸುಲಭ ಹಾಗೂ ಶೀಘ್ರವಾಗಿ ಖಾತಾ ದೊರೆಯಲಿದ್ದು, ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ. ಆನ್‌ಲೈನ್‌ ಖಾತಾ ಸೇವೆಗಳ ಕುರಿತು ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.