ಅನ್ನನಾಳ ಸಮಸ್ಯೆ: ಇಬ್ಬರಿಗೆ ಯಶಸ್ವೀ ಚಿಕಿತ್ಸೆ
Team Udayavani, Apr 23, 2018, 6:00 AM IST
ಮಂಗಳೂರು: ಅನ್ನನಾಳದಲ್ಲಿ ಉಂಟಾದ ಸಮಸ್ಯೆಯಿಂದಾಗಿ ಹಲವು ಸಮಯಗಳಿಂದ ಆಹಾರ ಸೇವನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಇಬ್ಬರು ರೋಗಿಗಳು ನಗರದ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ಅಪರೂಪದ ಚಿಕಿತ್ಸೆಗೊಳಪಟ್ಟು ಗುಣ ಮುಖರಾಗಿದ್ದಾರೆ.
ಕೆಲದಿನಗಳ ಹಿಂದೆ, ಅನ್ನನಾಳ ಮುಚ್ಚಿಕೊಂಡ ರೀತಿಯಲ್ಲಿ ಇದ್ದುದರಿಂದ ಆಹಾರ ಸೇವನೆಯ ಸಂದರ್ಭ ತೊಂದರೆ ಅನುಭವಿಸುತ್ತಿದ್ದ ಇಬ್ಬರು ರೋಗಿಗಳು ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ| ಬಿ.ವಿ. ತಂತ್ರಿ ಹಾಗೂ ಡಾ| ಅನುರಾಗ್ ಜೆ. ಶೆಟ್ಟಿ ಬಳಿ ಬಂದಿದ್ದರು. ಪರೀಕ್ಷೆಗೊಳಪಡಿಸಿದಾಗ ಸಮಸ್ಯೆ ಆರಿತ ವೈದ್ಯರು ರೋಗಿಗಳನ್ನು ಪರ್ ಓರಲ್ ಎಂಡೋಸ್ಕೋಪಿಕ್ ಮ್ಯೋಟಮಿ ಎಂಬ ಚಿಕಿತ್ಸೆಗೊಳಪಡಿಸಿ ದರು. ಆಸ್ಪತ್ರೆಯ ತಜ್ಞ ವೈದ್ಯ ಡಾ| ವಿಕಾಸ್ ಸಿಂಗ್ಲಾ ಅವರ ಮಾರ್ಗ ದರ್ಶನದಲ್ಲಿ ನಡೆದ ಈ ಚಿಕಿತ್ಸೆ, ಕರಾವಳಿ ಕರ್ನಾಟಕದಲ್ಲಿ ಮಾಡಿದ ಮೊದಲ ಚಿಕಿತ್ಸೆಯಾಗಿದೆ.
ಅನ್ನನಾಳದಲ್ಲಿ ಚಿಕ್ಕ ರಂಧ್ರದ ಮೂಲಕ ಈ ಶಸ್ತ್ರಚಿಕಿತ್ಸೆ ನೆರವೇರಿಸ ಲಾಗಿದ್ದು, ಈ ಚಿಕಿತ್ಸಾ ವಿಧಾನದಲ್ಲಿ ರೋಗಿ ಹಲವು ದಿನಗಳವರೆಗೆ ಆಸ್ಪತ್ರೆ ಯಲ್ಲೇ ಇದ್ದು ವಿಶ್ರಾಂತಿ ಪಡೆದು ಕೊಳ್ಳ ಬೇಕಾಗಿಲ್ಲ. ಚಿಕಿತ್ಸೆಯ ಸಂದರ್ಭ ರಕ್ತಸ್ರಾವವಾಗಲೀ, ಶಸ್ತ್ರಚಿಕಿತ್ಸೆಯ ಗಾಯದ ಗುರುತಾಗಲೀ ಕಾಣ ಸಿಗುವು ದಿಲ್ಲ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕರಾದ ಡಾ| ಆನಂದ ವೇಣುಗೋಪಾಲ್ ಅವರು ತಿಳಿಸಿ ದ್ದಾರೆ. ಇಂತಹ ಚಿಕಿತ್ಸೆ ಒದಗಿಸಲು ತಜ್ಞ ವೈದ್ಯರ ತಂಡ ಮತ್ತು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆ ಹೊಂದಿರುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ