ಉದ್ಯಮ ಯಶಸ್ವಿಯಾಗಲು ಸೇವೆಯೇ ಮುಖ್ಯ
Team Udayavani, Apr 20, 2018, 5:31 PM IST
ಧಾರವಾಡ: ಒಬ್ಬ ಯಶಸ್ವಿ ನವೋದ್ಯಮಿಯಾಗಲು ಲಾಭದ ಗೃಹಿಕೆಯೇ ಮುಖ್ಯವಲ್ಲ, ಗ್ರಾಹಕರಿಗೆ ಅತ್ಯುತ್ತಮ ಸೇವೆ
ನೀಡುವುದು ಮುಖ್ಯವಾಗಿರುತ್ತದೆ ಎಂದು ನೇಚರ್ ಫಸ್ಟ್ ಇಕೋ ವಿಲೇಜಿನ ಪ್ರಧಾನ ಸೇವಕ ಪ್ರಕಾಶ ಗೌಡರ ಹೇಳಿದರು.
ಇಲ್ಲಿಯ ಕೃಷಿ ವಿವಿಯ ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಇಕೋವಿಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಯಶಸ್ವಿ ನವೋದ್ಯಮಿ ಕಾರ್ಯಗಾರ ಮತ್ತು ಹೊಸ ವಿಚಾರಗಳು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಯುವ ಜನಾಂಗ ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಆರ್ಥಿಕವಾಗಿ ಸುರಕ್ಷತೆ ಇರುವ ನೌಕರಿ ಪಡೆಯಲು ಹಂಬಲಿಸುತ್ತಾರೆ. ಆರ್ಥಿಕ ಸುರಕ್ಷತೆಯ ಹುಡುಕಾಟದಲ್ಲಿ ತಮ್ಮ ಸ್ವಶಕ್ತಿಯನ್ನೇ ಮರೆತು ಬಿಡುತ್ತಾರೆ. ಯಾವಾಗ ನೌಕರಿಯಲ್ಲಿ ಸಮಾಧಾನ ಕಾಣುವುದಿಲ್ಲವೋ ಆಗ ಸ್ವಂತ ಉದ್ಯೋಗದ ಯೋಚನೆ ಬರುತ್ತದೆ. ಆದರೆ ಆಗ ಸಮಯ ಮೀರಿ ಹೋಗಿರುತ್ತದೆ. ಹೀಗಾಗಿ, ಸ್ವಂತ ಉದ್ಯೋಗ ಮಾಡಬೇಕೆನ್ನುವ ಯುವಜನತೆ ಮುಖ್ಯವಾಗಿ ದೃಢ ನಿರ್ಧಾರ ಮಾಡಬೇಕು ಎಂದರು. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕುಟುಂಬ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥರಾದ ಡಾ| ಸುಮಾಹಾಸಲಕರ ಮಾತನಾಡಿದರು. ವಿದ್ಯಾರ್ಥಿಗಳಾದ ಹಾಲಪ್ಪ ಹಾಗೂ ಪ್ರೇಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು. ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕರಾದ ರಮ್ಯಾ ಬಡಿಗನ್ನವರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್ಚಂದ್ರ ಅವರಿಂದ ಚಿಕಿತ್ಸೆ
MUST WATCH
ಹೊಸ ಸೇರ್ಪಡೆ
Sikandar Movie: ಸಲ್ಮಾನ್ ಖಾನ್ ʼಸಿಕಂದರ್ʼಗೆ ರಶ್ಮಿಕಾ ಮಂದಣ್ಣ ನಾಯಕಿ
SSLC Result: ಉದಯವಾಣಿ ಪತ್ರಿಕೆಯ ಬೈಕ್ ರೂಟ್ ವಿತರಕನ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್
UV Fusion: ವ್ಯಾಪ್ತಿ ಪ್ರದೇಶದ ಹೊರಗೆ
Floor Test: ವಿಶ್ವಾಸ ಮತ ಸಾಬೀತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಬರೆದ ದುಷ್ಯಂತ್ ಚೌಟಾಲ
Delhi Police; ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಗೆ ಸೇರಿದ 9 ಜನರ ಬಂಧನ