ನಿಷೇಧಿತ ಮಾದಕ ವಸ್ತು ಪತ್ತೆ
Team Udayavani, Apr 19, 2018, 12:35 PM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6.45 ಕೋಟಿ ರೂ. ಮೌಲ್ಯದ 12.9 ಕೆ.ಜಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ಚೆನ್ನೈನಿಂದ ಮಲೇಷಿಯಾ ಹಾಗೂ ಕೌಲಾ ಲಂಪುರಕ್ಕೆ ಹೋಗುವ ಕೆಲ ಪಾರ್ಸಲ್ಗಳು ವಿಮಾನ ನಿಲ್ದಾಣ ಕಾರ್ಗೊ ಕೋರಿಯರ್ ವಿಭಾಗಕ್ಕೆ ಬಂದಿತ್ತು. ಈ ಪಾರ್ಸಲ್ಗಳ ಮೇಲೆ “ಪಾಮ್ ಶುಗರ್’ ಹಾಗೂ ಇದರ ಮೌಲ್ಯ 6 ಸಾವಿರ ಎಂದು ಬರೆಯಲಾಗಿತ್ತು. ಇದರಿಂದ ಅನುಮಾನಗೊಂಡ ವಿಮಾನ ನಿಲ್ದಾಣದ ಕೋರಿಯರ್ ವಿಭಾಗದ ಅಧಿಕಾರಿಗಳು, ಪರಿಶೀಲಿಸಿದಾಗ ನಿಷೇಧಿತ ಮೆಥಾಕ್ಯೂಲೋನ್ ಎಂಬ ಮಾದಕ ವಸ್ತು ಪತ್ತೆಯಾಗಿದೆ. ಇದರ ಮೌಲ್ಯ 6.45 ಕೋಟಿ ಎಂದು ಅಂದಾಜಿಸಲಾಗಿದೆ.
ಚೆನ್ನೈ ಮೂಲದ ವ್ಯಕ್ತಿ ಫೆಡೆಕ್ಸ್ ಕೋರಿಯರ್ ಮೂಲಕ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮಲೇಷಿಯಾ ಹಾಗೂ ಕೌಲಾಂಪುರಕ್ಕೆ ಈ ಮಾದಕ ವಸ್ತು ಕಳುಹಿಸಲು ಸಂಚು ರೂಪಿಸಿದ್ದ. ಈ ಸಂಬಂಧ ಆ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೇಗೆ ರಫ್ತು?: ನಿಷೇಧಿತ ಮಾದಕ ವಸ್ತು ರವಾನಿಸಲು ಆರೋಪಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಪಾಮ್
ಶುಗರ್ ಎಂಬ ಪ್ಯಾಕೆಟ್ನಲ್ಲಿ ನಿಷೇಧಿತ ಮೆಥಾಕ್ಯೂಲೋನ್ ಅನ್ನು ಸಣ್ಣ-ಸಣ್ಣ ಪ್ಲಾಸ್ಟಿಕ್ ಕವರ್ಗಳಲ್ಲಿ ತುಂಬಿ ಪಾಮ್ ಶುಗರ್ ಜತೆ ಪ್ಯಾಕ್ ಮಾಡಿದ್ದರು.
ಎರಡು ಪ್ರಕರಣ, ಒಂದೇ ಕೊರಿಯರ್ ಕಂಪನಿ: ಜನವರಿ ಮೊದಲ ವಾರದಲ್ಲಿ ಭಾರತೀಯ ಸಿಹಿ ತಿಂಡಿಗಳ ಪ್ಯಾಕೆಟ್ಗಳಲ್ಲಿ ಕೆಟಾಮಿನ್ ಎಂಬ ಮಾದಕ ವಸ್ತು ಇಟ್ಟು ಮಲೇಷಿಯಾ ಹಾಗೂ ಕೌಲಾಂಪುರಕ್ಕೆ ಕಳುಹಿಸಲು ಆರೋಪಿಗಳ ಸಂಚು ರೂಪಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಒಂದು ಕೋಟಿ ರೂ. ಮೌಲ್ಯದ ಕೆಟಾಮಿನ್ ವಶಪಡಿಸಿಕೊಂಡಿದ್ದರು. ಮತ್ತೂಂದು
ಪ್ರಮುಖ ವಿಷಯವೆಂದರೆ, ಈ ಎರಡು ಪ್ರಕರಣದಲ್ಲೂ ಚೆನ್ನೈನ ಫೆಡೆಕ್ಸ್ ಎಂಬ ಕೋರಿಯರ್ ಮೂಲಕವೇ ರಫ್ತು ಆಗುತ್ತಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ